ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 24, 2019

Mahabharata Tatparya Nirnaya Kannada 13123_13126


ತಾಭ್ಯಾಂ ಹತಾನಭಿಸಮೀಕ್ಷ್ಯ ನಿಜಾನ್ ಸಮಸ್ತಾನ್ ಕಂಸೋ ದಿದೇಶ ಬಲಮಕ್ಷಯಮುಗ್ರವೀರ್ಯ್ಯಮ್।
ರುದ್ರಪ್ರಸಾದಕೃತರಕ್ಷಮವ ದ್ಧ್ಯಮೇನೌ ನಿಸ್ಸಾರ್ಯ ದಣ್ಡಮಧಿಕಂ ಕುರುತೇತಿ ಪಾಪಃ ॥೧೩.೧೨೩

ಕೃಷ್ಣ-ಬಲರಾಮರಿಂದ ತನ್ನವರೆಲ್ಲರೂ ಕೊಲ್ಲಲ್ಪಟ್ಟದ್ದನ್ನು ಕಂಡ  ಪಾಪಿಷ್ಠನಾದ  ಕಂಸನು, ರುದ್ರನ ವರದಿಂದ ರಕ್ಷಣೆಯನ್ನು ಹೊಂದಿದ, ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲದ, ಉತ್ಕೃಷ್ಟವಾದ ವೀರ್ಯವುಳ್ಳ ತನ್ನ ಸೈನ್ಯಕ್ಕೆ, ರಾಮ-ಕೃಷ್ಣರನ್ನು ಹೊರಹಾಕಿ ಕಠಿಣವಾದ ಶಿಕ್ಷೆಯನ್ನು ಕೊಡುವಂತೆ ಆಜ್ಞೆಮಾಡಿದ.

ಶ್ರುತ್ವೈವ ರಾಜವಚನಂ ಬಲಮಕ್ಷಯಂ ತದಕ್ಷೋಹಿಣೀದಶಕಯುಗ್ಮಮನನ್ತವೀರ್ಯ್ಯಮ್ ।
ಕೃಷ್ಣಂ ಚಕಾರ ವಿವಿದಾಸ್ತ್ರಧರಂ ಸ್ವಕೋಷ್ಠೇ ಸಿಂಹಂ ಯಥಾsಕಿಲ ಸೃಗಾಲಬಲಂ ಸಮೇತಮ್॥೧೩.೧೨೪

ಕಂಸನ ಆಜ್ಞೆಯನ್ನು ಕೇಳಿದಕೂಡಲೇ, ನಾಶವಾಗದ ಆ ಅಕ್ಷೋಹಿಣಿಯ ಹತ್ತರ ಜೋಡಿಯ (ಇಪ್ಪತ್ತು ಅಕ್ಷೋಹಿಣಿ ಸಂಖ್ಯೆಯಿಂದ ಪರಿಮಿತವಾದ) ಮಹಾಪರಾಕ್ರಮಿಯಾದ, ವಿಧವಿಧವಾದ ಅಸ್ತ್ರವನ್ನು ಧರಿಸಿದ  ಆ ಸೈನ್ಯವು,  ಕೃಷ್ಣ-ಬಲರಾಮರನ್ನು ಸುತ್ತುವರಿಯಿತು. ನರಿಗಳ ಸಮೂಹ  ಸಿಂಹವನ್ನು ಸುತ್ತುವರಿದರೆ ಹೇಗಿರುತ್ತದೋ ಹಾಗೆ.

ಜಾನನ್ನಪೀಶ್ವರಮನನ್ತಬಲಂ ಮಹೇನ್ದ್ರಃ ಕೃಷ್ಣಂ ರಥಂ ನಿಜಮಯಾಪಯದಾಯುಧಾಢ್ಯಮ್ ।
ಶುಶ್ರೂಷಣಾಯ ಪರಮಸ್ಯ ಯಥಾ ಸಮುದ್ರಮರ್ಘ್ಯೇಣ ಪೂರಯತಿ ಪೂರ್ಣ್ಣಜಲಂ ಜನೋsಯಮ್೧೩.೧೨೫

