ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, December 11, 2021

Mahabharata Tatparya Nirnaya Kannada 21: 118-122

 

ವಯಂ ತ್ರಯಃ ಸಮೇತ್ಯ ತಂ ಪ್ರಯಾತಯಾಮ ಮೃತ್ಯವೇ ।

ಹನಿಷ್ಯತಿ ಸ್ಫುಟಂ ರಣೇ ವೃಕೋದರೋ ಜರಾಸುತಮ್             ೨೧.೧೧೮

 

ನಾವು ಮೂವರು ಸೇರಿ ಜರಾಸಂಧನನ್ನು ಯಮನಲ್ಲಿಗೆ ಕಳುಹಿಸುತ್ತೇವೆ. ಖಂಡಿತವಾಗಿ ಭೀಮಸೇನನು ಜರಾಸಂಧನನ್ನು ಯುದ್ಧದಲ್ಲಿ ಕೊಲ್ಲುತ್ತಾನೆ.

 

ಭಯಂ ನ ಕಾರ್ಯ್ಯಮೇವ ತೇ ಮಯಾ ಹತಃ ಸ ನೇತಿ ಹ ।

ಮಯಾ ಹಿ ನೀತಿಹೇತುತಃ ಸ್ವಯಂ ನ ಹನ್ಯತೇ ರಿಪುಃ               ೨೧.೧೧೯

  

ಸ ಶರ್ವಸಂಶ್ರಯಾಗ್ರಣೀರ್ಮ್ಮದಾಶ್ರಯೋತ್ತಮೇನ ತು ।

ನಿಹನ್ಯತೇ ಯದಾ ತದಾ ಪ್ರಕಾಶಿತಂ ಹಿ ಮೇ ಬಲಮ್               ೨೧.೧೨೦

 

ಜರಾಸಂಧ ಈವರೆಗೂ  ನನ್ನಿಂದ ಕೊಲ್ಲಲ್ಪಡಲಿಲ್ಲವೆಂದು ನೀನು ಭಯಪಡಬೇಡ. ನನ್ನಿಂದ ಒಂದು ನೀತಿಯನ್ನು ಪ್ರಕಾಶಿಸಲೋಸುಗ ಶತ್ರು ಕೊಲ್ಲಲ್ಪಡಲಿಲ್ಲ. ಅವನು ಶಿವನನ್ನು ಆಶ್ರಯಿಸಿರುವ ಭಕ್ತರಲ್ಲಿ ಅಗ್ರಗಣ್ಯನಾಗಿದ್ದಾನೆ. ಅಂತಹ ಅವನು ನನ್ನ ಭಕ್ತರಲ್ಲಿ ಅಗ್ರಗಣ್ಯನಾದ ಭೀಮಸೇನನಿಂದ ಕೊಲ್ಲಲ್ಪಡುತ್ತಾನೆ. ಹೀಗಾದರೆ ಆಗ ನನ್ನ ಬಲವು ಪ್ರಕಾಶಿಸಲ್ಪಡುತ್ತದೆ.

 

ಅತೋ ನ ಶಙ್ಕಿತಂ ಮನಃ ಕುರುಷ್ವ ಭೂಪತೇ ಕ್ವಚಿತ್ ।

ಪ್ರದರ್ಶಯಾಮಿ ತೇsನುಜೌ ನಿಹತ್ಯ ಮಾಗಧೇಶ್ವರಮ್             ೨೧.೧೨೧

 

ರಾಜನೇ, ನನ್ನ ಅಥವಾ ಭೀಮಾರ್ಜುನರ ವಿಷಯದಲ್ಲಿ ಕೊಲ್ಲುತ್ತಾರೋ ಇಲ್ಲವೋ ಎನ್ನುವ ಸಂಶಯಯುಕ್ತ ಮನಸ್ಸನ್ನು ಹೊಂದಬೇಡ. ಜರಾಸಂಧನನ್ನು ಕೊಂದು ಬಳಿಕ ನಿನ್ನ ತಮ್ಮಂದಿರನ್ನು ನಿನಗೆ ತೋರಿಸುತ್ತೇನೆ.

 

ಇತೀರಿತಃ ಸ ವಿಷ್ಣುನಾ ವಿಚಾರ್ಯ್ಯ ತದ್ಗುಣಾನ್ ಪರಾನ್ ।

ತಥೇತಿ ಚಾsಹ ತೇ ತ್ರಯಃ ಪ್ರತಸ್ಥುರಾಶು ಮಾಗಧಾನ್             ೨೧.೧೨೨

 

ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ಶ್ರೀಕೃಷ್ಣನ ಅತ್ಯುತ್ಕೃಷ್ಟವಾದ ಗುಣಗಳನ್ನು ಚೆನ್ನಾಗಿ ಚಿಂತಿಸಿ, ‘ಆಯಿತು’ ಎಂದು ಹೇಳಿದನು. ನಂತರ ಆ  ಮೂವರು ಕೂಡಲೇ ಜರಾಸಂಧನ ದೇಶವನ್ನು ಕುರಿತು ತೆರಳಿದರು.

No comments:

Post a Comment