ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, February 29, 2020

Mahabharata Tatparya Nirnaya Kannada 1628_1633


ಕೃಷ್ಣೋ ಜಿತ್ವಾ ಮಾಗಧಂ ರೌಹಿಣೇಯಯುಕ್ತೋ ಯಯೌ ದಮಘೋಷೇಣ ಸಾರ್ದ್ಧಮ್ ।
ಪಿತೃಷ್ವಸಾಯಾಃ ಪತಿನಾ ತೇನ ಚೋಕ್ತಃ ಪೂರ್ವಂ ಜಿತೇನಾಪಿ ಯುಧಿ ಸ್ಮ ಬಾನ್ಧವಾತ್ ॥೧೬.೨೮ ॥

ಕೃಷ್ಣನು ಬಲರಾಮನಿಂದ ಕೂಡಿಕೊಂಡು ಮಾಗಧನನ್ನು ಗೆದ್ದು, ತನ್ನ ಅತ್ತೆಯ ಗಂಡನಾದ ದಮಘೋಷನಿಂದ ಕೂಡಿಕೊಂಡು ಅಲ್ಲಿಂದ ತೆರಳಿದನು. ಈಗಷ್ಟೇ ಯುದ್ಧದಲ್ಲಿ ಸೋತ ದಮಘೋಷನೊಂದಿಗೆ  ಬಾಂಧವ್ಯ ಇರುವುದರಿಂದಾಗಿ ಅವರಿಬ್ಬರು ಜೊತೆಯಾಗಿ ಅಲ್ಲಿಂದ ತೆರಳಿದರು.
[ವಸುದೇವನ ಸಹೋದರಿ ಶ್ರುತದೇವೇ. ಅವಳ ಪತಿ ದಮಘೋಷ. ಇವರ ದಾಂಪತ್ಯದಲ್ಲಿ ಹುಟ್ಟಿಬಂದವನೇ ಶಿಶುಪಾಲ. ಆದ್ದರಿಂದ ದಮಘೋಷ ಶ್ರೀಕೃಷ್ಣನ ಸೋದರತ್ತೆಯ ಗಂಡ (ಪಿತೃಷ್ವಸಾಯಾಃ ಪತಿ)]

ಯಾಮಃ ಪುರಂ ಕರಿವೀರಾಖ್ಯಮೇವ ಮಹಾಲಕ್ಷ್ಮ್ಯಾಃ ಕ್ಷೇತ್ರಸನ್ದರ್ಶನಾಯ ।
ಶ್ರುತ್ವಾ ವಾಕ್ಯಂ ತಸ್ಯ ಯುದ್ಧೇ ಜಿತಸ್ಯ ಭೀತ್ಯಾ ಯುಕ್ತಸ್ಯಾsತ್ಮನಾ ತದ್ಯುತೋsಗಾತ್ ॥೧೬.೨೯ ॥

‘ಕರವೀರಪುರ (ಕೋಲ್ಹಾಪುರ)ಎಂಬ ಹೆಸರಿನ ಮಹಾಲಕ್ಷ್ಮಿಯ ಕ್ಷೇತ್ರವನ್ನು ನೋಡಲು ಹೊರಡೋಣ’ ಎನ್ನುವ  ಭಯದಿಂದ ಕೂಡಿದ, ತನ್ನಿಂದ ಸೋತಿರುವ ದಮಘೋಷನ ಮಾತಿನಂತೆ ಶ್ರೀಕೃಷ್ಣ  ಕರವೀರ ಕ್ಷೇತ್ರಕ್ಕೆ ತೆರಳಿದನು.  

ಗನ್ಧರ್ವೋsಸೌ ದನುನಾಮಾ ನರೋsಭೂತ್ ತಸ್ಮಾತ್ ಕೃಷ್ಣೇ ಭಕ್ತಿಮಾಂಶ್ಚಾsಸ ರಾಜಾ ।
ಪುರಪ್ರಾಪ್ತಾಂಸ್ತಾನ್ ಸ ವಿಜ್ಞಾಯ ಪಾಪಃ ಸೃಗಾಲಾಖ್ಯೋ ವಾಸುದೇವಃ ಕ್ರುಧಾssಗಾತ್ ॥೧೬.೩೦ ॥

