ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, November 27, 2022

Mahabharata Tatparya Nirnaya Kannada 23-07-10

 

ಶಾಪಾದೇವಾರ್ಜ್ಜುನಃ ಷಣ್ಢವೇಷೋsಭೂನ್ನಕುಲಸ್ತಥಾ ।

ಕ್ಷತ್ರಿಯಾನನ್ತರತ್ವಾತ್ತು ಸೂತಜಾತೇಸ್ತಥಾsಭವತ್ ॥೨೩.೦೭॥

 

ಊರ್ವಶಿಯ ಶಾಪದಿಂದಾಗಿ ಅರ್ಜುನ ಷಣ್ಢವೇಷದವನಾದ. ಹಾಗೆಯೇ ನಕುಲನು ಕ್ಷತ್ರಿಯಜಾತಿಯ ನಂತರದ ಸೂತಜಾತಿ ವೇಷದವನಾದ.

 

ಸೂತಸ್ಯಾನನ್ತರತ್ವಾತ್ತು ವೈಶ್ಯಜಾತೇಸ್ತಥಾSಭವತ್ ।

ಸಹದೇವೋ  ವೈಶ್ಯಜಾತಿರ್ಗ್ಗೋಪಾಲಸ್ತೇಷು ಚೋತ್ತಮಃ ।

ತತೋ ಗೋಪಾಲತಾಮಾಪ ಯತಿಃ ಪೂಜ್ಯೋSಖಿಲೈರ್ಯ್ಯತಃ ॥೨೩.೦೮॥

 

ಸೂತನ ನಂತರ ವೈಶ್ಯಜಾತಿ ಬರುವುದರಿಂದ ಸಹದೇವನು ವೈಶ್ಯಜಾತಿಯ ವೇಷವನ್ನು ಧರಿಸಿಕೊಂಡ. ವೈಶ್ಯ ಜಾತಿಯಲ್ಲಿ ಗೋಪಾಲಕ ಶ್ರೇಷ್ಠ. ಅದರಿಂದಲೇ ಅವನು ಗೋಪಾಲಕನಾದ.

 

ಯತಿರಾಸೀದ್ ಧರ್ಮ್ಮಜೋSತಃ ಸೋSಭ್ಯಾಸಾರ್ತ್ಥಂ ಸದೈವ  ಚ ।

ಅಕ್ಷಾಸಕ್ತೋSಭವತ್ ಪಶ್ಚಾದ್ ದರ್ಶಯಿಷ್ಯನ್ ಸ್ವಶಿಷ್ಟತಾಮ್ ॥೨೩.೦೯॥

 

ಯಾವ ಕಾರಣದಿಂದ ಯತಿಯು ಎಲ್ಲಾ ವರ್ಣಾಶ್ರಮದವರಿಂದಲೂ ಪೂಜ್ಯನೋ, ಆ ಕಾರಣದಿಂದ ಧರ್ಮರಾಜನು ಯತಿಯಾದನು. ಅವನು ಯಾವಾಗಲೂ ಅಭ್ಯಾಸ ಮಾಡುವುದಕ್ಕಾಗಿ ಜೂಜಿನಲ್ಲಿಯೇ ರಥನಾದನು. ತಾನು ಜೂಜಿನಲ್ಲಿ ಎಷ್ಟು ಪರಿಣತ ಎಂದು ಜಗತ್ತಿಗೆ ತೋರಿಸಲು ಅವನು ಹೀಗೆ ಮಾಡಿದ.

 

ಭೀಮಸೇನಸಧರ್ಮ್ಮಾರ್ತ್ಥಂ ಶೂದ್ರಾ ಸೈರನ್ಧ್ರಿಕಾSಭವತ್ ।

ದ್ರೌಪದೀ ಭರ್ತ್ತೃಸಾಧರ್ಮ್ಮೈಂ ಸ್ತ್ರೀಣಾಂ ಧರ್ಮ್ಮೋ ಯತಃ ಸದಾ ॥೨೩.೧೦॥

 

ದ್ರೌಪದಿಯು ಭೀಮಸೇನನ ಸಾದೃಶ್ಯವನ್ನು ಹೊಂದಲು ಸೈರನ್ಧ್ರಿಯಾದಳು. ಸ್ತ್ರೀಯರಿಗೆ ಗಂಡನ ಸಾದೃಶ್ಯ ಎನ್ನುವುದು ಅಪೇಕ್ಷಿತ. (ಭೀಮಸೇನ ಶೂದ್ರವೇಷವನ್ನು ಧರಿಸಿದ್ದಾನೆ. ಅದರಿಂದಾಗಿ ದ್ರೌಪದಿಯೂ ಕೂಡಾ)

No comments:

Post a Comment