ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 22, 2023

Mahabharata Tatparya Nirnaya Kannada 27-104-111

 

ತಚ್ಚ ಭೀಮಪುರೋಗೇಷು ಸೈನ್ಯೇಷ್ವಮುಚದುದ್-ಬ್ಲಣಮ್ ।

ತದಸ್ತ್ರಂ  ವರ್ಜ್ಜಯಾಮಾಸ ಭೀಮಂ ರಾಮಪ್ರಸಾದತಃ  ॥೨೭.೧೦೪ ॥

 

ಅತ್ಯಂತ ಭಯಂಕರವಾಗಿರುವ ಆ ಭಾರ್ಗವ ಅಸ್ತ್ರವನ್ನು ಕರ್ಣನು  ಭೀಮಸೇನನೇ ಮೊದಲಾಗಿ ಉಳ್ಳ ಸೈನ್ಯದಮೇಲೆ ಬಿಟ್ಟ. ಆ ಅಸ್ತ್ರವು ರಾಮನ ಅನುಗ್ರಹದಿಂದಾಗಿ ಭೀಮನನ್ನು ಬಿಟ್ಟಿತು.  

 

ಅನ್ಯೇ ತು ದುದ್ರುವುಃ ಕೇಚಿಚ್ಛಿಷ್ಟಾಃ ಪ್ರಾಪುರ್ಯ್ಯಮಕ್ಷಯಮ್ ।

ನಹ್ಯಸ್ತ್ರಂ ದ್ರವಮಾಣಾಂಸ್ತದ್ಧನ್ತಿ ತೇನ ಸಪಾರ್ಷತಾಃ ॥೨೭.೧೦೫ ॥

 

ಪಾಞ್ಚಾಲಾ ದ್ರೌಪದೇಯಾಶ್ಚ ಶೈನೇಯಾದ್ಯಾಶ್ಚ ಸರ್ವಶಃ ।

ಪಲಾಯನೇನೋರ್ವರಿತಾ ಅರ್ಜ್ಜುನೋSಪ್ಯಸ್ತ್ರಮುದ್ಯತಮ್  ॥೨೭.೧೦೬ ॥

 

ವೀಕ್ಷ್ಯ ಪ್ರತ್ಯಸ್ತ್ರಹೀನಂ ತದಪ್ರಾಪ್ಯೈವ ರವೇಃ ಸುತಮ್ ।

ವಾಸುದೇವಮಿದಂ ಪ್ರಾಹ ವರ್ಜ್ಜಯಿತ್ವೈವ ಸೂತಜಮ್  ॥೨೭.೧೦೭ ॥

 

ಆಗ ಕೆಲವರು ಓಡಿದರು. ಉಳಿದ ಕೆಲವರು ಯಮನ ಮನೆಯನ್ನು ಸೇರಿದರು(ಸತ್ತರು). ಆ ಅಸ್ತ್ರವು ಓಡುವವರನ್ನು ಕೊಲ್ಲುವುದಿಲ್ಲ, ಹೀಗಾಗಿ ಧೃಷ್ಟದ್ಯುಮ್ನ ಮೊದಲಾಗಿರುವ ಪಾಂಚಾಲರು, ದ್ರೌಪದಿಯ ಮಕ್ಕಳು, ಸಾತ್ಯಕಿ ಮೊದಲಾದವರು ಓಡಿದ್ದರಿಂದ ಬದುಕಿಕೊಂಡರು.   ಅರ್ಜುನನೂ ಕೂಡಾ ಪ್ರತ್ಯಸ್ತ್ರವಿಲ್ಲದ ಈ ಅಸ್ತ್ರವನ್ನು ಕಂಡು, ಆ ಅಸ್ತ್ರಕ್ಕೆ ಎದುರಾಗದಂತೆ ತೆರಳಬೇಕು ಎಂದು ನಿಶ್ಚಯಿಸಿ, ಕೃಷ್ಣನಲ್ಲಿ ‘ಕರ್ಣನನ್ನು ಬಿಟ್ಟು ಬೇರೆಕಡೆ ಹೋಗುತ್ತೇನೆ’ ಎಂದು ಹೇಳಿದ.