ಈ ದಮಘೋಷನು ಮೂಲತಃ  ‘ದನು’ ಎಂಬ ಹೆಸರುಳ್ಳ ಗಂಧರ್ವನು. ಈಗ ಮನುಷ್ಯಲೋಕದಲ್ಲಿ ಅವತರಿಸಿ ಬಂದಿರುವವನು. ಆಕಾರಣದಿಂದ ಕೃಷ್ಣನಲ್ಲಿ ಭಕ್ತಿಯುಳ್ಳವನಾದನು.
ಇತ್ತ ಕರವೀರಪುರಕ್ಕೆ ಬಂದಿರುವ ಅವರನ್ನು ತಿಳಿದ ಪಾಪಿಷ್ಠನಾಗಿರುವ ಸೃಗಾಲವಾಸುದೇವನು ಸಿಟ್ಟಿನಿಂದ ಅವರತ್ತ ಬಂದನು.

ಸೂರ್ಯ್ಯಪ್ರದತ್ತಂ ರಥಮಾರುಹ್ಯ ದಿವ್ಯಂ ವರಾದವದ್ಧ್ಯಸ್ತಿಗ್ಮರುಚೇಃ ಸ ಕೃಷ್ಣಮ್ ।
ಯೋದ್ಧುಂ ಯಯಾವಮುಚಚ್ಚಾಸ್ತ್ರಙ್ಘಾಞ್ಛಿರಸ್ತಸ್ಯಾಥಾsಶು ಜಹಾರ ಕೃಷ್ಣಃ ॥ ೧೬.೩೧ ॥

ಸೃಗಾಲವಾಸುದೇವನು ಸೂರ್ಯಕೊಟ್ಟ ರಥವನ್ನು ಏರಿ, ಸೂರ್ಯನ ವರದಿಂದ ಅವಧ್ಯನಾದವನಾಗಿ, ಕೃಷ್ಣನನ್ನು ಕುರಿತು ಯುದ್ಧಮಾಡಲೆಂದು ಬಂದ. ಅನೇಕ ಅಸ್ತ್ರಗಳನ್ನು ಬಿಟ್ಟ ಆ ಸೃಗಾಲವಾಸುದೇವನ ಕತ್ತನ್ನು ಶ್ರೀಕೃಷ್ಣ  ತಕ್ಷಣ ಕತ್ತರಿಸಿದ.   

ದ್ವಿಧಾ ಕೃತ್ವಾ ದೇಹಮಸ್ಯಾರಿಣಾ ಚ ಪುತ್ರಂ ಭಕ್ತಂ ತಸ್ಯ ರಾಜ್ಯೇsಭಿಷಿಚ್ಯ ।
ಸ ಶಕ್ರದೇವಂ ಮಾಣಿಭದ್ರಃ ಪುರಾ ಯೋ ಯಯೌ ಪುರೀಂ ಸ್ವಾಂ ಸಹಿತೋsಗ್ರಜೇನ ॥೧೬.೩೨ ॥

ಸೃಗಾಲ ವಾಸುದೇವನ ದೇಹವನ್ನು ಚಕ್ರದಿಂದ ಎರಡನ್ನಾಗಿ ಮಾಡಿ, ತನ್ನ ಭಕ್ತನಾದ ಸೃಗಾಲ ವಾಸುದೇವನ ಮಗನಾದ ಶಕ್ರದೇವ ಎನ್ನುವ ಹೆಸರಿನ ತನ್ನ ಭಕ್ತನನ್ನು ರಾಜ್ಯದಲ್ಲಿ ಅಭಿಷೇಕ ಮಾಡಿದ ಶ್ರೀಕೃಷ್ಣ, ತನ್ನ ಪಟ್ಟಣಕ್ಕೆ ತೆರಳಿದನು.
ಈ ಶಕ್ರದೇವ ಯಾರೆಂದರೆ: ಅವನು ಮಣಿಭದ್ರನ  (ಕುಬೇರನ) ಸೇವಕ. ಅವನಿಗೆ ರಾಜ್ಯಾಭಿಷೇಕ ಮಾಡಿ, ತನ್ನ ಅಣ್ಣನೊಂದಿಗೆ ಕೂಡಿಕೊಂಡು ಶ್ರೀಕೃಷ್ಣ ಮಧುರೆಗೆ ತೆರಳಿದನು.

[ಹರಿವಂಶದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ಸಾವಿತ್ರೇ ನಿಯಮೇ ಪೂರ್ಣೆ ಯಂ ದದೌ ಸವಿತಾ ಸ್ವಯಮ್ ।.... ತೇನ  ಸ್ಯಂದನಮುಖ್ಯೇನ ದ್ವಿಷತ್ಸ್ಯನ್ದನಘಾತಿನಾ । ಸ ಸೃಗಾಲೋsಭ್ಯಯಾತ್ ಕೃಷ್ಣಂ ಶಲಭಃ ಪಾವಕಂ ಯಥಾ’ (ವಿಷ್ಣುಪರ್ವಣಿ ೪೪.೬-೭) ‘ಚಕ್ರೇಣೋರಸಿ ನಿರ್ಭಿಣ್ಣಃ ಸಗತಾಸುರ್ಗತೋತ್ಸವಃ’ (ವಿಷ್ಣುಪರ್ವಣಿ ೪೪.೨೯) (ಇದಲ್ಲದೇ ಭಾಗವತದಲ್ಲೂ ಈ ಮಾತು ಬರುತ್ತದೆ): ‘ಶಿರೋ ಜಹಾರ ಗೋವಿನ್ದಃ ಕ್ಷಣೇನ ಮಕುಟೋಜ್ಜ್ವಲಂ’(ಭಾಗವತ: ೧೦.೫೨,೩೯).  ಇನ್ನು ಹರಿವಂಶದಲ್ಲಿ ಹೇಳುತ್ತಾರೆ: ಚಕ್ರನಿರ್ದಾರಿತೋರಸ್ಕಂ  ಭಿನ್ನಶೃಙ್ಗಮಿವಾಚಲಮ್’(೩೭) ‘ತಸ್ಯ ಪದ್ಮಾವತೀ ನಾಮ ಮಹಿಷೀ ಪ್ರಮದೊತ್ತಮ । ರುದತಿ ಪುತ್ರಮಾದಾಯವಾಸುದೇವಮುಪಸ್ಥಿತಾ ।... (ಸೃಗಾಲವಾಸುದೇವನ ಹೆಂಡತಿ ಪದ್ಮಾವತಿ ತನ್ನ ಮಗನನ್ನು ಕರೆದುಕೊಂಡು ಬಂದು ಪರಮಾತ್ಮನಿಗೆ ನಮಸ್ಕಾರ ಮಾಡುತ್ತಾಳೆ). ಅಯಮಸ್ಯ  ವಿಪನ್ನಸ್ಯ  ಬಾಂಧವಸ್ಯ ತವಾನಘ । ಸಂತತಿ ರಕ್ಷ್ಯತಾಂ ವೀರ ಪುತ್ರಃ  ಪುತ್ರ ಇವಾsತ್ಮಜಃ । (ನಿನ್ನ ಅಣ್ಣನ ಮಗನಾಗಿರುವುದರಿಂದ ಇವನು ನಿನ್ನ ಮಗನೇ ಎಂದು ಶ್ರಿಕೃಷ್ಣನಲ್ಲಿ ಆಕೆ ಹೇಳುತ್ತಾಳೆ).  ತಸ್ಯಾಸ್ತದ್  ವಚನಂ ಶ್ರುತ್ವಾ ಮಹಿಷ್ಯಾ ಯದುನಂದನಃ । ಮೃದುಪೂರ್ವಮಿದಂ ವಾಕ್ಯಮುವಾಚ ವದತಾಂ ವರಃ । (ಆಕೆಯೊಂದಿಗೆ ಶ್ರೀಕೃಷ್ಣ  ಮೃದುವಾಗಿ ಮಾತನಾಡುತ್ತಾನೆ). ಯೋsಯಂ ಪುತ್ರಃ ಸೃಗಾಲಸ್ಯ ಮಮಾಪ್ಯೇಷ ನ ಸಂಶಯಃ । ಅಭಯಂ ಚಾಭಿಷೇಕಂ ಚ ದದಾಮ್ಯಸ್ಯ  ಸುಖಾಯ ವೈ’ (ವಿಷ್ಣುಪರ್ವಣಿ. ೪೪.೪೮-೫೬) (ಶ್ರೀಕೃಷ್ಣ ಅವರಿಗೆ ತನ್ನ  ಅಭಯ ದಾನ ಮಾಡುತ್ತಾನೆ).   
ಹರಿವಂಶದಲ್ಲಿ  ಸೃಗಾಲವಾಸುದೇವನ ಮಗನಿಗೆ ಅಭಿಷೇಕ ಮಾಡಿ ಅದೇ ದಿನ ಕೃಷ್ಣ-ಬಲರಾಮರು ಹೊರಟರು ಎಂದಿದೆ.ಅಭಿಷಿಚ್ಯ ಸೃಗಾಲಸ್ಯ  ಕರವೀರಪುರೇ ಸುತಂ । ಕೃಷ್ಣಸ್ತದಹರೇವಾsಶು ಪ್ರಯಾಣಮಭಿರೋಚಯತ್’ (ವಿಷ್ಣುಪರ್ವಣಿ ೪೪.೫೯) ಇನ್ನು ಭಾಗವತದಲ್ಲಿ  ನಾಕು ತಿಂಗಳು ವಾಸಮಾಡಿದರು ಎಂದಿದೆ. ಅವರುಹ್ಯ ಗಿರೇಃ ಶೃಙ್ಗಾತ್ ಕರವೀರಪುರಂ ಗತೌ ।  ತತ್ರ ತೌ ಚತುರೋ ಮಾಸಾನುಶಿತ್ವಾ ಭರತರ್ಷಭ । ಮಹತ್ಯಾ ಸೇನಯಾ ಸಾರ್ಧಂ ಜಗ್ಮತುರ್ಮಧುರಾಂ ಪುರಿಮ್’ (ಭಾಗವತ ೧೦.೫೩.೨೦-೨೧) ಈ ಗೊಂದಲವನ್ನು ಆಚಾರ್ಯರು ಪರಿಹರಿಸುತ್ತಾ,  ಗೋಮಂತ ಪರ್ವತದಲ್ಲಿ ಶ್ರೀಕೃಷ್ಣ-ಬಲರಾಮರು  ನಾಲ್ಕು ತಿಂಗಳು ವಾಸಮಾಡಿದರು ಎನ್ನುವ ನಿರ್ಣಯವನ್ನು ನೀಡಿದ್ದಾರೆ].   



