ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, July 4, 2019

Mahabharata Tatparya Nirnaya Kannada 1343_1347


ಗೋಪೈರ್ಬಲಾದಿಭಿರುದೀರ್ಣ್ಣತರಪ್ರಮೋದೈಃ ಸಾರ್ದ್ಧಂ ಸಮೇತ್ಯ ಭಗವಾನರವಿನ್ದನೇತ್ರಃ ।
ತಾಂ ರಾತ್ರಿಮತ್ರ ನಿವಸನ್ ಯಮುನಾತಟೇ ಸ ದಾವಾಗ್ನಿಮುದ್ಧತಬಲಂ ಚ ಪಪೌ ವ್ರಜಾರ್ತ್ಥೇ೧೩.೪೩

ಹೀಗೆ ಕಾಳಿಯನಾಗನನ್ನು ಯಮುನೆಯಿಂದಾಚೆ ಕಳುಹಿಸಿದ ಕಮಲದಂತೆ ಕಣ್ಣುಳ್ಳ ಶ್ರೀಕೃಷ್ಣನು, ಉತ್ಕೃಷ್ಟವಾದ ಸಂತಸವುಳ್ಳ ಬಲರಾಮನೇ ಮೊದಲಾದ ಗೋಪಾಲಕರಿಂದ ಕೂಡಿಕೊಂಡು, ಆ ರಾತ್ರಿಯನ್ನು ಆ  ಯಮುನಾತಟದಲ್ಲಿಯೇ ಕಳೆದನು. ಶ್ರೀಕೃಷ್ಣನು ಯಮುನಾತಟದಲ್ಲಿ ವ್ಯಾಪ್ತವಾಗಿರುವ ಭಯಂಕರ ಕಾಳ್ಗಿಚ್ಚನ್ನು ತನ್ನ ಗ್ರಾಮ ನಾಶವಾಗಬಾರದು ಎಂಬ ಉದ್ದೇಶಕ್ಕಾಗಿ ಕುಡಿದುಬಿಟ್ಟನು.

ಇತ್ಥಂ ಸುರಾಸುರಗಣೈರವಿಚಿನ್ತ್ಯದಿವ್ಯಕರ್ಮ್ಮಾಣಿ ಗೋಕುಲಗತೇsಗಣಿತೋರುಶಕ್ತೌ ।
ಕುರ್ವತ್ಯಜೇ ವ್ರಜಭುವಾಮಭವದ್ ವಿನಾಶ ಉಗ್ರಾಭಿಧಾದಸುರತಸ್ತರುರೂಪತೋsಲಮ್ ॥೧೩.೪೪


ತದ್ಗನ್ಧತೋ ನೃಪಶುಮುಖ್ಯಸಮಸ್ತಭೂತಾನ್ಯಾಪುರ್ಮ್ಮೃತಿಂ ಬಹಳರೋಗನಿಪೀಡಿತಾನಿ ।
ಧಾತುರ್ವರಾಜ್ಜಗದಭಾವಕೃತೈಕಬುದ್ಧಿರ್ವದ್ಧ್ಯೋ ನ ಕೇನಚಿದಸೌ ತರುರೂಪದೈತ್ಯಃ ॥೧೩.೪೫

ಈರೀತಿಯಾಗಿ ದೇವತೆಗಳು, ಮನುಷ್ಯರು, ಮೊದಲಾದವರಿಂದ ಚಿಂತಿಸಲು ಅಸಾಧ್ಯವಾದ, ಅಲೌಕಿಕವಾದ ಕರ್ಮಗಳನ್ನು ಎಣೆಯಿರದ ಕಸುವುಳ್ಳ (ಬಲವುಳ್ಳ, ಶಕ್ತಿಯುಳ್ಳ) ಕೃಷ್ಣನು ಮಾಡುತ್ತಿರಲು, ಮರದ ಶರೀರವನ್ನು ಧರಿಸಿದ ‘ಉಗ್ರ’ನೆಂಬ ಅಸುರನಿಂದ ವ್ರಜವಾಸಿಗಳಿಗೆ ವಿನಾಶವುಂಟಾಯಿತು.
ಆ ಅಸುರನು ಬೀರುವ ದುರ್ಗಂಧದಿಂದ ಮನುಷ್ಯರು, ಪಶುಗಳು, ಮೊದಲಾದ ಎಲ್ಲಾ  ಪ್ರಾಣಿಗಳೂ  ಕೂಡಾ ಬಹಳ ರೋಗದಿಂದ ಪೀಡಿತವಾದವು ಮತ್ತು  ಸತ್ತವು ಕೂಡಾ. ಬ್ರಹ್ಮದೇವರ ವರದಿಂದ ಅವಧ್ಯನಾಗಿದ್ದ,  ಜಗತ್ತನ್ನೇ ಇಲ್ಲವಾಗಿಸಬೇಕು ಎನ್ನುವ ಏಕೈಕ ನಿಶ್ಚಯವುಳ್ಳ ಈ ದೈತ್ಯನು ಮರದ ರೂಪದಲ್ಲಿದ್ದನು.  

