ಅಥ ಪ್ರಭಾತೇ ಶಯನೇ ಶಯಾನಮಪಶ್ಯತಾಮಬ್ಜದಲಾಯತಾಕ್ಷಮ್ ।
ಕೃಷ್ಣಂ ಯಶೋದಾ ಚ ತಥೈವ ನನ್ದ ಆನನ್ದಸಾನ್ದ್ರಾಕೃತಿಮಪ್ರಮೇಯಮ್
॥೧೨.೭೬॥
ತದನಂತರ, ಬೆಳಗ್ಗೆ ತಮ್ಮ
ಹಾಸಿಗೆಯಲ್ಲಿ ಮಲಗಿರುವ ತಾವರೆಯ ಯಸಳಿನಂತೆ ಕಣ್ಗಳುಳ್ಳ, ಆನಂದವೇ ಘನೀಭರಿಸಿ ದೇಹತಾಳಿರುವ, ಸಂಪೂರ್ಣವಾಗಿ ತಿಳಿಯಲು ಅಶಕ್ಯನಾದ ಕೃಷ್ಣನನ್ನು ನಂದ-ಯಶೋದೆಯರು ಕಂಡರು.
ಮೇನಾತ ಏತೌ ನಿಜಪುತ್ರಮೇನಂ ಸ್ರಷ್ಟಾರಮಬ್ಜಪ್ರಭವಸ್ಯ ಚೇಶಮ್ ।
ಮಹೋತ್ಸವಾತ್ ಪೂರ್ಣ್ಣಮನಾಶ್ಚ ನನ್ದೋ ವಿಪ್ರೇಭ್ಯೋsದಾಲ್ಲಕ್ಷಮಿತಾಸ್ತದಾ ಗಾಃ
॥೧೨.೭೭॥
ನಂದ-ಯಶೋದೆಯರಿಬ್ಬರೂ, ಕಮಲದಲ್ಲಿ ಹುಟ್ಟಿದ ಬ್ರಹ್ಮನಿಗೂ ಕೂಡಾ ಸೃಷ್ಟಿಕರ್ತೃನಾದ,
ಸರ್ವಸಮರ್ಥನಾದ ಶ್ರೀಕೃಷ್ಣನನ್ನು ‘ತಮ್ಮ ಮಗ’
ಎಂದು ತಿಳಿದುಕೊಂಡರು. ನಂದನು ಬಹಳ ಸಂತಸಗೊಂಡವನಾಗಿ, ಮಗುವಿನ ಜನನ ಸಂದರ್ಭದಲ್ಲಿ ಲಕ್ಷಕ್ಕೂ
ಮಿಕ್ಕಿ ಗೋವುಗಳನ್ನು ಬ್ರಾಹ್ಮಣರಿಗಾಗಿ ನೀಡಿದನು.
[ಭಾಗವತದಲ್ಲಿ(೧೦.೬.೩) ಈ
ಕುರಿತಾದ ವಿವರವನ್ನು ಕಾಣಬಹುದು: ‘ಧೇನೂನಾಮ್ ನಿಯುತಂ ಪ್ರಾದಾದ್ ವಿಪ್ರೇಭ್ಯಃ ಸಮಲಙ್ಕೃತಮ್’]
ಸುವರ್ಣ್ಣರತ್ನಾಮ್ಬರಭೂಷಣಾನಾಂ ಬಹೂನಿ ಗೋಜೀವಿಗಣಾಧಿನಾಥಃ ।
ಪ್ರಾದಾದಥೋಪಾಯನಪಾಣಯಸ್ತಂ ಗೋಪಾ ಯಶೋದಾಂ ಚ ಮುದಾ ಸ್ತ್ರಿಯೋsಗಮನ್ ॥೧೨.೭೮॥
ಗೋವುಗಳಿಂದ ಜೀವಿಸುವವರಾದ ಗೊಲ್ಲರ
ಸಮೂಹಕ್ಕೆ ಒಡೆಯನಾಗಿರುವ ನಂದಗೊಪನು ಬಂಗಾರ,
ರತ್ನ, ಬಟ್ಟೆ, ಆಭರಣ, ಮೊದಲಾದವುಗಳಿಂದ ಅಲಂಕೃತಗೊಂಡ ಅನೇಕ ಗೋವುಗಳನ್ನು ಕೊಟ್ಟನು. ಉಡುಗರೆಯನ್ನು
ಕೈಯಲ್ಲಿ ಹಿಡಿದುಕೊಂಡ ಗೋಪಾಲಕರು ನಂದಗೊಪನನ್ನು
ಹೊಂದಿದರೆ, ಹೆಣ್ಣುಮಕ್ಕಳು ಯಶೋದೆಯನ್ನು ಕುರಿತು
ಸಂತಸದಿಂದ ತೆರಳಿದರು.
