ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 9, 2022

Mahabharata Tatparya Nirnaya Kannada 22-332-336

 

ಸರ್ವೇ ಹತಾಸ್ತೇನ ಮಹಾರಥೇನ ತೇ ದಾನವಾಃ ಸೋSಪಿ ಯಯೌ ತಥಾSನ್ಯಾನ್ ।

ಪೌಲೋಮಕಾಲೇಯಗಣಾಭಿಧಾನಾನ್ ಷಷ್ಟಿಂ ಸಹಸ್ರಾಣಿ ಮಹಾರಥಾನಾಮ್ ॥೨೨.೩೩೨॥

 

ಆ ಮಹಾರಥನಾದ ಅರ್ಜುನನಿಂದ ಆ ಎಲ್ಲಾ ನಿವಾತಕವಚ ರಾಕ್ಷಸರು ಕೊಲ್ಲಲ್ಪಟ್ಟರು. ತದನಂತರ ಅರ್ಜುನನು ನಿವಾತಕವಚರಿಗಿಂತ ವಿಲಕ್ಷಣರಾದ, ಪೌಲೋಮಗಣ ಮತ್ತು ಕಾಲೇಯಗಣ ಎಂಬ ಹೆಸರುಳ್ಳ ಅರವತ್ತು ಸಾವಿರ ಸಂಖ್ಯೆಯ ದೈತ್ಯರನ್ನು ಕುರಿತು ತೆರಳಿದನು.

 

ತಾನಸ್ತ್ರಶತ್ರಾಣ್ಯಭಿವರ್ಷಮಾಣಾನ್ ಧನಞ್ಜಯಃ ಪಾಶುಪತಾಸ್ತ್ರತೋ ದ್ರಾಕ್ ।

ದಗ್ಧ್ವಾ ಯಯೌ ಪುನರೇವೇನ್ದ್ರಸದ್ಮ ತಂ ಸಸ್ವಜೇ ಪ್ರೀತಿಯುತಶ್ಚ ಶಕ್ರಃ ॥೨೨.೩೩೩॥

 

ಅಸ್ತ್ರಗಳನ್ನೂ ಶಸ್ತ್ರಗಳನ್ನೂ ಎಸೆಯುವ ಅವರನ್ನು ಧನಞ್ಜಯನು ಶೀಘ್ರದಲ್ಲಿಯೇ ಪಾಶುಪತಾಸ್ತ್ರದಿಂದ ಸುಟ್ಟು, ಪುನಃ ಇಂದ್ರನ ಮನೆಗೆ ತೆರಳಿದನು. ಇಂದ್ರನು ಅತ್ಯಂತ ಪ್ರೀತಿಯಿಂದ ಅರ್ಜುನನನ್ನು ಆಲಿಂಗಿಸಿದನು.

 

ಯಯುರನ್ಧಂ ತಮಸ್ತೇSಪಿ ಸರ್ವದೇವದ್ವಿಷೋSಸುರಾಃ ।

ಅಥಾನುಜ್ಞಾಪ್ಯ ಪಿತರಂ ರಥೇನೈನ್ದ್ರೇಣ ಭಾಸ್ವತಾ ।

ಸೋದರ್ಯ್ಯಾಣಾಂ ಸಕಾಶಂ ಸ ಯಯೌ ವಜ್ರಧರಾತ್ಮಜಃ ॥೨೨.೩೩೪॥

 

ದೇವದ್ವೇಷಿಗಳಾದ ಆ ಎಲ್ಲಾ ಅಸುರರು ಆನ್ಧಂತಮಸ್ಸನ್ನು ಹೊಂದಿದರು. ತದನಂತರ ತಂದೆಯಾದ ಇಂದ್ರನ ಅಣತಿಯನ್ನು ಪಡೆದು, ಪ್ರಕಾಶಮಾನವಾದ ಇಂದ್ರನ ರಥದ ಮೂಲಕ ಅರ್ಜುನನು ತನ್ನ ಅಣ್ಣ-ತಮ್ಮಂದಿರರಿರುವಲ್ಲಿಗೆ ತೆರಳಿದನು.   

 

ಆಯಾನ್ತಮೀಕ್ಷ್ಯ ಬೀಭತ್ಸುಂ ಮುಮುದುರ್ಭ್ರಾತರೋSಧಿಕಮ್ ।

ಊಷುಶ್ಚ ಚತುರೋSಬ್ದಾಂಸ್ತೇ ಪುನರ್ಮ್ಮೇರೌ ಪ್ರಮೋದಿನಃ ॥೨೨.೩೩೫॥

 

ಆ ಎಲ್ಲಾ ಸಹೋದರರು ಬಂದಿರುವ ಬೀಭತ್ಸುವನ್ನು(ಅರ್ಜುನನನ್ನು) ಕಂಡು ಅತ್ಯಂತ ಸಂತೋಷಪಟ್ಟರು. ಅವರು ಪುನಃ ಮೇರುಪರ್ವತದಲ್ಲಿಯೇ ಆನಂದಿಗಳಾಗಿ ನಾಲ್ಕುವರ್ಷಗಳ ಕಾಲ ವಾಸಮಾಡಿದರು.

 

ಕಥಾಭಿರ್ವಾಸುದೇವಸ್ಯ ದ್ಧ್ಯಾನೇನಾಭ್ಯರ್ಚ್ಚನೇನ ಚ 

ಯಯೌ ಕಾಲಃ ಸುಖೇನೈವ ತೇಷಾಂ ವಿಷ್ಣುರತಾತ್ಮನಾಮ್ ॥೨೨.೩೩೬॥

 

ಪರಮಾತ್ಮನ ಕಥೆಗಳಿಂದಲೂ, ಪರಮಾತ್ಮನ ಗುಣಗಣ ಚಿಂತನೆಯಿಂದಲೂ, ಪೂಜೆಯಿಂದಲೂ, ವಿಷ್ಣುಭಕ್ತರಾದ ಅವರ ಕಾಲವು ಸುಖವಾಗಿ ಸಾಗಿತು.

No comments:

Post a Comment