[ಮಹಾಭಾರತದಲ್ಲಿ(ಕರ್ಣಪರ್ವ ೬೭.೬೫) ಈಕುರಿತ ವಿವರಣೆ ಹೀಗಿದೆ -  ಏಷ ಕರ್ಣೋ ರಥೇ ಭಾತಿ ಮಧ್ಯಾಹ್ನ ಇವ ಭಾಸ್ಕರಃ । ನಿವರ್ತಯ ರಥಂ ಕೃಷ್ಣ ಜೀವನ್ ಭದ್ರಾಣಿ ಪಶ್ಯತಿ’  ‘ಈ ಕರ್ಣ ರಥದಲ್ಲಿ ನಡು ಹಗಲಿನ ಸೂರ್ಯನಂತೆ ಬೆಳಗುತ್ತಿದ್ದಾನೆ. ರಥವನ್ನು ಹಿಂದೆ ತೆಗೆ ಕೃಷ್ಣಾ, ಇಂದು ಬದುಕಿಕೊಂಡರೆ ಮುಂದೆ ಒಳ್ಳೆಯದಾಗುತ್ತದೆ’ ಎನ್ನುತ್ತಾನೆ ಅರ್ಜುನ.].

 

ಅನ್ಯತ್ರ ಯಾಮಿ ನೈವಾಸ್ಮಾದಸ್ತ್ರಾಜ್ಜೀವನಮನ್ಯಥಾ ।

ಇತ್ಯೂಚಿವಾಂಸಂ ಪಾರ್ತ್ಥಂ ತಂ ಕೃಷ್ಣೋSಪ್ರಾಪ್ಯೈವ ಸೂತಜಮ್ ॥೨೭.೧೦೮ ॥

 

ಅನ್ಯೇನೈವ ಪಥಾ ಭೀಮಂ ಪ್ರಾಪಯಾಮಾಸ ವಿಶ್ವಕೃತ್ ।

ತತ್ರಾರ್ಜ್ಜುನೋSವದದ್ ಭೀಮಂ ಯಾಹಿ ದ್ರಷ್ಟುಂ ಯುಧಿಷ್ಠಿರಮ್ ॥೨೭.೧೦೯ ॥

 

‘ಬೇರೆಕಡೆ ಹೋಗುತ್ತೇನೆ, ಇಲ್ಲದಿದ್ದರೆ ಈ ಅಸ್ತ್ರದಿಂದ ನಾನು ಬದುಕುಳಿಯುವುದಿಲ್ಲ’ ಎಂದು ಹೇಳುವ ಅರ್ಜುನನನ್ನು ಶ್ರೀಕೃಷ್ಣ, ಕರ್ಣನನ್ನು ಹೊಂದಿಸದೇ, ಬೇರೊಂದು ಮಾರ್ಗದಿಂದ ಭೀಮಸೇನನನ್ನು ಹೊಂದಿಸಿದ. ಅಲ್ಲಿ ಅರ್ಜುನನು ಭೀಮನನ್ನು ಕುರಿತು ‘ಯುಧಿಷ್ಠಿರನನ್ನು ನೋಡಿಕೊಂಡು ಬಾ’ ಎಂದು ಹೇಳಿದ.

 

ಪ್ರವೃತ್ತಿಂ ವಿದ್ಧಿ ಭೂಪಸ್ಯ ಮಾಂ ತು ಸಂಶಪ್ತಕಾ ಯುಧೇ ।

ಆಹ್ವಯನ್ತಿ ಹತೋಚ್ಛೇಷಾಸ್ತಾನಹಂ ಯಾಮಿ ತದ್ ಯುಧೇ ॥೨೭.೧೧೦ ॥

 

