ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, November 24, 2021

Mahabharata Tatparya Nirnaya Kannada 21: 60-64

 

ಉತ್ತರೋತ್ತರತಃ ಸರ್ವೇ ಸುಖೇ ಶತಗುಣೋತ್ತರಾಃ

ಅನನ್ತಜನಸಮ್ಪೂರ್ಣ್ಣಾ ಅಪಿ ತೇ ಹೀಚ್ಛಯಾ ಹರೇಃ       ೨೧.೬೦

 

ಅವಕಾಶವನ್ತೋ ದಿವ್ಯತ್ವಾತ್ ಪೂರ್ಯ್ಯನ್ತೇ ನ ಕದಾಚನ ।

ಸರ್ವಕಾಮಸುಖೈಃ ಪೂರ್ಣ್ಣಾ ದಿವ್ಯಸ್ತ್ರೀಪುರುಷೋಜ್ಜ್ವಲಾಃ ೨೧.೬೧

 

ಈ ಲೋಕಗಳು (ಸ್ವರ್ಗಲೋಕದಿಂದ ಮೇಲೆ ವೈಕುಂಠದವರೆಗೆ ಇರುವ ಲೋಕಗಳು) ಸುಖದ ವಿಷಯದಲ್ಲಿ ಕ್ರಮೇಣ ಮೇಲು-ಮೇಲಕ್ಕೆ  ಒಂದರಿಂದ ಇನ್ನೊಂದು ನೂರುಪಟ್ಟು ಆಧಿಕ್ಯವನ್ನು  ಹೊಂದಿವೆ. ಅನಂತ ಜೀವರಾಶಿಗಳೂ ಇಲ್ಲಿದ್ದಾರೆ ಆದರೆ ಅಲೌಕಿಕವಾದ್ದರಿಂದ ಅವಕಾಶವುಳ್ಳವುದಾಗಿವೆ(ಇಲ್ಲಿ ಎಂದೂ ಜೀವಸಾಂದ್ರತೆ ಉಂಟಾಗುವುದಿಲ್ಲ). ಈ ಲೋಕಗಳು ಎಲ್ಲಾ ರೀತಿಯ ಸುಖ-ಸಮೃದ್ಧಿಯಿಂದ ಕೂಡಿರುವುದಾಗಿವೆ. ಅಲೌಕಿಕರಾದ ಸ್ತ್ರೀ-ಪುರುಷರಿಂದ ಈ ಲೋಕಗಳು ಶೋಭಿಸುತ್ತಿವೆ.

 

[ಭೂಲೋಕದಿಂದ ಸತ್ಯಲೋಕದತನಕ ಅಂತರಿಕ್ಷಲೋಕಗಳನ್ನು ನೋಡಿದೆವು. ಅದೇ ರೀತಿ ಕೆಳಗೆ ಏಳು ಪಾತಾಳ ಲೋಕಗಳಿವೆ-  ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ ಮತ್ತು  ಪಾತಾಳ)]

 

ದಿವ್ಯರತ್ನಸಮಾಕೀರ್ಣ್ಣಂ ತಥಾ ಪಾತಾಳಸಪ್ತಕಮ್ ।

ಅಧಸ್ತಾಚ್ಛೇಷದೇವೇನ ಬಲಿನಾ ಸಮಧಿಷ್ಠಿತಮ್ ೨೧.೬೨

 

ದಿವ್ಯವಾದ ರತ್ನಗಳಿಂದ ತುಂಬಿರುವ ಪಾತಾಳ ಲೋಕಗಳು ಏಳು. ಈ ಲೋಕಗಳು ಬಲಿಷ್ಠನಾದ ಶೇಷನಿಂದ ಧರಿಸಲ್ಪಟ್ಟಿವೆ (ಅದನ್ನು ಶೇಷ ಹೊತ್ತು ನಿಂತಿದ್ದಾನೆ).

[ವಿಷ್ಣುಪುರಾಣ: ‘ಅತಳಂ ವಿತಳಂ ಚೈವ ನಿತಳಂ ಚ ಗಭಸ್ತಿಮತ್   ಮಹಾಖ್ಯಂ ಸುತಳಂ ಚಗ್ರ್ಯಂ ಪಾತಾಳಂ ಚಾಪಿ ಸಪ್ತಮಮ್’ (೨.೫.೩) (ಇಲ್ಲಿ ನಿತಳ ಎಂದರೆ ತಳಾತಳ ಎಂದು ಅರ್ಥ ಮಾಡಿಕೊಳ್ಳಬೇಕು). ಭಾಗವತದ ಐದನೇ ಸ್ಕಂಧದಲ್ಲಿ ಏಳು ಪಾತಾಳ ಲೋಕಗಳನ್ನು ಹೇಳಿದ್ದಾರೆ. ಈ ಎಲ್ಲಾ ಪಾತಾಳಗಳೂ ಕೂಡಾ ಅಲೌಕಿಕವಾದ ರತ್ನಗಳಿಂದ ಕೂಡಿವೆ.

