ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, May 20, 2023

Mahabharata Tatparya Nirnaya Kannada 27-99-103

 

ಬಲಂ ಸ್ವಕೀಯಂ ಬಹುಧಾ ವಿಭಿನ್ನಂ ಸಮೀಕ್ಷ್ಯ ಭೀಮೋ ಮೃಗರಾಜಕೇತುಃ ।

ಕೃತ್ವಾ ಧರಾಕಮ್ಪಕಮುಗ್ರನಾದಂ ರಣೇSಭ್ಯಯಾತ್  ಕೌರವರಾಜಸೈನ್ಯಮ್ ॥೨೭.೯೯ ॥

 

ಹೀಗೆ ತಮ್ಮ ಸೇನೆಯು ಬಹುಪ್ರಕಾರವಾಗಿ ನಾಶವಾದುದ್ದನ್ನು ನೋಡಿದ, ಸಿಂಹವೇ ಧ್ವಜದ ಲಾಂಛನವಾಗಿ ಉಳ್ಳ ಭೀಮಸೇನನು, ಭೂಮಿಯನ್ನೇ ನಡುಗಿಸುವ ಭಯಂಕರ ಗರ್ಜನೆಯನ್ನು ಮಾಡಿ, ದುರ್ಯೋಧನನ ಸೇನೆಯನ್ನು ಯುದ್ಧದಲ್ಲಿ ಎದುರುಗೊಂಡನು.

 

ನಾದೇನ ಬಾಣೈಶ್ಚ ವೃಕೋದರೇಣ ಭಗ್ನಂ ತದಾ ಕೌರವಸೈನ್ಯಮಾಶು ।

ದಿಶೋ ವಿದುದ್ರಾವ ಸುಯೋಧನೋSಪಿ ಕೃತೋ ರಣೇ ತೇನ ವಿವಾಹನಾಯುಧಃ ॥೨೭.೧೦೦ ॥

 

ಸಿಂಹ ನಾದದಿಂದಲೂ, ಬಾಣಗಳಿಂದಲೂ, ಭೀಮಸೇನನಿಂದ ನಾಶಗೊಂಡ ಕೌರವಸೇನೆಯು ದಿಕ್ಕು-ದಿಕ್ಕುಗಳಲ್ಲಿ ಓಡಿತು. ದುರ್ಯೋಧನನೂ ಕೂಡಾ ಭೀಮನಿಂದ ರಥಹೀನ ಹಾಗೂ ಆಯುಧಹೀನನಾದನು.

 

ದೃಷ್ಟ್ವೈವ ತತ್ ಪಾಣ್ಡವಾನಾಂ ಚ ಸೇನಾ ಸಮಾವೃತ್ತಾ ಕ್ಷಿಪ್ರಮವಾರ್ಯ್ಯವೇಗಾ ।

ತಯಾ ಪುನಃ ಕೌರವಾಣಾಂ ಬಲಂ ತದ್ ಭಗ್ನಂ ದೂರಾದ್ ದೂರತರಂ ಪ್ರದುದ್ರುವೇ ॥೨೭.೧೦೧ ॥

 

ಇದನ್ನು ಕಂಡ ಓಡಿಹೋಗುತ್ತಿದ್ದ ಪಾಂಡವರ ಸೇನೆಯು ಶೀಘ್ರದಲ್ಲಿ  ಮರಳಿ ಬಂದು ಒಂದಾಯಿತು. ಎಣಿಸಲಾರದ ವೇಗದಿಂದ ಪಾಂಡವ ಸೇನೆಯಿಂದ ಕೌರವರ ಸೇನೆಯು ನಾಶವಾದದ್ದಾಗಿ ದೂರ-ದೂರಕ್ಕೆ ಓಡಿಹೋಯಿತು.

 

ಹನ್ಯಮಾನಂ ದಿಶೋ ಯಾತಂ ಪಾಞ್ಚಾಲೈರ್ಭೀಮಸಂಶ್ರಯಾತ್ ।

ಸುಯೋಧನಬಲಂ ದೃಷ್ಟ್ವಾ ಜಜ್ವಾಲಾSಧಿರಥಿಃ ಕ್ರುಧಾ ॥೨೭.೧೦೨ ॥

 

ಹೀಗೆ ಭೀಮನ ಬೆಂಗಾವಲಿನಿಂದ ಕೂಡಿಕೊಂಡ ಪಾಂಚಾಲದೇಶದವರಿಂದ ನಾಶಮಾಡಲ್ಪಟ್ಟು ದಿಕ್ಕು-ದಿಕ್ಕುಗಳಿಗೆ ಚಲ್ಲಪಿಲ್ಲಿಯಾಗಿ ಓಡುತ್ತಿರುವ ದುರ್ಯೋಧನನ ಸೇನೆಯನ್ನು ಕಂಡು, ಕರ್ಣನು ಸಿಟ್ಟಿನಿಂದ ಉರಿದನು.  

 

ಸೋSಮೋಘಂ ರಾಮದೇವತ್ಯಮಸ್ತ್ರಂ ಭಾರ್ಗ್ಗವಸಂಜ್ಞಿತಮ್ ।

ಸರ್ವಾಸ್ತ್ರನಾಶಕಂ ದಿವ್ಯಮಪ್ರತಿದ್ವನ್ದ್ವಮಾದದೇ ॥೨೭.೧೦೩ ॥

 

ಅವನು ಪರಶುರಾಮನೇ ದೇವತೆಯಾಗಿ ಉಳ್ಳ, ಭಾರ್ಗವ ಎಂಬ ಹೆಸರಿನ, ಎಲ್ಲಾ ಅಸ್ತ್ರವನ್ನೂ ನಾಶಮಾಡುವ, ಅಲೌಕಿಕವಾಗಿರುವ, ಎಣೆಯಿರದ, ಎಂದೂ ವ್ಯರ್ಥವಲ್ಲದ ಅಸ್ತ್ರವನ್ನು ತೆಗೆದುಕೊಂಡನು.

No comments:

Post a Comment