ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, April 21, 2020

Mahabharata Tatparya Nirnaya Kannada 17101_17106


ಇತೀರಿತೇsಪ್ಯತೃಪ್ತವತ್ ಸ್ಥಿತೇ ತು ಬಾರ್ಹದ್ರಥೇ ।
ಜಗಾಮ ಸೌಭಮಾಸ್ಥಿತಃ ಸ ಸೌಭರಾಟ್ ಚ ಯಾವನಮ್ ॥೧೭.೧೦೧॥

ಸಾಲ್ವ ಇಷ್ಟೆಲ್ಲಾ ಹೇಳಿದರೂ ಕೂಡಾ, ಜರಾಸಂಧ ಮಾತ್ರ ಕಸಿವಿಸಿಯಲ್ಲಿಯೇ(ಅತೃಪ್ತನಾಗಿಯೇ) ಇದ್ದ. ಹೀಗಿರುವಾಗ ಸಾಲ್ವನು ತನ್ನ ಸೌಭ ವಿಮಾನವನ್ನೇರಿ ಕಾಲಯವನನ  ದೇಶದತ್ತ ತೆರಳಿದ.

ಸ ಕಾಲಯಾವನೋsಥ ತಂ ಜರಾಸುತಾನ್ತಿಕಾಗತಮ್ ।
ನಿಶಮ್ಯ ಭಕ್ತಿಪೂರ್ವಕಂ ಪ್ರಣಮ್ಯ ಚಾsರ್ಚ್ಚಯದ್ ದೃತಮ್ ॥೧೭.೧೦೨॥

ಆ ಕಾಲಯವನನು, ‘ಸಾಲ್ವ ಜರಾಸಂಧನ ಕಡೆಯಿಂದ ಬಂದಿದ್ದಾನೆ’ ಎಂದು ತಿಳಿದೊಡನೇ, ಭಕ್ತಿಯಿಂದ ನಮಸ್ಕರಿಸಿ ಸತ್ಕರಿಸಿದನು.

ಜರಾಸುತೋ ಹಿ ದೈವತಂ ಸಮಸ್ತಕೇಶವದ್ವಿಷಾಮ್ ।
ಇತಿ ಪ್ರಣಮ್ಯ ತಾಂ ದಿಶಂ ತದೀಯಮಾಶ್ವಪೂಜಯತ್ ॥೧೭.೧೦೩॥

‘ಜರಾಸಂಧನಲ್ಲವೇ ಎಲ್ಲಾ ಕೇಶವ ದ್ವೇಷಿಗಳಿಗೆ ದೇವತೆಯಂತೆ ಇರುವವನು’ ಎಂದು ಹೇಳಿದ ಕಾಲಯವನ, ಜರಾಸಂಧನಿರುವ ದಿಕ್ಕಿಗೆ ನಮಸ್ಕರಿಸಿ, ಸಾಲ್ವನಿಗೆ ಗೌರವ ನೀಡಿದನು.

ತದೀರಿತಂ ನಿಶಮ್ಯ ಚ ದ್ರುತಂ ತ್ರಿಕೋಟಿಸಙ್ಖ್ಯಯಾ ।
ಅಕ್ಷೋಹಿಣೀಕಯಾ ಯುತಃ ಸ್ವಸೇನಯಾ ನಿರಾಕ್ರಮತ್ ॥೧೭.೧೦೪॥

ಸಾಲ್ವನ ಸಂದೇಶವನ್ನು ಕೇಳಿದ ಕಾಲಯವನ, ಮೂರುಕೋಟಿ ಬಲವುಳ್ಳ, ಅಕ್ಷೋಹಿಣೀನಾಮಕವಾದ  ತನ್ನ ಸೇನೆಯೊಂದಿಗೆ ಕೂಡಲೇ ಅಲ್ಲಿಂದ ಹೊರಟನು.