ಈ ಎಲ್ಲಾ ಲೋಕಗಳಿಗೆ ಸಂಬಂಧಿಸಿದ ದೇವತಾ ಮೀಮಾಂಸೆ  ಮಹಾಭಾರತದ ಇಂದಿನ ಪಾಠದಲ್ಲಿ ಕಾಣಸಿಗುವುದಿಲ್ಲವಾದರೂ ಕೂಡಾ, ಪುರಾಣಗಳಲ್ಲಿ ಈ ಕುರಿತ ವಿವರವಿದೆ:  

·       ಭಾಗವತ(.೨೩.): ‘ವನೇರಪ್ಯಧಸ್ತಾತ್ ಸಪ್ತ ಭೂವಿವರಾ ಏಕೈಕಶೋ ಯೋಜನಾಯುತಾಯಾಮಾಸ್ತಾರತ್ಮಯೇನೋಪಕ್ಲುಪ್ತಾ  ಅತಳಂ ವಿತಳಂ ಸುತಳಂ ತಳಾತಳಂ ಮಹಾತಳಂ ರಸಾತಳಂ ಪಾತಾಳಮಿತಿ

·       ವಿಷ್ಣುಪುರಾಣ(..-) ಸ್ವರ್ಲೋಕಾದಪಿ ರಮ್ಯಾಣಿ ಪಾತಾಳಾದೀನಿ ನಾರದಃ ಪ್ರಾಹ ಸ್ವರ್ಗಸದಾಂ ಮಧ್ಯೇ ಪಾತಾಳೇಭ್ಯೋ ಗತೋ ದಿವಿ   ಆಹ್ಲಾದಕಾರಿಣಃ ಶುಭ್ರ ಮಣಯೋ ಯತ್ರ ಸುಪ್ರಭಾಃ  ನಾಗೈರಾಭ್ರಿಯಮಾಣಾಸ್ತು ಪಾತಾಳಂ ಕೇನ ತತ್ ಸಮಮ್

·       ವಿಷ್ಣುಪುರಾಣ(..೧೩) ಪಾತಾಳಾನಾಮಧಶ್ಚಾಸ್ತೇ ವಿಷ್ಣೋರ್ಯಾ ತಾಮಸೀ ತನುಃ ಶೇಷಾಖ್ಯಾ ಯದ್ಗುಣಾನ್ ವಕ್ತುಂ ಶಕ್ತಾ ದೈತ್ಯದಾನವಾಃ  

·       ಭಾಗವತ (.೨೩.೨೦)ತತೋಽಧಸ್ತಾತ್ ಸುತಳ ಉರುಶ್ರವಾಃ ಪುಣ್ಯಶ್ಲೋಕೋ ವಿರೋಚನಾತ್ಮಜೋ ಬಲಿರ್ಭಗವತಾ..... ವಾಮನರೂಪೇಣ ಪರಾಕ್ಷಿಪ್ತಲೋಕತ್ರಯಃ .....ಆಸ್ತೇಽಧುನಾsಪಿ]

 

ಕಾಮಭೋಗಸಮಾಯುಕ್ತಾ ಬಹುವರ್ಷಸಹಸ್ರಿಣಃ ।

ಸಪ್ತದ್ವೀಪೇಷು ಪುರುಷಾ ನಾರ್ಯ್ಯಶ್ಚೋಕ್ತಾಃ ಸುರೂಪಿಣಃ ೨೧.೬೩

 

ಕೆಳಗಿನ ಲೋಕದಲ್ಲಿರುವವರು ಬಯಸಿದ ಭೋಗವನ್ನು ಪಡೆಯುತ್ತಿರುತ್ತಾರೆ ಮತ್ತು ಅವರು ಬಹಳ ವರ್ಷಗಳ ಕಾಲ ಬಾಳುತ್ತಾರೆ. ಏಳೂ ದ್ವೀಪಗಳಲ್ಲಿ ಅತ್ಯಂತ ಸುಂದರಿಯರಾದ ನಾರಿಯರು, ಅತ್ಯಂತ ಸುಂದರರಾದ ಪುರುಷರಿದ್ದಾರೆ.

 

ಏಷಾಂ ಚ ಸರ್ವಲೋಕಾನಾಂ ಧಾತಾ ನಾರಾಯಣಃ ಪರಃ ।

ವಿಷ್ಣುಲೋಕಸ್ಥಿತೋ ಮುಕ್ತೈಃ ಸದಾ ಸರ್ವೈರುಪಾಸ್ಯತೇ             ೨೧.೬೪

 

ಈ ಸಮಸ್ತ ಲೋಕಗಳನ್ನೂ ಹೊತ್ತಿರುವವನು- ಮುಕ್ತಲೋಕದಲ್ಲಿದ್ದು, ಮುಕ್ತರಿಂದ ಯಾವಾಗಲೂ ಉಪಾಸಿಸಲ್ಪಡುವ ನಾರಾಯಣ.

[ಹೀಗೆ ಒಟ್ಟಿನಲ್ಲಿ ಇಲ್ಲಿ ಆಚಾರ್ಯರು ಭಾಗವತದ ಐದನೇ ಸ್ಕಂಧದಲ್ಲಿ ಹೇಳಿದ ಭೂಗೋಳ ವರ್ಣನೆ, ಖಗೋಳ ವರ್ಣನೆ ಮತ್ತು ವಿಷ್ಣುಪುರಾಣಾದಿಗಳಲ್ಲಿ ಹೇಳಿರುವ ಇಡೀ ಬ್ರಹ್ಮಾಂಡ ವರ್ಣನೆ ಈ ಮೂರನ್ನೂ ಸಮಷ್ಠಿಯಾಗಿ, ವ್ಯಾಖ್ಯಾನ ಮಾಡಿ ನಮಗೆ ನೀಡಿದ್ದಾರೆ].

No comments:

Post a Comment