ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, January 31, 2019

Mahabharata Tatparya Nirnaya Kannada 11.207-11.210


ವ್ಯಾಸಾವತಾರೇ ನಿಹತಸ್ತ್ವಯಾ ಯಃ ಕಲಿಃ ಸುಶಾಸ್ತ್ರೋಕ್ತಿಭಿರೇವ ಚಾದ್ಯ ।
ಶ್ರುತ್ವಾ ತ್ವದುಕ್ತೀಃ ಪುರುಷೇಷು ತಿಷ್ಠನ್ನೀಷಚ್ಚಕಾರೇವ ಮನಸ್ತ್ವಯೀಶ ॥೧೧.೨೦೭      

ಎಲೋ ಶ್ರೀಹರಿಯೇ,  ನಿನ್ನಿಂದ  ವೇದವ್ಯಾಸ ಅವತಾರದಲ್ಲಿ ಒಳ್ಳೆಯ ಶಾಸ್ತ್ರೀಯವಾದ ಮಾತುಗಳಿಂದ ಪುರುಷರ ಮನಸ್ಸಿನೊಳಗಿನ ಯಾವ ಕಲಿಯು ಕೊಲ್ಲಲ್ಪಟ್ಟಿದ್ದನೋ,  ಅವನೂ ಕೂಡಾ ಈಗ ಸತ್ಪುರುಷರಲ್ಲಿದ್ದು, ನಿನ್ನ ಉಕ್ತಿಗಳನ್ನು ಕೇಳಿ, ನಿನ್ನಲ್ಲಿ ಸ್ವಲ್ಪಮಟ್ಟಿಗೆ ಮನಸ್ಸು ಮಾಡಿದ್ದಾನೋ ಎಂಬಂತಿದ್ದಾನೆ.

ರಾಮಾತ್ಮನಾ ಯೇ ನಿಹತಾಶ್ಚ ರಾಕ್ಷಸಾ ದೃಷ್ಟ್ವಾ ಬಲಂ ತೇsಪಿ ತದಾ ತವಾದ್ಯ ।
ಸಮಂ ತವಾನ್ಯಂ ನಹಿ ಚಿನ್ತಯನ್ತಿ ಸುಪಾಪಿನೋsಪೀಶ ತಥಾ ಹನೂಮತಃ ॥೧೧.೨೦೮

ಈಶನೇ, ರಾಮನಾಗಿದ್ದಾಗ ನಿನ್ನಿಂದ ಯಾವ ರಾಕ್ಷಸರು ಕೊಲ್ಲಲ್ಪಟ್ಟಿದ್ದಾರೋ, ಅಂತಹ,  ಆಗ ನಿನ್ನ ಬಲವನ್ನು ಕಂಡ ಅವರೂ ಕೂಡಾ, ಈಗ ನಿನಗೆ ಸದೃಶನು  ಇನ್ನೊಬ್ಬನಿಲ್ಲಾ ಎಂದು ಚಿಂತಿಸುತ್ತಿದ್ದಾರೆ! ಅಷ್ಟೇ ಅಲ್ಲ,  ಅತ್ಯಂತ ಪಾಪಿಷ್ಠರಾಗಿರುವ ಅವರು  ಹನುಮಂತನಿಗೆ ಸಮನಾದ ಮತ್ತೊಬ್ಬನನ್ನು ಚಿಂತನೆ ಮಾಡುತ್ತಿಲ್ಲ.  (ಅಂಧಂತಮಸ್ಸಿಗೆ ಹೋಗಬೇಕಾದ ಈ ಪಾಪಿಷ್ಠರು ಸತ್ಯಜ್ಞಾನದತ್ತ ಹೊರಳುತ್ತಿದ್ದಾರೆ).

ಯೇ ಕೇಶವ ತ್ವದ್ಬಹುಮಾನಯುಕ್ತಾಸ್ತಥೈವ ವಾಯೌ ನಹಿ ತೇ ತಮೋsನ್ಧಮ್ ।
ಯೋಗ್ಯಾಃ ಪ್ರವೇಷ್ಟುಂ ತದತೋ ಹಿ ಮಾರ್ಗ್ಗಾರ್ಚ್ಚಾಲ್ಯಾಸ್ತ್ವಯಾ ಜನಯಿತ್ವೈವ ಭೂಮೌ ॥೧೧.೨೦೯     

ಓ ಕೇಶವನೇ, ನಿನ್ನಲ್ಲಿ ಮಹತ್ತ್ವಬುದ್ಧಿಯಿಂದೊಡಗೂಡಿದವರು ಹಾಗೂ ವಾಯುವಿನಲ್ಲಿಯೂ ಕೂಡಾ ಗೌರವ ಭಕ್ತಿಯಿಂದ  ಕೂಡಿರುವರು ಅಂಧಂತಮಸ್ಸನ್ನು ಪ್ರವೇಶಿಸಲು ಯೋಗ್ಯರಲ್ಲ. ಆ ಕಾರಣದಿಂದ ಈ ದೈತ್ಯರು, ನಿನ್ನಿಂದ ಭೂಮಿಯಲ್ಲಿ ಹುಟ್ಟಿಯೇ  ಒಳ್ಳೆಯ ಮಾರ್ಗದಿಂದ ಚ್ಯುತಿಗೊಳಿಸಬೇಕಾದವರಾಗಿದ್ದಾರೆ.

ನಿತಾನ್ತಮುತ್ಪಾದ್ಯ ಭವದ್ವಿರೋಧಂ ತಥಾ ಚ ವಾಯೌ ಬಹುಭಿಃ ಪ್ರಕಾರೈಃ ।
ಸರ್ವೇಷು ದೇವೇಷು ಚ ಪಾತನೀಯಾಸ್ತಮಸ್ಯಥಾನ್ಧೇ ಕಲಿಪೂರ್ವಕಾಸುರಾಃ ॥೧೧.೨೧೦

ನಿನ್ನ ವಿರೋಧವನ್ನು, ಹಾಗೆಯೇ ವಾಯುವಿನಲ್ಲಿ ಮತ್ತು ಎಲ್ಲಾ ದೇವತೆಗಳಲ್ಲಿ ವಿರೋಧವನ್ನು ಬಹಳ ಪ್ರಕಾರಗಳಿಂದ ಹುಟ್ಟಿಸಿ ,  ಅದರಿಂದ ಪಾಪಿಷ್ಠರಾದ ಕಲಿ ಮೊದಲಾದ ಅಸುರರು ಅಂಧಂತಮಸ್ಸಿನಲ್ಲಿ ಬೀಳಿಸಲ್ಪಡುವಂತಾಗಬೇಕು.

No comments:

Post a Comment