ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 16, 2023

Mahabharata Tatparya Nirnaya Kannada 30-125-132

ಸಮಸ್ತಲಕ್ಷಣಾಭಿಜ್ಞಾಃ ಕೃಷ್ಣಃ ಸತ್ಯಾ ವೃಕೋದರಃ ।

ಕೃಷ್ಣಾ ಚ ಪಞ್ಚಮೋ ನಾಸ್ತಿ ವಿದ್ಯಾ ಶುದ್ಧೇಯಮಞ್ಜಸಾ ॥ ೩೦.೧೨೫ ॥

 

ಪರಮಾತ್ಮ(ಶ್ರೀಕೃಷ್ಣ,), ಲಕ್ಷ್ಮೀದೇವಿ(ಸತ್ಯಭಾಮೆ), ಮುಖ್ಯಪ್ರಾಣ(ಭೀಮಸೇನ), ಭಾರತೀದೇವಿ(ದ್ರೌಪದಿ) ಇವರು ಮಾತ್ರ ಎಲ್ಲಾ ಲಕ್ಷಣಗಳನ್ನು ಸಮಸ್ತವಾಗಿ ಅರಿತವರು. ಇವರಲ್ಲದೇ ಇನ್ನು ಐದನೆಯವರು ಇಲ್ಲವೇ ಇಲ್ಲ. ಈ ವಿದ್ಯೆಯು ಅತ್ಯಂತ ಪವಿತ್ರವಾದದ್ದು. ಅದು ಯಾರಿಗೂ ತಿಳಿಯುವುದಿಲ್ಲ.

 

ಪ್ರಸಙ್ಗಾತ್ ಪ್ರಾಪ್ತುಮಿಚ್ಛೇತ್ ತಾಂ ವಿದ್ಯಾಶೀಲೋ ಯುಧಿಷ್ಠಿರಃ ।

ಇತಿ ಲೋಭಾತ್ ತು ಪಾಞ್ಚಾಲೀ ವಾಸುದೇವಂ ನ್ಯವಾರಯತ್ ॥ ೩೦.೧೨೬ ॥

 

ವಿದ್ಯೆಯನ್ನು ತಿಳಿಯಬೇಕು ಎನ್ನುವ ಬಯಕೆಯಿಂದ ವಿದ್ಯಾಗ್ರಹಣ ಸ್ವಭಾವವುಳ್ಳ ಯುಧಿಷ್ಠಿರನು ಈ   ಪ್ರಸಂಗಲ್ಲಿ ಆ ವಿಶಿಷ್ಟ ವಿದ್ಯೆಯನ್ನು ಹೊಂದಲು ಬಯಸುತ್ತಿರಬಹುದು ಎನ್ನುವ ಲೋಭಾತಿಶಯದಿಂದ ದ್ರೌಪದಿಯು ಶ್ರೀಕೃಷ್ಣನನ್ನು ತಡೆದಳು.

 

ತದ್ಗೌರವಾದ್ ವಾಸುದೇವೋ ನೋತ್ತರಂ ಪ್ರತ್ಯಭಾಷತ ।

ವಿಸ್ಮಾರಯಾಮಾಸ ಚ ತಂ ಪ್ರಬ್ರುವಾಣಃ ಕಥಾನ್ತರಮ್ ॥ ೩೦.೧೨೭ ॥

 

ದ್ರೌಪದಿಯ ಮೇಲಿನ ಗೌರವದಿಂದ ಶ್ರೀಕೃಷ್ಣನು ಲಕ್ಷಣದ ಕುರಿತು ಮುಂದಿದ್ದನ್ನು ನುಡಿಯಲಿಲ್ಲ. ಬೇರೊಂದು ಕಥೆಯನ್ನು ಹೇಳುತ್ತಾ ಅದನ್ನು ಮರೆಸಿದ.

 

ಉದರಸ್ಯ ಕಿಞ್ಚಿದಾಧಿಕ್ಯಂ ವೃಷಣಾಧಿಕ್ಯಮೇವ ಚ ।

ಸವ್ಯಬಾಹೋಸ್ತಥಾSSಧಿಕ್ಯಂ ದುರ್ಲ್ಲಕ್ಷಣಮತೋSರ್ಜ್ಜುನೇ  ॥ ೩೦.೧೨೮ ॥

 

ದೀರ್ಘಪಿಣ್ಡಿಕತ್ವವಲ್ಲದೇ,  ಸ್ವಲ್ಪ ಡೊಳ್ಳು ಹೊಟ್ಟೆ, ವೃಷಣಾಧಿಕ್ಯ, ಸ್ವಲ್ಪ ಎಡಗೈ ಬಲಗೈಕ್ಕಿಂತ ಉದ್ದ, ಇವು ಅರ್ಜುನನಲ್ಲಿರುವ ಇತರ ದುರ್ಲಕ್ಷಣಗಳು.

