ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, October 26, 2021

Mahabharata Tatparya Nirnaya Kannada 21: 12-16

                                    ಹಯಂ ಸಭೀಮಫಲ್ಗುನಾ  ಹರೇ ರಥಂ ಸಮಾಸ್ಥಿತಾಃ ।

ವ್ಯಚಾರಯನ್ ಹರೇಃ ಸುತಾ ದಿನಸ್ಯ ಪಾದಮಾತ್ರತಃ ॥೨೧.೧೨॥

 

ಭೀಮಸೇನ, ಅರ್ಜುನ, ಮೊದಲಾದವರೊಂದಿಗೆ ಪರಮಾತ್ಮನ ರಥವನ್ನು ಏರಿದ ಶ್ರೀಕೃಷ್ಣನ ಮಕ್ಕಳು, ದಿನದ ಕಾಲು ಭಾಗದಲ್ಲಿ  ಕುದುರೆಯೊಂದಿಗೆ ಎಲ್ಲಾಕಡೆ ತಿರುಗಾಡಿಕೊಂಡು ಬಂದರು.

 

ಜಿತಾಃ ಸಮಸ್ತಭೂಭೃತೋ ಜರಾಸುತಾದಯಃ ಕ್ಷಣಾತ್ ।

ವೃಕೋದರಾದಿಭಿಸ್ತು ತೈರ್ಹಯಶ್ಚ ದಿವ್ಯ ಆಯಯೌ ॥೨೧.೧೩॥

 

ಜರಾಸಂಧ ಮೊದಲಾಗಿರುವ ಎಲ್ಲಾ ರಾಜರೂ ಕೂಡಾ ಒಂದೇ ಕ್ಷಣದಲ್ಲಿ ಭೀಮಸೇನ ಮೊದಲಾದವರಿಂದ ಸೋಲಿಸಲ್ಪಟ್ಟರು. ಹೀಗೆ ಆ ಅಲೌಕಿಕವಾದ ಕುದುರೆ ದಿನದ ಕಾಲುಭಾಗದಲ್ಲೇ ಎಲ್ಲಾ ಕಡೆ ತಿರುಗಿ ಹಿಂತಿರುಗಿ ಬಂತು. 

ಹಯಃ ಸ ಕೃಷ್ಣನಿರ್ಮ್ಮಿತೋ ದಿನೇನ ಲಕ್ಷಯೋಜನಮ್ ।

ಕ್ಷಮೋ ಹಿ ಗನ್ತುಮಞ್ಜಸಾ ದಿನಾಶ್ವಮೇಧಸಿದ್ಧಯೇ ॥೨೧.೧೪॥

 

ಒಂದು ದಿನದಲ್ಲಿ ಅಶ್ವಮೇಧವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಕೃಷ್ಣನಿಂದ ನಿರ್ಮಿಸಲ್ಪಟ್ಟ ಕುದುರೆಯು ಒಂದು ದಿನದಲ್ಲಿ ಲಕ್ಷ ಯೋಜನ ಸಂಚರಿಸಲು ಸಮರ್ಥವಾಗಿತ್ತು.  

 

ಪರಾಶರಾತ್ಮಜೋ ಹರಿರ್ಹರಿಂ ಯದಾ ತ್ವದೀಕ್ಷಯತ್ ।

ತದಾssಸಸಾದ ಹ ದ್ವಿಜಸ್ತೃಣಾವಹೋ ರುರಾವ ಚ ॥೨೧.೧೫॥

 

ಯಾವಾಗ ಪರಾಶರರ ಮಗನಾದ ವೇದವ್ಯಾಸರೂಪಿ ನಾರಾಯಣನು ಕೃಷ್ಣನನ್ನು ದೀಕ್ಷಿತನಾಗುವಂತೆ  ಮಾಡಿದನೋ,(ವೇದವ್ಯಾಸರೇ ಶ್ರೀಕೃಷ್ಣನಿಗೆ ಪೌರೋಹಿತ್ಯ ಮಾಡಿದರು). ಆಗ ಒಂದಿಷ್ಟು ಹುಲ್ಲನ್ನು ಹಿಡಿದ ಬ್ರಾಹ್ಮಣನೊಬ್ಬನು ಅಲ್ಲಿಗೆ ಬಂದ ಮತ್ತು ಅತ್ತನು ಕೂಡಾ.

[ಭಾಗವತದಲ್ಲಿ(೧೦.೧೦೦.೧೩) ಈ ಕುರಿತ ವಿವರಣೆ ಕಾಣಸಿಗುತ್ತದೆ: ‘ತೃಣಮೂಲಧರಃ ಕಶ್ಚಿದ್ ಬ್ರಾಹ್ಮಣೋsಭ್ಯೇತ್ಯ ಸತ್ವರಃ । ಚುಕ್ರೋಶ ಆರ್ತ ಉದ್ಬಾಹುರ್ಯಜ್ಞವಾಟಮುಖೇ ಸ್ಥಿತಃ]

 

ಬ್ರಜನ್ತಿ ಜನ್ಮನೋsನು ಮೇ ಸದಾ ಸುತಾ ಅದೃಶ್ಯತಾಮ್ ।

ಇತೀರಿತೇsರ್ಜ್ಜುನೋsಬ್ರವೀದಹಂ ಹಿ ಪಾಮಿ ತೇ ಸುತಾನ್ ॥೨೧.೧೬॥

 

ನನ್ನ ಮಕ್ಕಳೆಲ್ಲರೂ ಕೂಡಾ ಹುಟ್ಟಿದ ಕೂಡಲೇ ಅದೃಶ್ಯರಾಗಿಬಿಡುತ್ತಾರೆ ಎಂದು ಆ ಬ್ರಾಹ್ಮಣ  ಹೇಳಲ್ಪಡುತ್ತಿರಲು, ಅರ್ಜುನನು ಹೇಳಿದ: ‘ನಾನು ನಿನ್ನ ಮಕ್ಕಳನ್ನು ರಕ್ಷಿಸುತ್ತೇನೆ’ ಎಂದು.

[ ‘ಜಾತೋಜಾತೋ ಮಹಾಬಾಹೋ  ಪುತ್ರೋ ಮೇ ಹ್ರೀಯತೇsನಘ । ತ್ರಯೋ ಹತಾಶ್ಚತುರ್ಥಂ ತ್ವಂ ಕೃಷ್ಣ ರಕ್ಷಿತುಮರ್ಹಸಿ’ – ನನ್ನ ಮಕ್ಕಳು ಹುಟ್ಟಿದ ತಕ್ಷಣ ಕಾಣೆಯಾಗುತ್ತಿದ್ದಾರೆ,   ಮೂರುಮಂದಿ ಸತ್ತು ಹೋಗಿದ್ದಾರೆ. ನಾಲ್ಕನೆಯವನನ್ನು ಓ ಕೃಷ್ಣಾ, ನೀನು ರಕ್ಷಿಸಲು ತೊಡಗಬೇಕು’ ಎಂದು ಆ ಬ್ರಾಹ್ಮಣ ಬೇಡುವುದನ್ನು ಹರಿವಂಶದಲ್ಲಿ (ವಿಷ್ಣುಪರ್ವ ೧೧.೧೧)  ವಿವರಿಸಿರುವುದನ್ನು ಕಾಣುತ್ತೇವೆ.]

No comments:

Post a Comment