ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, April 25, 2020

Mahabharata Tatparya Nirnaya Kannada 17107_17111


ಹರಿಶ್ಚ ವೈನತೇಯಯುಗ್ ವಿಚಾರ್ಯ್ಯ ರಾಮಸಂಯುತಃ ।
ಸದಾsತಿಪೂರ್ಣ್ಣಸಂವಿದಪ್ಯಜೋsಥ ಲೀಲಯಾsಸ್ಮರತ್ ॥೧೭.೧೦೭॥

ಸಂಪೂರ್ಣಪ್ರಜ್ಞೆಯುಳ್ಳವನಾದರೂ, ಬಲರಾಮನಿಂದ ಕೂಡಿದ ಶ್ರೀಹರಿಯು ಗರುಡನೊಂದಿಗೆ  ಕೂಡಿಕೊಂಡು, ಲೀಲಾವಿಲಾಸದಿಂದ ಚಿಂತನೆ ಮಾಡಿದನು.

ಯುಯುತ್ಸುರೇಷ ಯಾವನಃ ಸಮೀಪಮಾಗತೋsದ್ಯ ನಃ ।
ಯುಯುತ್ಸತಾಮನೇನ ನೋ ಜರಾಸುತೋsಭಿಯಾಸ್ಯತಿ ॥೧೭.೧೦೮॥

‘ಕಾಲಯವನನು ಯುದ್ಧಮಾಡಬೇಕೆಂದು ನಮ್ಮ ಸಮೀಪಕ್ಕೆ ಬಂದಿದ್ದಾನೆ. ಯುದ್ಧಮಾಡುವ ಅವನ  ಜೊತೆಗೆ ಸೇರಿ ಜರಾಸಂಧನು ಇನ್ನೊಂದು ದಿಕ್ಕಿನಿಂದ ಬರುತ್ತಿದ್ದಾನೆ.

ಸ ಯಾದವಾನ್ ಹನಿಷ್ಯತಿ ಪ್ರಭಙ್ಗತಸ್ತು ಕೋಪಿತಃ ।
ಪುರಾ ಜಯಾಶಯಾ ಹಿ ನೌ ಯದೂನ್ ನ ಜಘ್ನಿವಾನಸೌ ॥೧೭.೧೦೯॥

ಅನೇಕ ಸಲ ಸೋತು, ಮುನಿದವನಾದ ಜರಾಸಂಧ ಈ ಬಾರಿ ಯಾದವರನ್ನು ಕೊಲ್ಲುತ್ತಾನೆ. ಹಿಂದೆ ಕೇವಲ ನಮ್ಮನ್ನು ಗೆಲ್ಲಬೇಕು ಎಂಬ ಬಯಕೆಯಿಂದ ಆತ ಯಾದವರನ್ನು ಕೊಂದಿರಲಿಲ್ಲ.



ನಿರಾಶಕೋsದ್ಯ ಯಾದವಾನಪಿ ಸ್ಮ ಪೀಡಯಿಷ್ಯತಿ ।
ಅತಃ ಸಮುದ್ರಮದ್ಧ್ಯಗಾಪುರೀವಿಧಾನಮದ್ಯ ಮೇ ॥೧೭.೧೧೦॥

ಈರೀತಿ ಹತಾಶನಾದ ಅವನು ಯಾದವರನ್ನು ಪೀಡಿಸುತ್ತಾನೆ. ಆದ್ದರಿಂದ ಸಮುದ್ರ ಮದ್ಯದಲ್ಲಿ ಪಟ್ಟಣವೊಂದನ್ನು ನಿರ್ಮಾಣ ಮಾಡಬೇಕೆಂದು ನನಗನಿಸುತ್ತಿದೆ.

ಪ್ರರೋಚತೇ ನಿಧಾನಮಪ್ಯಮುತ್ರ ಸರ್ವಸಾತ್ತ್ವತಾಮ್ ।
ಉದೀರ್ಯ ಚೈವಮೀಶ್ವರೋsಸ್ಮರತ್ ಸುರೇಶವರ್ದ್ಧಕಿಮ್ ॥೧೭.೧೧೧॥

ಆ ಪಟ್ಟಣವನ್ನೇ ಎಲ್ಲಾ  ಯಾದವರ ಆವಾಸ ಸ್ಥಾನವನ್ನಾಗಿ ಮಾಡಬೇಕು’ ಎಂದು ಹೇಳಿದ  ಪರಮಾತ್ಮ ವಿಶ್ವಕರ್ಮನನ್ನು ಸ್ಮರಣೆ ಮಾಡಿದ.

No comments:

Post a Comment