 

ನೈವೋಕ್ತಂ ವಾಸುದೇವೇನ ದೃಶ್ಯಮಾನಮಪಿ ಸ್ಫುಟಮ್ ।

ಜ್ಞಾನಾನನ್ದಹ್ರಾಸಕರಾ ಹ್ಯೇತೇ ದೋಷಾಃ ಸದಾತನಾಃ ॥ ೩೦.೧೨೯ ॥

 

ಸ್ಫುಟವಾಗಿ ಇದು ಕಂಡರೂ ಕೂಡಾ, ಅದು ಕೃಷ್ಣನಿಂದ ಹೇಳಲ್ಪಡಲಿಲ್ಲ. ಈ ದೋಷಗಳು ಜ್ಞಾನ ಹಾಗೂ ಆನಂದದ ಕಡಿಮೆ ಪ್ರಮಾಣವನ್ನು ಹೇಳುತ್ತವೆ/ಕಾರಣವಾಗುತ್ತವೆ.

 

ಸಮಸ್ತಜೀವರಾಶೌ ತದ್ ದುಷ್ಟಲಕ್ಷಣವರ್ಜ್ಜಿತೌ ।

ಪೂರ್ಣ್ಣಚಿತ್ಸುಖಶಕ್ತ್ಯಾದೇರ್ಯ್ಯೋಗ್ಯೌ ಕೃಷ್ಣಾ ಚ ಮಾರುತಿಃ ॥ ೩೦.೧೩೦ ॥

 

ಅನಾದಿದುಃಖಹೀನತ್ವೇ ಸುಖಾಧಿಕ್ಯೇ ಚ ಲಕ್ಷಣಮ್ ।

ರುಗ್ಮಿಣೀಸತ್ಯಭಾಮಾದಿರೂಪಾಯಾಃ ಶ್ರಿಯ ಏವ ತು ॥ ೩೦.೧೩೧ ॥

 

ಮುಖ್ಯಂ ತತೋSಪಿ ಮುಖ್ಯಂ ತು ಸ್ವಾತನ್ತ್ರ್ಯಾದೇರಶೇಷತಃ ।

ಗುಣರಾಶೇಃ ಪರಂ ಲಿಙ್ಗಂ ನಿತ್ಯಂ ವ್ಯಾಸಾದಿರೂಪಿಣಃ ।

ವಿಷ್ಣೋರೇವ ನಚಾನ್ಯಸ್ಯ ಸ ಹ್ಯೇಕಃ ಪೂರ್ಣ್ಣಸದ್ಗುಣಃ ॥ ೩೦.೧೩೨ ॥

 

ಸಮಸ್ತ ಜೀವರಾಶಿಗಳಲ್ಲಿ ದುರ್ಲಕ್ಷಣ ಇಲ್ಲದವರು, ಪರಿಪೂರ್ಣವಾದ ಜ್ಞಾನ, ಸುಖ, ಶಕ್ತಿ, ಮೊದಲಾದವುಗಳಿಗೆ ಯೋಗ್ಯರಾದವರು ಭಾರತೀ-ಮುಖ್ಯಪ್ರಾಣ ಇಬ್ಬರೇ. ಜೀವಸಮುದಾಯಕ್ಕಿಂತ ಮೇಲೆ, ಅನಾದಿಯಾದ ದುಃಖಹೀನತ್ವ, ಸುಖಾಧಿಕ್ಯ ಲಕ್ಷಣಗಳು ರುಗ್ಮಿಣೀ-ಸತ್ಯಭಾಮಾದಿ ಸ್ವರೂಪಿಣಿಯಾದ ಶ್ರೀಲಕ್ಷ್ಮಿದೇವಿಯಲ್ಲಿ ಸದಾ ಇದ್ದೇ ಇರುತ್ತದೆ. ಲಕ್ಷ್ಮೀದೇವಿಗಿಂತಲೂ ಅತಿಮುಖ್ಯವಾಗಿ, ಸ್ವತಂತ್ರವಾದ, ನಿತ್ಯವಾಗಿರುವ, ಸರ್ವೋತ್ಕೃಷ್ಟ ಲಕ್ಷಣಗಳಿರುವುದು ವೇದವ್ಯಾಸಾದಿ ಸ್ವರೂಪವುಳ್ಳ ಶ್ರೀವಿಷ್ಣುವಿನಲ್ಲಿ. ಹೀಗಾಗಿ ಪರಮಾತ್ಮನೊಬ್ಬನೇ ಪರಿಪೂರ್ಣ, ಸ್ವತಂತ್ರ, ನಿರ್ದುಷ್ಟಗುಣವುಳ್ಳವನು.  

No comments:

Post a Comment