ಗತೇಷು ತತ್ರೈವ ದಿನೇಷು ಕೇಷುಚಿಜ್ಜಗಾಮ ಕಂಸಸ್ಯ ಗೃಹಂ ಸ
ನನ್ದಃ ।
ಪೂರ್ವಂ ಹಿ ನನ್ದಃ ಸ ಕರಂ ಹಿ ದಾತುಂ ಬೃಹದ್ವನಾನ್ನಿಸ್ಸೃತಃ
ಪ್ರಾಪ ಕೃಷ್ಣಾಮ್ ॥೧೨.೭೯॥
ಸಹಾsಗತಾ ತೇನ ತದಾ ಯಶೋದಾ
ಸುಷಾವ ದುರ್ಗ್ಗಾಮಥ ತತ್ರ ಶೌರಿಃ ।
ನಿಧಾಯ ಕೃಷ್ಣಂ ಪ್ರತಿಗೃಹ್ಯ ಕನ್ಯಕಾಂ ಗೃಹಂ ಯಯೌ ನನ್ದ ಉವಾಸ
ತತ್ರ ॥೧೨.೮೦॥
ಕಂಸನಿಗೆ ಕಪ್ಪ-ಕಾಣಿಕೆ
ಕೊಡುವುದಕ್ಕಾಗಿ ನಂದಗೋಪನು ಮಧುರಾಪಟ್ಟಣದ ಮಾರ್ಗವಾಗಿ ಬೃಹದ್ವನಪ್ರಾಂತ್ಯದಿಂದ ಹೊರಟು, ಯಮುನಾ
ನದಿತೀರಕ್ಕೆ ಬಂದಿದ್ದನು. ಆತನ ಜೊತೆಗೇ ಬಂದಿದ್ದ ಯಶೋದೆ ಯಮುನೆಯ ತೀರದಲ್ಲೇ ದುರ್ಗೆಯನ್ನು ಹೆತ್ತಿದ್ದಳು.
ಆಗಲೇ ವಸುದೇವನು ಕೃಷ್ಣನನ್ನು ತಂದು ಯಶೋದೆಯ
ಸಮೀಪದಲ್ಲಿ ಇಟ್ಟು, ಅಲ್ಲಿದ್ದ ಹೆಣ್ಣುಮಗುವನ್ನು(ದುರ್ಗೆಯನ್ನು) ಹಿಡಿದುಕೊಂಡು ಹಿಂತಿರುಗಿದ್ದ.
ನಿರುಷ್ಯ ತಸ್ಮಿನ್ ಯಮುನಾತಟೇ ಸ ಮಾಸಂ ಯಯೌ ದ್ರಷ್ಟುಕಾಮೋ
ನರೇನ್ದ್ರಮ್ ।
ರಾಜ್ಞೇsಥ ತಂ ದತ್ತಕರಂ ದದರ್ಶ ಶೂರಾತ್ಮಜೋ
ವಾಕ್ಯಮುವಾಚ ಚೈನಮ್ ॥೧೨.೮೧॥
ಯಮುನಾ ತಟದಲ್ಲಿ ಸುಮಾರು ಒಂದು
ತಿಂಗಳುಗಳ ಕಾಲ ವಾಸಮಾಡಿದ ನಂದಗೋಪ, ಕಂಸನನ್ನು ಕಾಣಬೇಕೆಂಬ ಇಚ್ಛೆಯುಳ್ಳವನಾಗಿ ಮಧುರೆಗೆ ತೆರಳಿದನು.
ಅಲ್ಲಿ ಕಂಸನಿಗೆ ದತ್ತಕರವನ್ನು ಕೊಟ್ಟ ನಂದಗೋಪನನ್ನು
ವಸುದೇವನು ಕಂಡನು. ವಸುದೇವನು ನಂದಗೊಪನನ್ನು ಕುರಿತು ಮಾತನ್ನು ಹೇಳಿದನು.
No comments:
Post a Comment