ಇಂದ್ರನು ಸರ್ವಸಮರ್ಥನಾದ ಕೃಷ್ಣನನ್ನು ಅನಂತ ಬಲವುಳ್ಳವನೆಂದು ತಿಳಿದಿದ್ದರೂ ಕೂಡಾ,  ದೇವರ ಸೇವೆಗಾಗಿ,  ಆಯುಧದಿಂದ ಕೂಡಿದ, ಕೃಷ್ಣಸಂಬಂಧಿಯಾದ(ಭಗವಂತನಿಂದ ಇಂದ್ರನಿಗೆ ನೀಡಲ್ಪಟ್ಟ)  ರಥವನ್ನು ಕಳುಹಿಸಿಕೊಟ್ಟ. ಇಂದ್ರನ ಈ ಸೇವೆ ಹೇಗಿತ್ತೆಂದರೆ: ಪೂರ್ಣವಾದ ಜಲವುಳ್ಳ ಸಮುದ್ರವನ್ನು ಅರ್ಘ್ಯದಿಂದ ಹೇಗೆ  ಪೂಜಿಸುತ್ತಾರೋ ಹಾಗಿತ್ತು(ಅಂದರೆ:  ಹೇಗೆ ಸಮುದ್ರದ ಜಲವನ್ನೇ ತಮ್ಮ  ಕರ ಸಂಪುಟದಿಂದ ತೆಗೆದು  ಅರ್ಘ್ಯ ನೀಡಿ ಹೇಗೆ ಪೂರ್ಣವನ್ನಾಗಿ ಮಾಡುತ್ತಾರೋ ಹಾಗೆ)

ಸ್ವಸ್ಯನ್ದನಂ ತು ಭಗವಾನ್ ಸ ಮಹೇನ್ದ್ರದತ್ತಮಾರುಹ್ಯ ಸೂತವರಮಾತಲಿಸಙ್ಗೃಹೀತಮ್
ನಾನಾಯುಧೋಗ್ರಕಿರಣಸ್ತರಣಿರ್ಯ್ಯಥೈವ ಧ್ವಾನ್ತಂ ವ್ಯನಾಶಯದಶೇಷತ ಆಶು ಸೈನ್ಯಮ್ ॥೧೩.೧೨೬

ಪರಮಾತ್ಮನು,  ಸಾರಥಿಗಳಲ್ಲೇ ಅಗ್ರಗಣ್ಯನಾದ ಮಾತಲಿಯಿಂದ[1] ತರಲ್ಪಟ್ಟ,  ಇಂದ್ರನಿಂದ ನೀಡಲ್ಪಟ್ಟ,  ತನ್ನದೇ ಆದ ರಥವನ್ನು ಏರಿ, ನಾನಾ ಆಯುಧಗಳೆಂಬ ಉಗ್ರವಾದ ಕಿರಣವುಳ್ಳವನಾಗಿ,  ಹೇಗೆ ಸೂರ್ಯ  ಕತ್ತಲನ್ನು ನಾಶಪಡಿಸುತ್ತಾನೋ ಹಾಗೆ ಕಂಸನ  ಆ ಎಲ್ಲಾ ಸೈನ್ಯವನ್ನು  ಕೂಡಲೇ ನಾಶಮಾಡಿದನು.


[ಮಹಾಭಾರತ ಸಭಾಪರ್ವದಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ. ‘ಏಷ ಶಕ್ರರಥೇ ತಿಷ್ಠಂಸ್ತಾನ್ಯನೀಕಾನಿ ಭಾರತ   ವ್ಯಧಮದ್ ಭೋಜಪುತ್ರಸ್ಯ  ಮಹಾಭ್ರಾಣೀವ ಮಾರುತಃ’(೫೪.೩೦)    ‘ಕಶ್ಚ ನಾರಾಯಣಾದನ್ಯಃ  ಸರ್ವರತ್ನವಿಭೂಷಿತಮ್ ರಥಮಾದಿತ್ಯಸಙ್ಕಾಶಾಮಾತಿಷ್ಠೇತ  ಶಚೀಪತೇಃ  ಕಸ್ಯ ಚಾಪ್ರತಿಮೋ ಯಂತಾ ವಜ್ರಪಾಣೇಃ ಪ್ರಿಯಃ ಸಖಾ ಮಾತಲಿಃ  ಸಙ್ಗ್ರಹೀತಾ  ಸ್ಯಾದನ್ಯತ್ರ  ಪುರುಷೋತ್ತಮಾತ್'(೫೪.೧೫-೧೬)
(ನಾರಾಯಣನಲ್ಲದೇ ಯಾರು ತಾನೆ ಇಂದ್ರನ ರಥವನ್ನು ಏರಿಯಾರು?  ಮಾತಲಿಯೂ ಕೂಡಾ ಸೇವೆ ಮಾಡಬೇಕು ಎಂಬ ಮನೋಭಾವದಿಂದ ರಥವನ್ನು ನಡೆಸಿದ. ಅಂತಹ ರಥವನ್ನು ಭಗವಂತನಲ್ಲದೆ ಬೇರೆ ಯಾರು ಏರಲು ಸಾಧ್ಯ]. 





[1] ಇಂದ್ರನ ಸಾರಥಿ

No comments:

Post a Comment