ನೀತಿಂ ಬಲಿಷ್ಠಸ್ಯ ವಿಹಾಯ ಸೇನಾಂ ದೂರಾದ್ ಯುದ್ಧಂ ದರ್ಶಯಿತ್ವೈವ ಗುಪ್ತ್ಯೈ ।
ಸ್ವಸೇನಾಯಾಃ ಸರ್ವಪೂರ್ಣ್ಣಾತ್ಮಶಕ್ತಿಃ ಪುನಃ ಪುರೀಂ ಪ್ರಾಪ್ಯ ಸ ಪೂಜಿತೋsವಸತ್ ॥೧೬.೩೩ ॥

ಬಲಿಷ್ಠನೊಬ್ಬನು ಸೇನೆಯನ್ನು ಬಿಟ್ಟು ಬಹಳ ದೂರದಿಂದಲೇ ತನ್ನ ದೇಶದ ರಕ್ಷಣೆಗಾಗಿ ಯುದ್ಧವನ್ನು ಯಾವ ರೀತಿ ಮಾಡಬೇಕು ಎಂದು ತೋರಿಸಿ, ತನ್ನ ಸೇನೆಯನ್ನು ಯಾವರೀತಿ ರಕ್ಷಿಸಿಕೊಳ್ಳಬೇಕು ಎನ್ನುವ ನೀತಿಯನ್ನು ತೋರಿಸಿ, ಪೂರ್ಣಶಕ್ತಿಯಾದ ಪರಮಾತ್ಮನು ಮತ್ತೆ ಮಧುರೆಗೆ ತೆರಳಿ ಪೂಜಿತನಾಗಿ ಅಲ್ಲಿ ಆವಾಸಮಾಡಿದ.


ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಸೃಗಾಲವಧೋ ನಾಮ ಷೋಡಶೋsದ್ಧ್ಯಾಯಃ

*********


No comments:

Post a Comment