ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, October 2, 2023

Mahabharata Tatparya Nirnaya Kannada 31-71-76

 ಪಾರ್ತ್ಥಾಃ ಪುನಃ ಪ್ರಾಪ್ಯ ಪುರಂ ಸ್ವಕೀಯಂ ಧರ್ಮ್ಮೇಣ ಪೃಥ್ವೀಂ ಪರಿಪಾಲಯನ್ತಃ ।

ಭೋಗಾನರಾಗಾ ಅಜುಷನ್ತ ಯೋಗ್ಯಾನ್ ಯುಕ್ತಾ ಜಗದ್ಧಾತರಿ ವಾಸುದೇವೇ ॥ ೩೧.೭೧ ॥

 

ಪಾಂಡವರು ಮತ್ತೆ ತಮ್ಮ ಪಟ್ಟಣವನ್ನು ಹೊಂದಿ, ಧರ್ಮದಿಂದ ಭೂಮಿಯನ್ನು ಪಾಲನೆಮಾಡುತ್ತಾ, ಜಗದೊಡೆಯನಾದ ಕೃಷ್ಣನಲ್ಲಿ ಧ್ಯಾನ ಮಾಡುತ್ತಿದ್ದು, ಅವನಲ್ಲಿಯೇ ಮನಸ್ಸನ್ನು ನೆಟ್ಟಿದ್ದು, ಯಾವುದೇ ಸಲ್ಲದ ಬಯಕೆ ಇಲ್ಲದೇ, ಯೋಗ್ಯವಾದ ಭೋಗಳನ್ನು ಅನುಭವಿಸಿದರು.

 

ವರ್ಷತ್ರಯಾನ್ತೇ ತ್ಮಸಮಾಹಿತಾಗ್ನಿಂ ತ್ಯಕ್ತಾಗ್ನಿಭಿಸ್ತೈರ್ವನಮಾಲಿಹದ್ಭಿಃ ।

ತೇ ಶುಶ್ರುವುರ್ದ್ಧೃತರಾಷ್ಟ್ರಂ ಸಭಾರ್ಯ್ಯಂ ಸಹೈವ ಕುನ್ತ್ಯಾ ಪರಿದಗ್ಧದೇಹಮ್ ॥ ೩೧.೭೨ ॥

 

ಮೂರು ವರ್ಷಗಳಾದ ಮೇಲೆ, ಅಗ್ನಿಹೊತ್ರವನ್ನು ಬಿಟ್ಟ ಧೃತರಾಷ್ಟ್ರನು, ತನ್ನೆದೆಯಲ್ಲಿ ಔಪಾಸನಾಗ್ನಿಯನ್ನಿಟ್ಟುಕೊಂಡು, ಆ ವನವನ್ನು ಪ್ರವೇಶಮಾಡುತ್ತಾ ಅಗ್ನಿಯನ್ನು ಆವಾಹಿಸಿಕೊಂಡನು. ಹೀಗೆ ತನ್ನ ಹೆಂಡತಿಯಿಂದ ಕೂಡಿಕೊಂಡ ಧೃತರಾಷ್ಟ್ರನನ್ನು ಕುಂತಿಯು ಜೋತೆಗೂಡಿಯೇ, ಎಲ್ಲರೂ ತಮ್ಮ ದೇಹವನ್ನು ದಹಿಸಿಕೊಂಡರು ಎನ್ನುವ ಸುದ್ದಿಯನ್ನು ಪಾಂಡವರೆಲ್ಲರು(ಸಂಜಯನಿಂದ) ಕೇಳಿದರು.  

 

ವ್ರೀಳಾಮುಖಾ ದ್ಧ್ಯಾನಪರಾ ನಿಶಮ್ಯ ಸ್ವರ್ಯ್ಯಾತಮಾತ್ಮೀಯಪಿತೃವ್ಯಮಾಶು ।

ಸಮೇತ್ಯ ಭರ್ತ್ರಾ ಪ್ರತಿಪೂಜ್ಯಮಾನಾಂ ಕುನ್ತೀಂ ಚ ತಪ್ತಾ ವಿದಧುಃ ಕ್ರಿಯಾಶ್ಚ ॥ ೩೧.೭೩ ॥

 

ನಾಚಿಕೆಯಿಂದ ಕೆಳಗೆ ಮಾಡಲ್ಪಟ್ಟ ಮುಖವುಳ್ಳ, ಧ್ಯಾನದಲ್ಲಿಯೇ ತೊಡಗಿದ, ಸ್ವರ್ಗಲೋಕವನ್ನು ಹೊಂದಿದ ದೊಡ್ಡಪ್ಪನ ಕುರಿತು ಕೇಳಿ, ಧ್ಯಾನದಲ್ಲಿಯೇ ಆಸಕ್ತಳಾಗಿ ಗಂಡನಿಂದ ಕೂಡಿಕೊಂಡು ಪೂಜಿಸಲ್ಪಡುತ್ತಿರುವ ತಾಯಿ ಕುಂತಿಯನ್ನು ಕೇಳಿ, ಸಂಕಟಪಟ್ಟು, ಪಾಂಡವರು, ಔರ್ಧ್ವದೈಹಿಕ ಕರ್ಮಗಳನ್ನು ಮಾಡಿದರು.

