ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 30, 2021

Mahabharata Tatparya Nirnaya Kannada 21: 23-28

 [ದೇವರು ಅರ್ಜುನನ ಜೊತೆಗೆ ಬಲರಾಮ-ಪ್ರದ್ಯುಮ್ನ-ಅನಿರುದ್ಧ ಇವರನ್ನು ಏಕೆ ಕಳುಹಿಸಲಿಲ್ಲ ಎಂದರೆ:]

 

ನ್ಯಯೋಜಯತ್ ತತ್ಸಹಾಯೇ ಯಶಸ್ತೇಷ್ವಭಿರಕ್ಷಿತುಮ್ ।  

ಪ್ರಿಯೋ ಹಿ ನಿತರಾಂ ರಾಮಃ  ಕೃಷ್ಣಸ್ಯಾನು ಚ ತಂ ಸುತಃ          ॥೨೧.೨೩॥

 

ಅನಿರುದ್ಧಃ  ಕಾರ್ಷ್ಣ್ಣಿಮನು ಪ್ರದ್ಯುಮ್ನಾದ್ ಯೋsಜನಿಷ್ಟ ಹಿ ।

ರುಗ್ಮಿಪುತ್ರ್ಯಾಂ ರುಗ್ಮವತ್ಯಾಮಾಹೃತಾಯಾಂ ಸ್ವಯಮ್ಬರೇ      ॥೨೧.೨೪॥

 

ರಾಮ, ಪ್ರದ್ಯುಮ್ನ, ಅನಿರುದ್ಧ ಇವರಿಗೆ ಅಪಕೀರ್ತಿ ಬರಬಾರದು ಎನ್ನುವ ಉದ್ದೇಶದಿಂದ, ಅವರ ಯಶಸ್ಸನ್ನು ರಕ್ಷಿಸುವುದಕ್ಕಾಗಿ ಶ್ರೀಕೃಷ್ಣ ಅವರನ್ನು ಅರ್ಜುನನೊಂದಿಗೆ ಕಳುಹಿಸಲಿಲ್ಲ.  ಬಲರಾಮನು ಕೃಷ್ಣನಿಗೆ ಬಹಳ ಪ್ರಿಯ. ಬಲರಾಮನ ನಂತರ ಮಗನಾದ ಪ್ರದ್ಯುಮ್ನ ಹಾಗೂ ಪ್ರದ್ಯುಮ್ನನ ನಂತರ ಅನಿರುದ್ಧ ಪ್ರಿಯನಷ್ಟೇ. ಅನಿರುದ್ಧ ಪ್ರದ್ಯುಮ್ನನಿಂದ ಸ್ವಯಮ್ಬರದಲ್ಲಿ ಅಪಹರಿಸಲ್ಪಟ್ಟ ರುಗ್ಮರಾಜನ ಮಗಳಾದ ರುಗ್ಮವತಿಯಲ್ಲಿ ಹುಟ್ಟಿದ್ದ.

[ಹಿಂದೆ ಸ್ವಯಮ್ಬರದಲ್ಲಿ ತನ್ನ ತಂದೆ(ಶ್ರೀಕೃಷ್ಣ) ರುಗ್ಮಿಣಿಯನ್ನು ಹೇಗೆ ತಂದಿದ್ದನೋ, ಅದೇ ರೀತಿ ರುಗ್ಮವತಿ(ಶುಭಾಙ್ಗೀ)ಯನ್ನು ಪ್ರದ್ಯುಮ್ನ ತಂದಿದ್ದ. ಅವರಿಬ್ಬರ ದಾಂಪತ್ಯದಲ್ಲಿ ಹುಟ್ಟಿದವನೇ ಅನಿರುದ್ಧ.  ಹರಿವಂಶದಲ್ಲಿ(ವಿಷ್ಣುಪರ್ವ ೬೧.೪-೫) ಈ ಕುರಿತಾದ ವಿವರ ಕಾಣಸಿಗುತ್ತದೆ : ಶುಭಾಙ್ಗೀ ನಾಮ ವೈದರ್ಭೀ ಕಾನ್ತಿಧ್ಯುತಿಸಮನ್ವಿತಾ । ಪೃಥಿವ್ಯಾಮಭವತ್ ಖ್ಯಾತಾ ರುಗ್ಮಿಣಸ್ತನಯಾ ತದಾ ।  ಉಪವಿಷ್ಟೇಷು ಸರ್ವೇಷು ಪಾರ್ಥಿವೇಷು ಮಹಾತ್ಮಸು । ವೈದರ್ಭೀ ವರಯಾಮಾಸ  ಪ್ರದ್ಯುಮ್ನಮರಿಸೂದನಮ್]

 

ರತಿರೇವ ಹಿ ಯಾ ತಸ್ಯಾಂ ಜಾತೋsಸೌ ಕಾಮನನ್ದನಃ ।

ಪೂರ್ವಮಪ್ಯನಿರುದ್ಧಾಖ್ಯೋ ವಿಷ್ಣೋಸ್ತನ್ನಾಮ್ನ ಏವಚ  ॥೨೧.೨೫॥

 