ರಾಜನ ಪ್ರವೃತ್ತಿ ಏನು ಎನ್ನುವುದನ್ನು ತಿಳಿ(ಯುಧಿಷ್ಠಿರ ಹೇಗಿದ್ದಾನೆ ಎಂದು ತಿಳಿ). ಅಳಿದು ಉಳಿದ ಸಂಶಪ್ತಕರು ಯುದ್ಧಕ್ಕಾಗಿ ಆಹ್ವಾನ ಮಾಡುತ್ತಿದ್ದಾರೆ. ನಾನು ಅವರನ್ನು ಕುರಿತು ಯುದ್ಧಕ್ಕಾಗಿ ತೆರಳುತ್ತಿದ್ದೇನೆ.

 

ಇತ್ಯೂಚಿವಾಂಸಂ ತಮುವಾಚ ಭೀಮೋ ಜಾನನ್ ಸ್ವಬಾಹ್ವೋರ್ಬಲಮಪ್ರಮೇಯಮ್ ।

ಸಂಶಪ್ತಕಾನ್ ಸೂತಜಂ ಕೌರವಾಂಶ್ಚ ಯೋತ್ಸ್ಯೇSಹಮೇಕಸ್ತ್ವಮುಪೈಹಿ ಭೂಪಮ್ ॥೨೭.೧೧೧ ॥

 

ಈರೀತಿಯಾಗಿ ಹೇಳುತ್ತಿರುವ ಅರ್ಜುನನನ್ನು ಕುರಿತು ಭೀಮಸೇನ, ತನ್ನ ಬಾಹುವಿನ ಎಣಿಯಿರದ ಬಲವನ್ನು ತಿಳಿದವನಾಗಿ ಹೇಳುತ್ತಾನೆ- ‘ನಾನೊಬ್ಬನೇ ಸಂಶಪ್ತಕರನ್ನೂ, ಕರ್ಣನನ್ನೂ, ದುರ್ಯೋಧನಾದಿಗಳನ್ನೂ ಎದುರಿಸಿ ಯುದ್ಧ ಮಾಡುತ್ತೇನೆ. ನೀನೇ ಹೋಗಿ ಯುಧಿಷ್ಠಿರನನ್ನು ನೋಡಿಕೊಂಡು ಬಾ’ ಎಂದು.  

[ಮಹಾಭಾರತದಲ್ಲಿ(ಕರ್ಣಪರ್ವ ೬೮. ೧೬-೧೮) ಈ ಕುರಿತು ಹೀಗೆ ಹೇಳಿದ್ದಾರೆ-ತ್ವಮೇವ ಜಾನೀಹಿ ಮಹಾನುಭಾವ ರಾಜ್ಞಃ ಪ್ರವೃತ್ತಿಂ ಭರತರ್ಷಭಸ್ಯ। ಅಹಂ ಹಿ ಯದ್ಯರ್ಜುನ ಯಾಂಯಮಿತ್ರಾ ವದಂತಿ ಮಾಂ ಭೀತ ಇತಿ ಪ್ರವೀರಾಃ । ತತೋSಬ್ರವೀದರ್ಜುನೋ ಭೀಮಸೇನಂ ಸಂಶಪ್ತಕಾಃ ಪ್ರತ್ಯನೀಕಸ್ಥಿತಾ ಮೇ। ಏತಾನಹತ್ವಾSದ್ಯ ಮಯಾ ನ ಶಕ್ಯಮಿತೋSಪಯಾತುಂ ರಿಪುಸಙಘಮಧ್ಯಾತ್ । ಅಥಾಬ್ರವೀದರ್ಜುನಂ ಭೀಮಸೇನಃ ಸ್ವವೀರ್ಯಮಾಸಾದ್ಯ ಕುರುಪ್ರವೀರ । ಸಂಶಪ್ತಕಾನ್ ಪ್ರತಿಯೋತ್ಸ್ಯಾಮಿ ಸಙ್ಖ್ಯೇ ಸರ್ವಾನಹಂ ಯಾಹಿ ಧನಂಜಯ ತ್ವಮ್’ ]

No comments:

Post a Comment