ಸಙ್ಕರ್ಷಣೇsಪಿ ತದುದಾರವಿಷಾನುವಿಷ್ಟೇ ಕೃಷ್ಣೋ ನಿಜಸ್ಪರ್ಶತಸ್ತಮಪೇತರೋಗಮ್ ।
ಕೃತ್ವಾ ಬಭಞ್ಜ ವಿಷವೃಕ್ಷಮಮುಂ ಬಲೇನ ತಸ್ಯಾನುಗೈಃ ಸಹ ತದಾಕೃತಿಭಿಃ ಸಮಸ್ತೈಃ ॥೧೩.೪೬

ದೈತ್ಯಾಂಶ್ಚ ಗೋವಪುಷ ಆತ್ತವರಾನ್ ವಿರಿಞ್ಚಾನ್ಮೃ ತ್ಯೂಜ್ಝಿತಾನಪಿ ನಿಪಾತ್ಯ ದದಾಹ ವೃಕ್ಷಾನ್ ।
ವಿಕ್ರೀಡ್ಯ ರಾಮಸಹಿತೋ ಯಮುನಾಜಲೇ ಸ ನೀರೋಗಮಾಶು ಕೃತವಾನ್ ವ್ರಜಮಬ್ಜನಾಭಃ ॥೧೩,೪೭

ಅವನ ಉತ್ಕೃಷ್ಟವಾದ ವಿಷದಿಂದ ಪ್ರವಿಷ್ಟನಾಗಿ ಸಂಕರ್ಷಣನೂ ಕೂಡಾ ಸಂಕಟಗೊಳ್ಳಲು, ಕೃಷ್ಣನು ತನ್ನ ಮುಟ್ಟುವಿಕೆಯಿಂದ ಸಂಕರ್ಷಣನನ್ನು ರೋಗವಿಹೀನನನ್ನಾಗಿ ಮಾಡಿ, ವಿಷವೃಕ್ಷವನ್ನು ಕಿತ್ತನು(ವೃಕ್ಷರೂಪದಲ್ಲಿರುವ ಉಗ್ರಾಸುರನನ್ನು ಕೊಂದನು). ನಂತರ ಆ ಉಗ್ರಾಸುರನ ರೀತಿಯ ಆಕಾರವುಳ್ಳ ಅವನ ಅನುಜರನ್ನು ಕೃಷ್ಣ ತನ್ನ ಬಲದಿಂದ ಕೊಂದ ಕೂಡಾ(ಇಡೀ ತೋಪನ್ನೇ ನಾಶಮಾಡಿದ).
ಬ್ರಹ್ಮದೇವರಿಂದ ವರವನ್ನು ಪಡೆದು, ಸಾವಿಲ್ಲದ, ಗೋವುಗಳ ರೂಪವನ್ನು ಧರಿಸಿದ್ದ ದೈತ್ಯರೆಲ್ಲರನ್ನೂ ಬೀಳಿಸಿದ ಕೃಷ್ಣ, ಅವುಗಳ ಜೊತೆಗೇ ಇಡೀ ತೊಪನ್ನು ಕೃಷ್ಣ ಸುಟ್ಟಹಾಕಿದ. ನಂತರ ಕೃಷ್ಣ ಬಲರಾಮನೊಂದಿಗೆ ಕೂಡಿಕೊಂಡು ಯಮುನೆಯಲ್ಲಿ ಕ್ರೀಡಿಸಿದ. ಹೀಗೆ ತನ್ನ ಗ್ರಾಮವನ್ನು (ವ್ರಜವನ್ನು) ಕೃಷ್ಣ ರೋಗರಹಿತವನ್ನಾಗಿ ಮಾಡಿದ.

No comments:

Post a Comment