ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 12, 2023

Mahabharata Tatparya Nirnaya Kannada 30-96-100

 

ಸರ್ವಯಜ್ಞಾತ್ಮಕಂ ತೇಷಾಮಶ್ವಮೇಧಂ ಜಗತ್ಪತಿಃ ।

ಕಾರಯಾಮಾಸ ಭಗವಾನ್ ಕೃಷ್ಣದ್ವೈಪಾಯನಃ ಸ್ವಯಮ್ ॥ ೩೦.೯೬ ॥

 

ಜಗತ್ತಿಗೇ ಒಡೆಯರಾದ, ಷಡ್ಗುಣೈಶ್ವರ್ಯ ಸಂಪನ್ನರಾದ ವೇದವ್ಯಾಸರು, ತಾವೇ ಮುಂದೆ ನಿಂತು ಯಜ್ಞದ ಎಲ್ಲಾ ಆಚರಣೆಯನ್ನೊಳಗೊಂಡ ಅಶ್ವಮೇಧವನ್ನು ಮಾಡಿಸುವವರಾದರು.

 

ಸಾಧನಾನಿ ತು ಸರ್ವಾಣಿ ಶಾಲಾಂ ಚೈವ ಹಿರಣ್ಮಯೀಮ್ ।

ಪವಮಾನಸುತಶ್ಚಕ್ರೇ ಕೃಷ್ಣದ್ವೈಪಾಯನೇರಿತಃ ॥ ೩೦.೯೭ ॥

 

ವೇದವ್ಯಾಸರಿಂದ ಪ್ರೇರಿಸಲ್ಪಟ್ಟ ಭೀಮಸೇನನು ಯಾಗಕ್ಕೆ ಬೇಕಾದ ಸಮಸ್ತಸಾಧನಗಳನ್ನು ಹೊಂದಿಸಿ, ಹಿರಣ್ಮಯವಾದ ಯಾಗಶಾಲೆಯನ್ನು ಮಾಡಿದನು.

 

 

ಅಥಾನುಮನ್ತ್ರಿತೋತ್ಸೃಷ್ಟಂ ಪುರೋಹಿತಪುರಸ್ಕೃತಮ್ ।

ತುರಗಂ ಕೃಷ್ಣಸಾರಙ್ಗಮನುವವ್ರಾಜ ವಾಸವಿಃ ॥ ೩೦.೯೮ ॥

 

ಧೀಕ್ಷೆಯನ್ನು ತೆಗೆದುಕೊಂಡ ನಂತರ ಅರ್ಜುನನು, ಅಭಿಮಂತ್ರಿತವಾಗಿ ಬಿಡಲ್ಪಟ್ಟ, ಕಪ್ಪು ಹಾಗೂ ಬಹುರೀತಿಯ ಬಣ್ಣವುಳ್ಳ ಯಜ್ಞತುರಗವನ್ನು, ಪುರೋಹಿತರೊಂದಿಗೆ ಕೂಡಿ, ಅನುಸರಿಸಿ ಹೊರಟನು.

 

ಸ ಜಿತ್ವಾ ರುನ್ಧತಃ ಸರ್ವಾನ್ ನೃಪತೀಞ್ಛಸ್ತ್ರತೇಜಸಾ ।

ಚಾರಯಾಮಾಸ ಸರ್ವೇಷು ರಾಷ್ಟ್ರೇಷ್ವವಿಜಿತೋSರಿಭಿಃ ॥ ೩೦.೯೯ ॥

 

ಅವನು ಕುದುರೆಯನ್ನು ಕಟ್ಟಿಹಾಕುವ ಎಲ್ಲಾ ರಾಜರನ್ನೂ ತನ್ನ ಶಸ್ತ್ರ ತೇಜಸ್ಸಿನಿಂದ ಗೆಲ್ಲುತ್ತಾ, ಎಲ್ಲಾ ರಾಜ್ಯಗಳಲ್ಲಿಯೂ ಕುದುರೆಯನ್ನು ಸಂಚಾರಮಾಡಿಸಿದನು.

 

ಯುಧಿಷ್ಠಿರಾಜ್ಞಯಾ ತೇನ ನ ಕಶ್ಚಿನ್ನಿಹತಸ್ತದಾ ।

ಆಹೂತಾಶ್ಚ ನೃಪಾಸ್ತೇನ ಯಜ್ಞಾರ್ತ್ಥಂ ಪ್ರೀಯತಾSಖಿಲಾಃ ॥ ೩೦.೧೦೦ ॥

 

ಯುಧಿಷ್ಠಿರನ ಆಜ್ಞೆಯಂತೆ ಅರ್ಜುನನಿಂದ ಯಾವ ರಾಜರೂ ಸಾಯಿಸಲ್ಪಡಲಿಲ್ಲ. ಪ್ರತಿಯಾಗಿ ಅವರೆಲ್ಲರನ್ನೂ  ಅರ್ಜುನ  ಪ್ರೀತಿಯಿಂದ ಯಜ್ಞಕ್ಕೆ ಆಹ್ವಾನ ಮಾಡಿದನು.

No comments:

Post a Comment