 

ತೇ ವಿಷ್ಣುಭಕ್ತ್ಯಾ ಪರಿಪೂತಕರ್ಮ್ಮಭಿರ್ಜ್ಞಾನೇನ ಚಾನ್ತೇ ತಮನುಸ್ಮರನ್ತಃ ।

ಪಾರ್ತ್ಥೈಃ ಸುಪುತ್ರೈಃ ಸುಕೃತೋರ್ಧ್ವಕರ್ಮ್ಮಭಿರ್ವೃದ್ಧಿಂ ಸುಖಸ್ಯಾSಪುರನಪ್ಯಯಾಂ ಶುಭಾಮ್ ॥ ೩೧.೭೪ ॥

 

ಆ ಮೂವರು (ಕುಂತಿ, ಗಾಂಧಾರಿ, ಧೃತರಾಷ್ಟ್ರರು) ತಮ್ಮ ಅಂತಿಮಕಾಲದಲ್ಲಿ ವಿಷ್ಣುಭಕ್ತಿಯಿಂದ, ಪವಿತ್ರವಾದ ಕರ್ಮಗಳಿಂದಲೂ, ಜ್ಞಾನದಿಂದಲೂ, ತಮ್ಮ ಮಕ್ಕಳಾದ ಪಾಂಡವರು ಮಾಡಿದ ಔರ್ಧ್ವದೈಹಿಕ ಕರ್ಮಗಳಿಂದಲೂ, ಒಳ್ಳೆಯ ಲೋಕಕ್ಕೆ ತೆರಳಿ, ಎಣೆಯಿರದ ಮಂಗಳವಾದ ಸುಖದ ಅಭಿವೃದ್ಧಿಯನ್ನು ಹೊಂದಿದರು.

 

ಗಾವದ್ಗಣಿರ್ವ್ಯಾಸಸಕಾಶಮೇತ್ಯ ಶುಶ್ರೂಷಯಾ ತಸ್ಯ ಪುನರ್ನ್ನಿಜಾಂ ಗತಿಮ್ ।

ಪ್ರಪೇದಿವಾನ್ ಪಾಣ್ಡುಸುತಾಶ್ಚ ಕೃಷ್ಣಂ ಪ್ರತೀಕ್ಷಮಾಣಾಃ ಪೃಥಿವೀಮಶಾಸನ್ ॥ ೩೧.೭೫ ॥

 

ಗಾವದ್ಗಣಿ ಸಂಜಯನು ವೇದವ್ಯಾಸರ ಬಳಿಗೆ ತೆರಳಿ, ವೇದವ್ಯಾಸರ ಸೇವೆಯಿಂದ ತನಗೆ ಯೋಗ್ಯವಾದ ಲೋಕವನ್ನು ಹೊಂದಿದನು. ಪಾಂಡವರು ಶ್ರೀಕೃಷ್ಣ ಪರಂಧಾಮಕ್ಕೆ ತೆರಳುವುದನ್ನು ನಿರೀಕ್ಷಿಸುತ್ತಾ,  ಭೂಮಿಯನ್ನು ರಕ್ಷಿಸುತ್ತಿದ್ದರು.

 

ಅಷ್ಟಾದಶಾಬ್ದಾಃ ಪೃಥಿವೀಂ ಸಮಸ್ತಾಂ ಪ್ರಶಾಸತಾಮೇವಮಗುರ್ಮ್ಮಹಾತ್ಮನಾಮ್ ।

ಅರಿಕ್ತಧರ್ಮ್ಮಾರ್ತ್ಥಸುಖೋತ್ತಮಾನಾಮನುಜ್ಝಿತಾನನ್ತಪದಸ್ಮೃತೀನಾಮ್ ॥ ೩೧.೭೬ ॥

 

ಹೀಗೆ, ಮಹಾತ್ಮರಾಗಿರುವ, ಧರ್ಮ-ಅರ್ಥ ಮೊದಲಾದವುಗಳನ್ನು ಬಿಡದೇ, ಸುಖದಿಂದ ಉತ್ಕೃಷ್ಟರಾಗಿರುವ, ಪರಮಾತ್ಮನ ಸ್ಮರಣೆಯನ್ನು ಎಂದೂ ಬಿಡದ, ಇಡೀ ಭೂಮಿಯನ್ನು ಆಳುತ್ತಿರುವ ಪಾಂಡವರ ಕಾಲದಲ್ಲಿ ಹದಿನೆಂಟು ವರ್ಷಗಳು ಕಳೆದುಹೋದವು.

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಧೃತರಾಷ್ಟ್ರಾದಿಸ್ವರ್ಗ್ಗಪ್ರಾಪ್ತಿರ್ನ್ನಾಮ  ಏಕತ್ರಿಂಶೋSಧ್ಯಾಯಃ ॥

[ ಆದಿತಃ ಶ್ಲೋಕಾಃ ೪೯೨೪ + ೭೬=೫೦೦೦ ]

*********

No comments:

Post a Comment