ತದಶ್ವಮೂತ್ರವಿಷ್ಠಯಾ ಬಭೂವ ನಾಮತಃ ಶಕೃತ್ ।
ನದೀ ಸುವೇಗಗಾಮಿನೀ ಕಲೌ ಚ ಯಾ ವಹೇದ್ ದ್ರುತಮ್ ॥೧೭.೧೦೫॥

ಕಾಲಯವನನ ಸೇನೆಯಲ್ಲಿರುವ ಅಶ್ವಗಳ ಮಲ-ಮೂತ್ರದಿಂದ ‘ಶಕೃತ್’ ಎಂಬ ಹೆಸರಿನ ನದಿಯೇ ಹರಿಯಲಾರಂಭಿಸಿತು.  ಯಾವ ನದಿ ಕಲಿಯುಗದಲ್ಲಿ ವೇಗವಾಗಿ ಹರಿಯುತ್ತದೋ ಅಂತಹ ನದಿ.

ಪುನಃಪುನರ್ನ್ನದೀಭವಂ ನಿಶಾಮ್ಯ ದೇಶಸಙ್ಕ್ಷಯಮ್ ।
ತದನ್ಯದೇಶಮೂತ್ರಿತಂ ವ್ಯಶೋಷಯದ್ಧಿ ಮಾರುತಃ ॥೧೭.೧೦೬॥

ಆಗ ಶಕೃತ್ ನದಿಯಿಂದ ಉಂಟಾಗತಕ್ಕಂತಹ ಪರಿಸರ ಹಾಗು ದೇಶನಾಶವನ್ನು ನೋಡಿ, ಮಾರುತನು ಆ ನದಿಯನ್ನು ಬತ್ತಿಸಿಬಿಟ್ಟ.
[ಭಾಗವತದಲ್ಲಿ(೧೦.೫೩.೨೮) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ನಾರದಪ್ರೇಷಿತೋ ವೀರೋ  ಯಾವನಃ  ಪ್ರತ್ಯದೃಶ್ಯತ । ರುರೋಧ ಮಧುರಾಮೇತ್ಯ ತಿಸೃುಭಿರ್ಮ್ಲೇಚ್ಛಕೋಟಿಭಿಃಹರಿವಂಶದಲ್ಲೂ ಈ ಕುರಿತಾದ ವಿವರಣೆ ಇದೆ: ’ ಸಮೃದ್ಧೋ ಹಿ ಯದಾ ರಾಜಾ ಯವನಾನಾಂ ಮಹಾಬಲಃ । ತತ ಏನಂ ನೃಪಾ ಮ್ಲೇಚ್ಛಾಃ ಸಂಶ್ರಿತ್ಯಾನುಯಯುಸ್ತದಾ । [ಮ್ಲೇಚ್ಛ ರಾಜರೆಲ್ಲರೂ (ಶಕರು, ಹೂಣರು, ಆಂದ್ರರು, ಪುಳಿನ್ದರು, ಪುಲ್ಕಸರು, ಇತ್ಯಾದಿ) ಯವನನ ಹಿಂಬಾಲಕರಾಗಿ ಬಂದರು].  ಶಕಾಸ್ತುಷಾರಾ ದರದಾ ಪಾರದಾಃ ಶೃುಙ್ಖಲಾಃ   ಖಶಾಃ  । ಪಲ್ಲವಾಃ ಶತಶಶ್ಚಾನ್ಯೇ  ಮ್ಲೇಚ್ಛಾ ಹೈಮವತಾಸ್ತಥಾ’ (ವಿಷ್ಣುಪರ್ವಣಿ ೫೭.೧೯-೨೦).... ಮೂತ್ರೇಣ ಶಕೃತಾ ಚೈವ ಸೈನ್ಯೇನ ಸಸೃಜೇ ನದೀಮ್ । ಅಶ್ವಷ್ಟ್ರಶಕೃತಾಂ ರಾಶೇರ್ನಿಃಸೃತೇತಿ  ಜನಾಧಿಪ । ತತೋsಶ್ವಶಕೃದಿತ್ಯೇವ ನಾಮ ನದ್ಯಾ ಬಭೂವ ಹ’    (ವಿಷ್ಣುಪರ್ವಣಿ ೫೭.೨೩-೨೪)]

No comments:

Post a Comment