ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 16, 2018

Mahabharata Tatparya Nirnaya Kannada 11.151-11.154


ಚಕಾರ ಕರ್ಮ್ಮ ಸಾ ಪೃಥಾ ಮುನೇಃ ಸುಕೋಪನಸ್ಯ ಹಿ ।
ಯಥಾ ನ ಶಕ್ಯತೇ ಪರೈಃ ಶರೀರವಾಙ್ಮನೋನುಗಾ ॥೧೧.೧೫೧

ಬೇರೊಬ್ಬರಿಂದ ಮಾಡಲಸಾಧ್ಯವಾದ,  ಕಾರಣವಿಲ್ಲದೇಯೂ ಕೋಪಮಾಡಿಕೊಳ್ಳುವ ದುರ್ವಾಸರೆಂಬ ಋಷಿಯ ಸೇವಾರೂಪವಾದ ಕರ್ಮವನ್ನು ಪೃಥೆ ಮಾಡಿದಳು.  ದೇಹದಿಂದಲೂ,  ಮಾತಿನಿಂದಲೂ,  ಮನಸ್ಸಿನಿಂದಲೂ ಮುನಿಯ ಇಂಗಿತವನ್ನು ತಿಳಿದವಳಾಗಿ ಪೃಥೆ ದುರ್ವಾಸರ ಸೇವೆ ಮಾಡಿದಳು.

ಸ ವತ್ಸರತ್ರಯೋದಶಂ ತಯಾ ಯಥಾವದರ್ಚ್ಚಿತಃ ।
ಉಪಾದಿಶತ್ ಪರಂ ಮನುಂ ಸಮಸ್ತದೇವವಶ್ಯದಮ್ ॥೧೧.೧೫೨

ಹೀಗೆ ಒಂದುವರ್ಷ ಸೇವೆ ಮಾಡಿದ ಕುಂತಿಗೆ ಹದಿಮೂರನೇ ವರ್ಷ ತುಂಬಿದಾಗ,  ಅವಳಿಂದ ಯಥಾನುಗುಣವಾಗಿ ಪೂಜಿತನಾಗಿ ಸಂತುಷ್ಟರಾದ  ದುರ್ವಾಸರು, ಎಲ್ಲಾ ದೇವತೆಗಳನ್ನು ವಶಕ್ಕೆ ತಂದುಕೊಡಬಲ್ಲ  ಉತ್ಕೃಷ್ಟವಾದ ಮಂತ್ರವನ್ನು ಆಕೆಗೆ ಉಪದೇಶಿಸಿದರು.
[ಇಲ್ಲಿ ‘ವತ್ಸರತ್ರಯೋದಶಂ’ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಈ ಮಾತು ‘ಹದಿಮೂರು ವರ್ಷಗಳ ಕಾಲ  ಸೇವೆಮಾಡಿದಳು’ ಎಂದು ಹೇಳಿದಂತೆ ಕಾಣುತ್ತದೆ. ಆದರೆ ಆಕೆ ಹದಿಮೂರು ವರ್ಷಗಳ ಕಾಲ ಸೇವೆ ಮಾಡಿರುವುದಲ್ಲ. ಆಕೆ ಒಂದು ವರ್ಷ ಸೇವೆಯನ್ನು ಮಾಡಿ, ತಾನು  ಹದಿಮೂರನೇ ವಯಸ್ಸಿನವಳಾಗಿದ್ದಾಗ ದುರ್ವಾಸರಿಂದ ಉಪದೇಶ ಪಡೆದಳು. ಈ ಸ್ಪಷ್ಟತೆ ನಮಗೆ ಮಹಾಭಾರತದ ಆದಿಪರ್ವದಲ್ಲಿ(೧೨೦.೬) ಕಾಣಸಿಗುತ್ತದೆ. ಅಲ್ಲಿ ಸ್ಪಷ್ಟವಾಗಿ ‘ದುರ್ವಾಸಾ ವತ್ಸರಸ್ಯಾಂತೇ ದದೌ ಮಂತ್ರಮನುತ್ತಮಮ್' ಎಂದು ಹೇಳಿರುವುದನ್ನು ಕಾಣಬಹುದು.  ಇಲ್ಲಿ ‘ವತ್ಸರಸ್ಯ ಅಂತೇ’ ಎಂದಿರುವುದರಿಂದ, ಮೇಲಿನ ಶ್ಲೋಕದಲ್ಲಿ ‘ವತ್ಸರತ್ರಯೋದಶಂ’ ಎಂದರೆ ಹದಿಮೂರನೇ ವಯಸ್ಸಿನಲ್ಲಿ ಎಂದು ತಿಳಿಯಬೇಕು.

