ಅಙ್ಕೇ ನಿಧಾಯ ಸ ಕದಾಚಿದಮುಷ್ಯ ರಾಮಃ ಶಿಶ್ಯೇ ಶಿರೋ ವಿಗತನಿದ್ರ
ಉದಾರಬೋಧಃ ।
ಸಂಸುಪ್ತವತ್ ಸುರವರಃ ಸುರಕಾರ್ಯ್ಯಹೇತೋರ್ದ್ದಾತುಂ ಚ ವಾಲಿನಿಧನಸ್ಯ
ಫಲಂ ತದಸ್ಯ॥೧೫.೫೧॥
ಜ್ಞಾನವೇ ಮೈವೆತ್ತುಬಂದ, ನಿದ್ರೆಯಿಲ್ಲದ ಪರಶುರಾಮನು ಒಮ್ಮೆ
ಕರ್ಣನ ತೊಡೆಯಲ್ಲಿ ತಲೆಯಿಟ್ಟು, ನಿದ್ರೆಮಾಡಿದವನಂತೆ
ಮಲಗಿದ. ದೇವತೆಗಳ ಕಾರ್ಯವಾಗಿಸಲು ಹಾಗೂ ವಾಲಿಯನ್ನು ಕೊಂದ ಫಲವನ್ನು ಕರ್ಣನಿಗೆ ನೀಡಲೋಸುಗವೇ ಪರಶುರಾಮ ಈರೀತಿ ನಿದ್ರಿಸಿದವನಂತೆ
ಮಲಗಿದ.
ತತ್ರಾsಸ ರಾಕ್ಷಸವರಃ ಸ ತು ಹೇತಿನಾಮಾ ಕಾಲೇ ಮಹೇನ್ದ್ರಮನುಪಾಸ್ಯ ಹಿ ಶಾಪತೋsಸ್ಯ ।
ಕೀಟಸ್ತಮಿನ್ದ್ರ ಉತ ತತ್ರ ಸಮಾವಿವೇಶ ಕರ್ಣ್ಣಸ್ಯ ಶಾಪಮುಪಪಾದಯಿತುಂ
ಸುತಾರ್ತ್ಥೇ ॥೧೫.೫೨॥
ಆಗಲೇ, ಸೇವಾಕಾಲದಲ್ಲಿ
ಮಹೇಂದ್ರನನ್ನು ಸೇವಿಸದೇ ಇಂದ್ರನ ಶಾಪದಿಂದ ಕೀಟವಾಗಿರುವ ‘ಹೇತಿ’ ಎಂಬ ಅಸುರನು ಅವರ ಸಮೀಪದಲ್ಲೇ ಇದ್ದ.
ತನ್ನ ಮಗನಿಗಾಗಿ, ಕರ್ಣನಿಗೆ ಶಾಪವನ್ನು ಕೊಡಿಸಲು ಇಂದ್ರ ಆ ಕೀಟದೊಳಗೆ ಪ್ರವೇಶಮಾಡಿದ. [ಹೇತಿ
ಒಬ್ಬ ರಾಕ್ಷಸ, ಆದರೂ ದೈವಿಕ ಸ್ವಭಾವದಿಂದ ಇಂದ್ರನ ಸೇವಕನಾಗಿದ್ದ, ಸೇವೆ
ಮಾಡಬೇಕಾದ ಕಾಲದಲ್ಲಿ ಮರೆತಿದ್ದ ಕಾರಣದಿಂದ ಇಂದ್ರನಿಂದ ಶಾಪಕ್ಕೊಳಗಾಗಿ ಕೀಟರೂಪದಲ್ಲಿದ್ದ].
