ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 23, 2023

Mahabharata Tatparya Nirnaya Kannada 30-28-32

 

ಸಮುಜ್ಜ್ವಲಾ ಪಾಣ್ಡವಕೀರ್ತ್ತಿನಾರೀ ಪದಂ ವಿಧಾಯಾಸುರಪಕ್ಷಮೂರ್ದ್ಧಸು ।

ವರಾಭಯೇ ಚೈವ ಸತಾಂ ಕರಾಭ್ಯಾಂ ಕೃಷ್ಣಪ್ರಸೂತಾ ಜಗದಣ್ಡಮಾವೃಣೋತ್ ॥ ೩೦.೨೮ ॥

 

ಶ್ರೀಕೃಷ್ಣನಿಂದ ಹುಟ್ಟಿದ ಪಾಂಡವರ ಕೀರ್ತಿ ಎಂಬ ಹೆಣ್ಣುಮಗಳು ಚೆನ್ನಾಗಿ ಬೆಳಗುತ್ತಾ, ಅಸುರರ ತಲೆಯಮೇಲೆ ಕಾಲನ್ನು ಇಡುತ್ತಾ, ಸಜ್ಜನರಿಗೆ ಕೈಗಳಿಂದ ವರವನ್ನೂ, ಅಭಯವನ್ನೂ ನೀಡುತ್ತಾ, ಜಗತ್ತನ್ನು ಆವರಿಸಿದಳು.

 

ಪಾತಾಳಪಾದಾಂ ಪೃಥಿವೀನಿತಮ್ಬಾಮಾಕಾಶಮದ್ಧ್ಯಾಂ ಕರಸನ್ತತಾಶಾಮ್ ।

ಗ್ರಹರ್ಕ್ಷತಾರಾಭರಣದ್ಯುವಕ್ಷಸಂ ವಿರಿಞ್ಚಲೋಕಸ್ಥಲಸನ್ಮುಖಾಮ್ಬುಜಾಮ್ ॥ ೩೦.೨೯ ॥

 

ವಿಕುಣ್ಠನಾಥಾಭಯಹಸ್ತಮಾದರಾನ್ಮೂಧ್ನಾ ವಹನ್ತೀಂ ವರಭಾರತಾಖ್ಯಾಮ್ ।

ನಿಶಮ್ಯ ತಾಮೀಕ್ಷ್ಯ ಸಮಸ್ತಲೋಕಾಃ ಪವಿತ್ರಿತಾ ವೇದಿಭವಾಮಿವಾನ್ಯಾಮ್ ॥ ೩೦.೩೦ ॥

 

ಅವಳ ಪಾದ ಪಾತಾಳದಲ್ಲಿತ್ತು. ಅವಳ ನಿತಂಬ(ಕಟಿಪ್ರದೇಶ) ಭೂಮಿಯಲ್ಲಿ, ಆಕಾಶದಲ್ಲಿ ದೇಹದ ನಡುವಿನ ಭಾಗವಿತ್ತು. ಆಕೆ ತನ್ನ ಕೈಯಿಂದ ಎಲ್ಲಾ ದಿಕ್ಕನ್ನೂ  ವ್ಯಾಪಿಸಿದ್ದಳು. ಗೃಹ, ನಕ್ಷತ್ರಗಳೇ ಅವಳ ಆಭರಣಗಳು, ಸ್ವರ್ಗವೇ ಅವಳ ಎದೆ, ಬ್ರಹ್ಮಲೋಕದಲ್ಲಿ ಅವಳ ಮುಖ, ಪರಮಾತ್ಮನ ಅಭಯಹಸ್ತವನ್ನು ಅವಳು ತಲೆಯಲ್ಲಿ ಧರಿಸಿದ್ದಳು. ಭಾರತ ಎಂಬ ಹೆಸರಿನ ಈ  ಪಾಂಡವ ಕೀರ್ತಿನಾರಿಯನ್ನು ಇನ್ನೊಬ್ಬ ದ್ರೌಪದಿಯೋ ಎಂಬಂತೆ ನೋಡಿ ಎಲ್ಲರೂ ಪೂತರಾದರು.

[ಇದು ಭಾರತೀ ದೇವಿಯ ವ್ಯಾಪ್ತಿಯೂ,  ವಾಙ್ಮಯ ವ್ಯಾಪಿಸಿದ ಬಗೆಯೂ ಹೌದು. ಮಹಾಭಾರತದ ಅರಿವು ಪಾತಾಳದಲ್ಲಿಯೂ, ಭೂಮಿಯಲ್ಲಿಯೂ, ಆಕಾಶದಲ್ಲಿಯೂ ಹೀಗೆ ಎಲ್ಲಾ ಕಡೆ  ಪ್ರಚಲಿತವಾಗಿದೆ].

 

ಪ್ರಪಾಲಯತ್ಸ್ವೇವ ಧರಾಂ ಸಕೃಷ್ಣೇಷ್ವದ್ಧೈವ ಪಾರ್ತ್ಥೇಷು ಕಲಿರ್ಬಲಿಶ್ಚ ।

ಸಪಾಪದೈತ್ಯೌ ಕ್ವಚ ರಾಷ್ಟ್ರವಿಪ್ಲವಂ ಸಞ್ಚಕ್ರತುಸ್ತಚ್ಛ್ರುತಮಾಶು ಪಾರ್ತ್ಥೈಃ ॥ ೩೦.೩೧ ॥

 

ಹೀಗೆ ಕೃಷ್ಣನಿಂದ ಕೂಡಿರುವ ಪಾಂಡವರು ಭೂಮಿಯನ್ನು ಪಾಲಿಸುತ್ತಿರಲು, ಕಲಿ ಮತ್ತು ಬಲಿ ಎಂಬ ದೈತ್ಯರು ಇತರ ಪಾಪಿಷ್ಠ ದೈತ್ಯರೊಂದಿಗೆ ಕೂಡಿ, ರಾಷ್ಟ್ರ ವಿಪ್ಲವವನ್ನು ಮಾಡಿದರು. ಪಾಂಡವರಿಂದ ಈ ಘಟನೆಯು ಕೇಳಲ್ಪಟ್ಟಿತು.

 

ನೃಪೇಣ ಕೃಷ್ಣೇನ ಚ ಸಾಧು ಚೋದಿತೋ ಭೀಮಸ್ತದಾ ತೌ ಸಗಣೌ ವಿಜಿತ್ಯ ।

ಬಲಿಂ ಪ್ರವಿದ್ರಾಪ್ಯ ಕಲಿಂ ನಿಬದ್ಧ್ಯ ಸಮಾನಯತ್ ಕೃಷ್ಣನೃಪೇನ್ದ್ರಯೋಃ ಪುರಃ ॥ ೩೦.೩೨ ॥

 

ಧರ್ಮರಾಜನಿಂದಲೂ, ಕೃಷ್ಣನಿಂದಲೂ ಚೆನ್ನಾಗಿ ಪ್ರಚೋದಿಸಲ್ಪಟ್ಟ ಭೀಮಸೇನನು, ಕಲಿ-ಬಲಿಗಳನ್ನು ಅವರ ಗಣದೊಂದಿಗೆ ಗೆದ್ದು, ಬಲಿಯನ್ನು ಓಡಿಸಿ, ಕಲಿಯನ್ನು ಕಟ್ಟಿ, ಎಳೆದುತಂದು  ಧರ್ಮರಾಜ ಹಾಗೂ ಶ್ರೀಕೃಷ್ಣರ ಎದುರುಗಡೆ ನಿಲ್ಲಿಸಿದ.

No comments:

Post a Comment