ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 2, 2019

Mahabharata Tatparya Nirnaya Kannada 1338_1342


ತಂ ಯಾಮುನಹ್ರದವಿಲೋಳಕಮಾಪ್ಯ ನಾಗಃ ಕಾಳ್ಯೋ ನಿಜೈಃ ಸಮದಶತ್ ಸಹ ವಾಸುದೇವಮ್ ।
ಭೋಗೈರ್ಬಬನ್ಧ ಚ ನಿಜೇಶ್ವರಮೇನಮಜ್ಞಃ ಸೇಹೇ ತಮೀಶ ಉತ ಭಕ್ತಿತಮತೋsಪರಾಧಮ್ ॥೧೩.೩೮॥

ಯಮುನೆಯ ಮಡುವನ್ನೇ ಅಲುಗಾಡಿಸಿರುವ ತನ್ನ ಒಡೆಯನಾದ ಕೃಷ್ಣನನ್ನು ತಿಳಿಯದ ಕಾಳಿಯನಾಗನು, ತನ್ನವರೆಲ್ಲರೊಂದಿಗೆ ಕೂಡಿಕೊಂಡು, ತನ್ನ ಉದ್ದುದ್ದವಾಗಿರುವ ಶರೀರದಿಂದ ಕೃಷ್ಣನನ್ನು ಕಟ್ಟಿಹಾಕಿದ. ಸರ್ವಸಮರ್ಥನಾಗಿರುವ ಕೃಷ್ಣನು ತನ್ನ ಭಕ್ತನೇ ಆಗಿರುವ ಕಾಳಿಯನ ಈ ಅಪರಾಧವನ್ನು ಸಹಿಸಿದ.

ಉತ್ಪಾತಮೀಕ್ಷ್ಯ ತು ತದಾsಖಿಲಗೋಪಸಙ್ಘಸ್ತತ್ರಾsಜಗಾಮ ಹಲಿನಾ ಪ್ರತಿಬೋಧಿತೋsಪಿ ।
ದೃಷ್ಟ್ವಾ ನಿಜಾಶ್ರಯಜನಸ್ಯ ಬಹೋಃ ಸುದುಃಖಂ ಕೃಷ್ಣಃ ಸ್ವಭಕ್ತಮಪಿ ನಾಗಮಮುಂ ಮಮರ್ದ್ದ ॥೧೩.೩೯॥

ಬಲರಾಮನಿಂದ ಕೃಷ್ಣನ ಮಹಿಮೆಯನ್ನು ಕೇಳಿ ತಿಳಿದಿದ್ದರೂ ಕೂಡಾ,  ಎಲ್ಲಾ ಗೋಪಾಲಕರ ಸಮೂಹವು, ಆ ಉತ್ಪಾತವನ್ನು ಕಂಡು ಕೃಷ್ಣನಿದ್ದಲ್ಲಿಗೆ ಬಂದರು. ಹಾಗೆ ಬಂದ, ತನ್ನನ್ನು ಆಶ್ರಯಿಸಿರುವ ಅವರೆಲ್ಲರ  ದುಃಖವನ್ನು ಕಂಡ ಕೃಷ್ಣನು, ತನ್ನ ಭಕ್ತನಾದರೂ ಕೂಡಾ ಕಾಳಿಯನನ್ನು ತುಳಿದ.

ತಸ್ಯೋನ್ನತೇಷು ಸ ಫಣೇಷು ನನರ್ತ್ತ ಕೃಷ್ಣೋ ಬ್ರಹ್ಮಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ ।
ಆರ್ತ್ತೋ ಮುಖೈರುರು ವಮನ್ ರುಧಿರಂ ಸ ನಾಗೋ ‘ನಾರಾಯಣಂ ತಮರಣಂ ಮನಸಾ ಜಗಾಮ’ ॥೧೩.೪೦॥

ಆ ಕಾಳಿಯನಾಗನ ಎತ್ತರವಾಗಿರುವ ಹೆಡೆಗಳ ಮೇಲೆ  ಹೂವಿನ ಮಳೆಗರೆಯುವ ಬ್ರಹ್ಮಾದಿಗಳಿಂದ ಸ್ತೋತ್ರಮಾಡಲ್ಪಡುವವನಾಗಿ ಶ್ರೀಕೃಷ್ಣ ಕುಣಿದ. ಆ ನಾಗನಾದರೋ, ಬಹಳ ಸಂಕಟವುಳ್ಳವನಾಗಿ, ತನ್ನ ಎಲ್ಲಾ ಹೆಡೆಗಳಿಂದ ರಕ್ತವನ್ನು ಕಾರುತ್ತಾ, ಮನಸ್ಸಿನಿಂದ ರಕ್ಷಕನಾದ ನಾರಾಯಣನನ್ನು ಚಿಂತಿಸಿದ.