ಕರ್ಣ್ಣಃ ಸಕೀಟತನುಗೇನ ಕಿರೀಟಿನೈವ ಹ್ಯೂರೋರಧಸ್ತನತ ಓಪರಿಗಾತ್ವಚಶ್ಚ ।
ವಿದ್ಧಃ ಶರೇಣ ಸ ಯಥಾ ರುಧಿರಸ್ಯ ಧಾರಾಂ ಸುಸ್ರಾವ ತಂ ವಿಗತನಿದ್ರ ಇವಾsಹ ರಾಮಃ ॥೧೫.೫೩॥
ಕೀಟದ ದೇಹದ ಒಳಗಡೆ ಇರುವ ಇಂದ್ರನಿಂದಲೇ, ಕರ್ಣನ ತೊಡೆಯ
ಕೆಳಗಿನಿಂದ ಮೇಲಿನತನಕ ಬಾಣದಿಂದ ಸೀಳಿದಂತೆ ಕೊರೆಯಲ್ಪಟ್ಟಾಗ,
ಕರ್ಣ ರಕ್ತದ ಧಾರೆಯನ್ನು ಹರಿಸಿದ. ಆಗ ಪರಶುರಾಮನು ನಿದ್ರೆಯಿಂದ ಎಚ್ಚೆತ್ತವನಂತೆ ಎದ್ದು ಕರ್ಣನನ್ನು
ಕುರಿತು ಮಾತನಾಡಿದ:
ಕಿಂ ತ್ವಂ ನ ಚಾಲಯಸಿ ಮಾಂ ರುಧಿರಪ್ರಸೇಕೇ ಪ್ರಾಪ್ತೇsಪಿ ಪಾವನವಿರೋಧಿನಿ ಕೋsಸಿ ಚೇತಿ ।
ತಂ ಪ್ರಾಹ ಕರ್ಣ್ಣ ಇಹ ನೈವ ಮಯಾ ವಿಧೇಯೋ ನಿದ್ರಾವಿರೋಧ ಇತಿ ಕೀಟ
ಉಪೇಕ್ಷಿತೋ ಮೇ॥೧೫.೫೪ ॥
‘ಶುದ್ಧಿಗೆ ವಿರುದ್ಧವಾದ(ಪಾವಿತ್ರ್ಯಕ್ಕೆ ಪ್ರತಿಕೂಲವಾದ)
ರಕ್ತದ ಹೊಳೆಯಲ್ಲಿಯೂ ಕೂಡಾ ನೀನು ನನ್ನನ್ನು ಎಬ್ಬಿಸುವುದಲ್ಲವೇ ? ನನಗೆ ನಿನ್ನ ಮೇಲೆ ಅನುಮಾನ
ಬರುತ್ತಿದೆ. ಯಾರು ನೀನು’ ಎಂದು ಪ್ರಶ್ನಿಸುತ್ತಾನೆ ಪರಶುರಾಮ. ಆಗ ಕರ್ಣ
ಹೇಳುತ್ತಾನೆ: ‘ನನ್ನಿಂದಾಗಿ ನಿಮ್ಮ ನಿದ್ರಾಭಂಗವಾಗಕೂಡದು ಎಂದು ಕೀಟವನ್ನು ಉಪೇಕ್ಷಿಸಿದೆ’
ಎಂದು.
[ನರರಕ್ತ ಎನ್ನುವುದು ಕ್ಷತ್ರಿಯರಿಗೆ ಪಾವನವಾದರೂ ಕೂಡಾ, ಅದು
ಬ್ರಾಹ್ಮಣರಿಗೆ ಅಪವಿತ್ರ. ಕರ್ಣ ಬ್ರಾಹ್ಮಣನಾಗಿದ್ದರೆ ಅದನ್ನು ತಿಳಿದು ಪರಶುರಾಮನನ್ನು
ಎಬ್ಬಿಸಬೇಕಿತ್ತು. ಆದರೆ ಆತ ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ಪರಶುರಾಮನ ಶಿಷ್ಯನಾಗಿದ್ದ]
ಜಾತ್ಯಾsಸ್ಮಿ ಸೂತ ಉತ ತೇ ತನಯೋsಸ್ಮಿ ಸತ್ಯಂ ತೇನಾಸ್ಮಿ ವಿಪ್ರ
ಇತಿ ಭಾರ್ಗ್ಗವವಂಶಜೋsಹಮ್ ।
ಅಗ್ರೇsಬ್ರವಂ ಭವತ ಈಶ ನಹಿ ತ್ವದನ್ಯೋ ಮಾತಾ ಪಿತಾ ಗುರುತರೋ ಜಗತೋsಪಿ ಮುಖ್ಯಃ ॥೧೫.೫೫ ॥
ಜಾತಿಯಿಂದ ನಾನು ಸೂತನಾಗಿದ್ದೇನೆ ನಿಜ. ಆದರೆ ನಾನು ನಿನ್ನ
ಮಗನೂ ಆಗಿರುವುದು ಸತ್ಯ. ಆ ಕಾರಣದಿಂದ ನಾನು ಭೃಗುಕುಲದಲ್ಲಿ ಹುಟ್ಟಿದ ಬ್ರಾಹ್ಮಣ ಎಂದು ಹೇಳಿದೆ.
ಒಡೆಯನೇ, ನಿನಗಿಂತ ಅತಿರಿಕ್ತವಾಗಿ ಮಾತಾ, ಪಿತಾ, ಗುರು ಈ ಜಗತ್ತಿಗೆ ಇನ್ನಾರು? ಈ ಅಭಿಪ್ರಾಯವಿಟ್ಟು ನಾನು ನಿನ್ನ ತನಯ ಎಂದು ಹೇಳಿದೆ’ ಎನ್ನುತ್ತಾನೆ ಕರ್ಣ.
No comments:
Post a Comment