ಆವೇಶಯುಕ್ತೋ ಬಲವಾನ್ ರೂಪವಾನ್ ಸರ್ವಶಾಸ್ತ್ರವಿತ್ ।

ತಸ್ಮಾತ್ ತಾಂಸ್ತ್ರಿನೃತೇ ಕೃಷ್ಣಃ ಪಾರ್ತ್ಥಸಾಹಾಯ್ಯಕಾರಣಾತ್   ॥೨೧.೨೬॥

 

ನ್ಯಯೋಜಯತ್ ಸೂತಿಕಾಲೇ ಬ್ರಾಹ್ಮಣ್ಯಾಃ ಸ ಚ ಫಲ್ಗುನಃ ।

ಅಸ್ತ್ರೈಶ್ಚಕಾರ ದಿಗ್ಬನ್ಧಂ ಕುಮಾರೋsಥಾಪಿತು ಕ್ಷಣಾತ್             ॥೨೧.೨೭॥

 

ಅದರ್ಶನಂ ಯಯೌ ಪಾರ್ತ್ಥೋ ವಿಷಣ್ಣಃ ಸಹ ಯಾದವೈಃ ।

ಅಧಿಕ್ಷಿಪ್ತೋ ಬ್ರಾಹ್ಮಣೇನ ಯಯೌ ಯತ್ರ ಶ್ರಿಯಃಪತಿಃ                ॥೨೧.೨೮॥

 

ಯಾರು ಸಾಕ್ಷಾತ್ ರತಿಯೋ, ಅವಳಲ್ಲಿ ಮೂಲರೂಪದಲ್ಲಿಯೂ ಕಾಮನ ಮಗನಾಗಿರುವ ಇವನು  ಮೊದಲೂ ಕೂಡಾ ಅದೇ(‘ಅನಿರುದ್ಧ’ ಎನ್ನುವ)  ಹೆಸರಿನವನಾಗಿದ್ದ. ಈತ ‘ಅನಿರುದ್ಧ ಎನ್ನುವ ಪರಮಾತ್ಮನ ಆವೇಶದಿಂದ ಕೂಡಿದ್ದು, ಬಲಿಷ್ಠನಾಗಿಯೂ, ರೂಪವಂತನಾಗಿಯೂ, ಎಲ್ಲಾ ಶಾಸ್ತ್ರಗಳನ್ನು ಬಲ್ಲವನಾಗಿಯೂ ಇದ್ದ.

ಹೀಗೆ ಅರ್ಜುನನಿಗೆ ಸಹಾಯ ಮಾಡಲೆಂದು ಈ ಮೂವರನ್ನು ಬಿಟ್ಟು ಇತರ ಎಲ್ಲರನ್ನೂ ಕೃಷ್ಣ ನಿಯೋಗಿಸಿದ. ಅರ್ಜುನನಾದರೋ, ಬ್ರಾಹ್ಮಣ ಪತ್ನಿಯ ಪ್ರಸವಕಾಲದಲ್ಲಿ  ಅಸ್ತ್ರಗಳಿಂದ ದಿಗ್ಬನ್ಧನವನ್ನು ಮಾಡಿದ. ಆದರೂ ಒಂದು ಕ್ಷಣದಲ್ಲಿ ಹುಟ್ಟಿದ ಮಗುವು ಕಾಣಲಿಲ್ಲ. ಆಗ ಬ್ರಾಹ್ಮಣನಿಂದ ಚೆನ್ನಾಗಿ ನಿಂದಿತನಾದ ಪಾರ್ಥ, ವಿಷಾದದಿಂದ, ಯಾದವರಿಂದ ಕೂಡಿಕೊಂಡು ಎಲ್ಲಿ ಕೃಷ್ಣನಿದ್ದನೋ ಅಲ್ಲಿಗೆ ಹೋದ.

[ಭಾಗವತದಲ್ಲಿ(೧೦.೧೦೦.೪೮) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ಪ್ರದ್ಯುಮ್ನೋsಥಾನಿರುದ್ಧೋ ವಾ ನ ರಾಮೋ ನಚ ಕೇಶವಃ । ಯಸ್ಯ ಶೇಕುಃ  ಪರಿತ್ರಾತುಂ ಕೋsನ್ಯಸ್ತದಧಿಕೇಶ್ವರಃ’ . ಇನ್ನು ಹರಿವಂಶದಲ್ಲಿ(ವಿಷ್ಣುಪರ್ವ: ೧೧೨.೨೧) ಹೀಗೆ ಹೇಳಿದ್ದಾರೆ:  ನ ಪ್ರದ್ಯುಮ್ನೋ ನಾನಿರುದ್ಧೋ ನ ರಾಮೋ ನಚ ಕೇಶವಃ । ಯತ್ರ ಶಕ್ತಾಃ ಪರಿತ್ರಾತುಂ ಕೋsನ್ಯಸ್ತದವನೇಶ್ವರಃ’ ]

No comments:

Post a Comment