ತಚ್ಚಿತ್ರತಾಣ್ಡವವಿರುಗ್ಣಫಣಾತಪತ್ರಂ ರಕ್ತಂ ವಮನ್ತಮುರು ಸನ್ನಧಿಯಂ ನಿತಾನ್ತಮ್
ದೃಷ್ಟ್ವಾsಹಿರಾಜಮುಪಸೇದುರಮುಷ್ಯ ಪತ್ನ್ಯೋ ನೇಮುಶ್ಚ ಸರ್ವಜಗದಾದಿಗುರುಂ ಭುವೀಶಮ್ ॥೧೩.೪೧॥

ಅವನ ವಿಚಿತ್ರವಾದ ನರ್ತನದಿಂದ, ಭಗ್ನವಾದ ಪಣವೆಂಬ (ಹೆಡೆಯೆಂಬ) ಛತ್ರವುಳ್ಳ, ಚನ್ನಾಗಿ ವಾಂತಿ ಮಾಡಿಕೊಂಡ, ತನಗೇನಾಗುತ್ತಿದೆ ಎನ್ನುವ ಪ್ರಜ್ಞೆಯನ್ನೇ ಕಳೆದುಕೊಂಡ ಕಾಳಿಯನನ್ನು ಕಂಡು, ಅವನ ಪತ್ನಿಯರು ಕೃಷ್ಣನ ಬಳಿ ಬಂದರು. ಅವರು ಸಮಸ್ತ ಜಗತ್ತಿಗೆ ಆದಿಗುರುವಾಗಿರುವ, ಭೂಮಿಗೆ ಒಡೆಯನಾಗಿರುವ ನಾರಾಯಣನಿಗೆ ನಮಸ್ಕರಿಸಿದರು ಕೂಡಾ.

ತಾಭಿಃ ಸ್ತುತಃ ಸ ಭಗವಾನಮುನಾ ಚ ತಸ್ಮೈ ದತ್ತ್ವಾsಭಯಂ ಯಮಸಹೋದರವಾರಿತೋsಮುಮ್ ।
ಉತ್ಸೃಜ್ಯ ನಿರ್ವಿಷಜಲಾಂ  ಯಮುನಾಂ ಚಕಾರ ಸಂಸ್ತೂಯಮಾನಚರಿತಃ ಸುರಸಿದ್ಧಸಾದ್ಧ್ಯೈಃ ॥೧೩.೪೨॥

ಅವರಿಂದ ಸ್ತೋತ್ರಮಾಡಲ್ಪಟ್ಟ,  ಕಾಳಿಯನಾಗನಿಂದಲೂ ಕೂಡಾ ಸ್ತೋತ್ರಮಾಡಲ್ಪಟ್ಟ  ಶ್ರೀಕೃಷ್ಣನು, ಕಾಳಿಯನಿಗೆ ಅಭಯವನ್ನು ಕೊಟ್ಟು, ಅವನನ್ನು ಯಮುನೆಯ ನೀರಿನಿಂದ ಕಳುಹಿಸಿ, ಯಮುನೆಯನ್ನು ವಿಷರಹಿತವಾಗಿಸಿದ. ಹೀಗೆ ಎಲ್ಲಾ ದೇವತೆಗಳಿಂದ ಸ್ತೋತ್ರಮಾಡಲ್ಪಡುವ ಚರಿತ್ರೆಯುಳ್ಳವನಾಗಿ ಶ್ರೀಕೃಷ್ಣ ಯಮುನೆಯನ್ನು ಶುದ್ಧಗೊಳಿಸಿದ.

No comments:

Post a Comment