ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, July 31, 2020

Mahabharata Tatparya Nirnaya Kannada 17176_17180

ಜನಾರ್ದ್ದನಶ್ಚ ರುಗ್ಮಿಣೀಕರಂ ಶುಭೇ ದಿನೇSಗ್ರಹೀತ್ ।

ಮಹೋತ್ಸವಸ್ತಧಾSಭವತ್ ಕುಶಸ್ಥಲೀನಿವಾಸಿನಾಮ್ ॥೧೭.೧೭೬॥

 

ಶ್ರೀಕೃಷ್ಣನೂಕೂಡಾ ಶುಭದಿನದಲ್ಲಿ ರುಗ್ಮಿಣಿಯ ಕೈಹಿಡಿದನು. ಈ ಪಾಣೀಗ್ರಹಣ ದ್ವಾರಕಾಪಟ್ಟಣದಲ್ಲಿರುವವರಿಗೆ ಅತ್ಯಂತ ದೊಡ್ಡ ಉತ್ಸವವಾಯಿತು.

 

ಚತುರ್ಮ್ಮುಖೇಶಪೂರ್ವಕಾಃ ಸುರಾ ವಿಯತ್ಯವಸ್ಥಿತಾಃ ।

ಪ್ರತುಷ್ಟುವುರ್ಜ್ಜನಾರ್ದ್ದನಂ ರಮಾಸಮೇತಮವ್ಯಯಮ್ ॥೧೭.೧೭೭॥

 

ಚತುರ್ಮುಖ, ರುದ್ರ, ಮೊದಲಾಗಿರತಕ್ಕಂತಹ ದೇವತೆಗಳು ಆಕಾಶದಲ್ಲಿ ನಿಂತು, ಲಕ್ಷ್ಮೀಯಿಂದ ಒಡಗೂಡಿದ, ನಾಶವಿಲ್ಲದ ಪರಮಾತ್ಮನನ್ನು ಸ್ತೋತ್ರಮಾಡಿದರು.

 

ಮುನೀನ್ದ್ರದೇವಗಾಯನಾದಯೋSಪಿ ಯಾದವೈಃ ಸಹ ।

ವಿಚೇರುರುತ್ತಮೋತ್ಸವೇ ರಮಾರಮೇಶಯೋಗಿನಿ ॥೧೭.೧೭೮॥

 

ಮುನಿಶ್ರೇಷ್ಠರು, ಗಂಧರ್ವರೇ ಮೊದಲಾದವರು, ಯಾದವರಿಂದ ಕೂಡಿಕೊಂಡು, ಲಕ್ಷ್ಮೀ ಹಾಗೂ ನಾರಾಯಣರಿಗೆ ಸಂಬಂಧಿಸಿದ ಅತ್ಯಂತ ಉತ್ಕೃಷ್ಟವಾದ ಈ ಉತ್ಸವದಲ್ಲಿ ವಿಹರಿಸಿದರು.

 

ಸುರಾಂಶಕಾಶ್ಚ ಯೇ ನೃಪಾಃ ಸಮಾಹುತಾ ಮಹೋತ್ಸವೇ ।

ಸಪಾಣ್ಡವಾಃ ಸಮಾಯಯುರ್ಹರಿಂ ರಮಾಸಮಾಯುತಮ್ ॥೧೭.೧೭೯॥

 

ದೇವತಾಂಶವುಳ್ಳ ಯಾವ ರಾಜರು ಈ ಮಹೋತ್ಸವದಲ್ಲಿ ಕರೆಸಲ್ಪಟ್ಟರೋ, ಅವರು ಪಾಣ್ಡವರಿಂದ ಕೂಡಿದವರಾಗಿ ರುಗ್ಮಿಣಿಯಿಂದ ಕೂಡಿರುವ ಕೃಷ್ಣನ ಮದುವೆಯ ಮಹೋತ್ಸವಕ್ಕೆ ಬಂದರು.  

 

ಸಮಸ್ತಲೋಕಸುನ್ದರೌ ಯುತೌ ರಮಾರಮೇಶ್ವರೌ ।

ಸಮೀಕ್ಷ್ಯಮೋದಮಾಯಯುಃ ಸಮಸ್ತಲೋಕಸಜ್ಜನಾಃ ॥೧೭.೧೮೦॥

 

ಸಮಸ್ತ ಲೋಕದಲ್ಲಿಯೇ ಅತ್ಯಂತ ಸುಂದರರೆನಿಸಿದ ರುಗ್ಮಿಣಿ-ಕೃಷ್ಣರು ಕೂಡಿರುವುದನ್ನು ನೋಡಿ, ಸಮಸ್ತ ಲೋಕದಲ್ಲಿರುವ ಸಜ್ಜನರು ಸಂತಸವನ್ನು ಹೊಂದಿದರು.


No comments:

Post a Comment