ಋತೌ ತು ಸಾ ಸಮಾಪ್ಲುತಾ ಪರೀಕ್ಷಣಾಯಾ ತನ್ಮನೋಃ।
ಸಮಾಹ್ವಯದ್ ದಿವಾಕರಂ ಸ ಚಾsಜಗಾಮ ತತ್ ಕ್ಷಣಾತ್ ॥೧೧.೧೫೩

ಅವಳು ತನ್ನ ಮೊದಲ ಋತುಸ್ನಾನವನ್ನು ಮಾಡಿ, ಆ ಮಂತ್ರದ ಪರೀಕ್ಷೆಗಾಗಿ ಸೂರ್ಯನನ್ನು ಕರೆದಳು. ಅವನಾದರೋ ಆ ಕ್ಷಣದಲ್ಲೇ ಬಂದುಬಿಟ್ಟ.
 [ಈ ಕುರಿತ ವಿವರವನ್ನು ಮಹಾಭಾರತದ ಆದಿಪರ್ವದಲ್ಲಿ(೧೨೦.೦೭,೧೭,೧೮) ಕಾಣುತ್ತೇವೆ. ಅಲ್ಲಿ ವೇದವ್ಯಾಸರಿಗೆ ಕುಂತಿ ಕರ್ಣ ಹೇಗೆ ಹುಟ್ಟಿದ ಎನ್ನುವ ವಿಷಯವನ್ನು ವಿವರಿಸುತ್ತಾಳೆ. ‘ಯ̐ಯಂ ದೇವಂ ತ್ವಮೇತೇನ  ಮಂತ್ರೇಣಾsವಾಹಾಯಿಷ್ಯಸಿ । ತಸ್ಯತಸ್ಯ ಪ್ರಭಾವೇಣ ತವ ಪುತ್ರೋ ಭವಿಷ್ಯತಿ  ಕಶ್ಚಿನ್ಮೇ ಬ್ರಾಹ್ಮಣಃ ಪ್ರಾದಾದ್ ವರಂ ವಿದ್ಯಾಂ ಚ ಶತ್ರುಹನ್ ।  ತದ್ವಿಜಿಜ್ಞಾಸಯಾssಹ್ವಾನಂ  ಕೃತವತ್ಯಸ್ಮಿ  ತೇ ವಿಭೋ ।  ಏತಸ್ಮಿನ್ನಪರಾಧೇ ತ್ವಾಂ ಶಿರಸಾsಹಂ  ಪ್ರಸಾದಯೇ । ಯೋಶಿತೋ ಹಿ ಸದಾ ರಕ್ಷ್ಯಾಸ್ತ್ವಪರಾಧೇsಪಿ ನಿತ್ಯಶಃ  ಮಂತ್ರೋಚ್ಛಾರಣೆ ಮಾಡಿದಾಗ ಪ್ರತ್ಯಕ್ಷನಾದ ಸೂರ್ಯನನ್ನು ಕುರಿತು ಕುಂತಿ ಆಡಿದ ಮಾತುಗಳಿವು: ಬ್ರಾಹ್ಮಣನೊಬ್ಬ ನನಗೆ ವಿದ್ಯೆಯನ್ನು ಇತ್ತ.  ಆತನಿಂದ ಪಡೆದ ಮಂತ್ರದ ಬಲವನ್ನು ತಿಳಿಯುವುದಕ್ಕಾಗಿ ನಾನು ಅದನ್ನು ಉಚ್ಛಾರಣೆ ಮಾಡಿದೆ. ಈ ಅಪರಾಧದ ವಿಚಾರದಲ್ಲಿ ನಾನು ನಿನಗೆ ತಲೆಬಾಗಿ ನಮಸ್ಕರಿಸುತ್ತೇನೆ. ಅಪರಾಧ ಮಾಡಿದ್ದರೂ ಕೂಡಾ ಹೆಣ್ಣನ್ನು ರಕ್ಷಣೆ ಮಾಡಬೇಕಾಗಿರುವುದು ನಿನ್ನ ಕರ್ತವ್ಯವಲ್ಲವೇ?  ]

ತತೋ ನ ಸಾ ವಿಸರ್ಜ್ಜಿತುಂ ಶಶಾಕ ತಂ ವಿನಾ ರತಿಮ್ ।
ಸುವಾಕ್ಪ್ರಯತ್ನತೋsಪಿ ತಾಮಥಾsಸಸಾದ ಭಾಸ್ಕರಃ ॥೧೧.೧೫೪

ಹೀಗೆ ಬಂದ ಸೂರ್ಯ ತನ್ನನ್ನು ಸೇರದಂತೆ ಕುಂತಿ ಪ್ರಯತ್ನಿಸಿದರೂ ಕೂಡಾ,  ತನ್ನ ಮಾತಿನ ಪ್ರಯತ್ನದಿಂದ  ಅವನನ್ನು ಅವಳಿಂದ ತಡೆಯಲಿಕ್ಕಾಗಲಿಲ್ಲಾ. ತದನಂತರ ಒಪ್ಪಿಗೆಯಮೇಲೆ ಭಾಸ್ಕರನು ಕುಂತಿಯನ್ನು ಸೇರುತ್ತಾನೆ.

No comments:

Post a Comment