ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, May 19, 2023

Mahabharata Tatparya Nirnaya Kannada 27-94-98

 

ಅತೀತ್ಯ ಪುತ್ರಂ ತು ಗುರೋಃ ಸಮಾಗತೇ ಪಾರ್ತ್ಥೇ ಕರ್ಣ್ಣೋ ದ್ರಾವಯಾಮಾಸ ಸೇನಾಮ್ ।

ಪಾಣ್ಡೋಃ ಸುತಾನಾಂ ಶರವರ್ಷಧಾರೋ ದುರ್ಯ್ಯೋಧನಶ್ಚಾನು ಯಯೌ ತಮೇವ ॥೨೭.೯೪ ॥

 

ಈರೀತಿ ಗುರುಪುತ್ರ ಅಶ್ವತ್ಥಾಮನನ್ನು ದಾಟಿ ಅರ್ಜುನ ಬರುತ್ತಿರಲು, ಕರ್ಣನು ಪಾಂಡವರ ಸೇನೆಯನ್ನು ಬಾಣಗಳ ಮಳೆಯಿಂದ ಓಡಿಸಲಾರಮ್ಭಿಸಿದನು. ಅವನನ್ನು ಅನುಸರಿಸಿ, ದುರ್ಯೋಧನನು ಯುದ್ಧಕ್ಕೆಂದು ಬಂದನು.

 

ಕರ್ಣ್ಣಮಾಯಾನ್ತಮಾಲೋಕ್ಯ ದ್ರಾವಯನ್ತಂ ನಿಜಾಂ ಚಮೂಮ್ ।

ಧನುರನ್ಯತ್ ಸಮಾದಾಯ ಧೃಷ್ಟದ್ಯುಮ್ನೋ ನ್ಯವಾರಯತ್ ॥೨೭.೯೫ ॥

 

ಬರುತ್ತಿರುವ ಕರ್ಣನನ್ನು ಕಂಡು, ತನ್ನ ಸೇನೆಯನ್ನು ಓಡಿಸುತ್ತಿರುವ ಕರ್ಣನನ್ನು ಬೇರೊಂದು ಧನುಸ್ಸನ್ನು ಹಿಡಿದುಕೊಂಡ ಧೃಷ್ಟದ್ಯುಮ್ನನು ತಡೆದ.

 

ತಯೋರಾಸೀನ್ಮಹದ್ ಯುದ್ಧಂ ಚಿರಂ ಸಮಮವಿಶ್ರಮಮ್ ।

ತದೈವ ಸಾತ್ಯಕಿರ್ವೀರೋ ದುರ್ಯ್ಯೋಧನಮವಾರಯತ್ ॥೨೭.೯೬ ॥

 

ಅವರಿಬ್ಬರ ನಡುವೆ ಧೀರ್ಘಕಾಲದ, ಸಮವಾಗಿರುವ, ವಿಶ್ರಾಂತಿಯೇ ಇಲ್ಲದ ದೊಡ್ಡ ಯುದ್ಧವು ನಡೆಯಿತು. ಆಗಲೇ ಸಾತ್ಯಕಿಯು ದುರ್ಯೋಧನನನ್ನು ತಡೆದ.

 

ನಿವಾರಿತಃ ಸಾತ್ಯಕಿನಾ ರಣೇ ದುರ್ಯ್ಯೋಧನೋ ನೃಪಃ ।

ನಿಹತ್ಯ ಸಾತ್ಯಕೇರಶ್ವಾನ್ ದ್ರೌಪದೇಶ್ಚಾಪಮಚ್ಛಿನತ್ ॥೨೭.೯೭ ॥

 

ಸಾತ್ಯಕಿಯಿಂದ ತಡೆಯಲ್ಪಟ್ಟ ರಾಜಾ ದುರ್ಯೋಧನನು-ಯುದ್ಧದಲ್ಲಿ ಸಾತ್ಯಕಿಯ ಕುದುರೆಗಳನ್ನು ಕೊಂದು, ಧೃಷ್ಟದ್ಯುಮ್ನನ ಬಿಲ್ಲನ್ನು ಕತ್ತರಿಸಿದನು.

 

ತದನ್ತರೈವ ಕರ್ಣ್ಣೋSಪಿ ಪಾರ್ಷತಾಶ್ವಾನಪಾತಯತ್ ।

ತಯೋರ್ವಿರಥಯೋರೇವ ಭಗ್ನಂ ತತ್ ಪಾಣ್ಡವಂ ಬಲಮ್ ॥೨೭.೯೮ ॥

 

ಅದೇ ಸಂಧರ್ಭದಲ್ಲಿ ಕರ್ಣನು ಧೃಷ್ಟದ್ಯುಮ್ನನ ಕುದುರೆಗಳನ್ನು ಸಾಯಿಸಿದ. ಹೀಗೆ ಸಾತ್ಯಕಿ ಮತ್ತು ಧೃಷ್ಟದ್ಯುಮ್ನ ಇಬ್ಬರೂ ರಥಹೀನರಾಗಲು, ಪಾಂಡವ ಸೇನೆಯು ಸೋತಿತು.

No comments:

Post a Comment