ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 8, 2019

Mahabharata Tatparya Nirnaya Kannada 14105_14112

ಕೃಷ್ಣೋsಥ ಚೌಪಗವಿಮುತ್ತಮನೀತಿಯುಕ್ತಂ ಸಮ್ಪ್ರೇಷಯನ್ನಿದಮುವಾಚ ಹ ಗೋಕುಲಾಯ
ದುಃಖಂ ವಿನಾಶಯ ವಚೋಭಿರರೇ ಮದೀಯೈರ್ನ್ನನ್ದಾದಿನಾಂ ವಿರಹಜಂ ಮಮ ಚಾsಶು ಯಾಹಿ ೧೪.೧೦೫

ಕೆಲವು ದಿವಸಗಳಾದಮೇಲೆ ಕೃಷ್ಣನು  ಉತ್ಕೃಷ್ಟವಾದ ನೀತಿಯನ್ನು ಹೊಂದಿರುವ ಉಪಗವ ಎಂಬ ಯಾದವನ ಮಗನಾದ ಉದ್ಧವನನ್ನು ಗೋಕುಲಕ್ಕೆ ಕಳುಹಿಸುತ್ತಾ ಹೇಳಿದ: ‘ಎಲೈ ಉದ್ಧವನೇ, ನನ್ನ ಮಾತುಗಳಿಂದ ನಂದ ಮೊದಲಾದವರಿಗೆ ನನ್ನ ವಿಯೋಗದಿಂದ ಬಂದ ದುಃಖವನ್ನು ನಾಶಗೊಳಿಸಲು ನೀನು ಶೀಘ್ರವಾಗಿ ಅಲ್ಲಿಗೆ ತೆರಳು’ ಎಂದು.

ಮತ್ತೋ ವಿಯೋಗ ಇಹ ಕಸ್ಯಚಿದಸ್ತಿ ನೈವ ಯಸ್ಮಾದಹಂ ತನುಭೃತಾಂ ನಿಹಿತೋsನ್ತರೇವ
ನಾಹಂ ಮನುಷ್ಯ ಇತಿ ಕುತ್ರಚ ವೋsಸ್ತು ಬುದ್ಧಿರ್ಬ್ರಹ್ಮೈವ ನಿರ್ಮ್ಮಲತಮಂ ಪ್ರವದನ್ತಿ ಮಾಂ ಹಿ ೧೪.೧೦೬

ಯಾವ ಕಾರಣದಿಂದ ನಾನು ಸಮಸ್ತ ದೇಹಿಗಳ ಒಳಗೇ ಇದ್ದೇನೋ, ಆ ಕಾರಣದಿಂದ ನನ್ನಿಂದ ವಿಯೋಗವು ಈ ಬ್ರಹ್ಮಾಂಡದಲ್ಲಿ ಯಾರಿಗೂ ಇಲ್ಲ. (ಸಮಸ್ತ ಜೀವರ ಹೃತ್ಕಮಲವಾಸಿಯಾದ ನನ್ನಿಂದ ಯಾರಿಗೂ ವಿಯೋಗವಿಲ್ಲ). ನಾನು ಮನುಷ್ಯ ಎಂದು ಎಲ್ಲಿಯೂ ಕೂಡಾ ನಿಮಗೆ ಬುದ್ಧಿಯು ಇರದಿರಲಿ. ಏಕೆಂದರೆ ನನ್ನನ್ನು ಯಾವುದೇ ದೋಷವಿಲ್ಲದ ಬ್ರಹ್ಮನೆಂದು ಹೇಳುತ್ತಾರಷ್ಟೇ.
ಶ್ರೀಕೃಷ್ಣ ಹಿಂದೆ ನಂದಗೋಕುಲದಲ್ಲಿ ನಡೆದಿದ್ದ ಕೆಲವು ದಿವ್ಯ ಘಟನೆಗಳನ್ನು ಉದ್ಧವನಿಗೆ  ಹೇಳಿ, ಅದನ್ನು ಗೋಕುಲವಾಸಿಗಳಿಗೆ ನೆನಪಿಸುವಂತೆ ಹೇಳುತ್ತಾನೆ: -  

ಪೂರ್ವಂ ಯದಾ ಹ್ಯಜಗರೋ ನಿಜಗಾರ ನನ್ದಂ ಸರ್ವೇ ನ ಶೇಕುರಥ ತತ್ಪ್ರವಿಮೋಕ್ಷಣಾಯ
ಮತ್ಪಾದಸಂಸ್ಪರ್ಶತಃ ಸ ತದಾsತಿದಿವ್ಯೋ ವಿದ್ಯಾಧರಸ್ತದುದಿತಂ ನಿಖಿಲಂ ಸ್ಮರನ್ತು ೧೪.೧೦೭

ಹಿಂದೆ, ಒಮ್ಮೆ ಹೆಬ್ಬಾವು ನಂದನನ್ನು ಹಿಡಿದಾಗ ಯಾರೂ ಕೂಡಾ  ಆ ಹೆಬ್ಬಾವಿನಿಂದ ನಂದನನ್ನು ಬಿಡುಗಡೆ ಮಾಡಲು ಸಮರ್ಥರಾಗಲಿಲ್ಲ. ಆದರೆ ನನ್ನ ಪಾದಸ್ಪರ್ಶದಿಂದ ಆ ಹೆಬ್ಬಾವು ಅತ್ಯಂತ ದಿವ್ಯವಾದ ವಿದ್ಯಾಧರನಾದ. ಈರೀತಿ ಶಾಪ ವಿಮೋಚನೆಗೊಂಡ ವಿದ್ಯಾಧರ ಆಗ ಹೇಳಿದ ಮಾತೆಲ್ಲವನ್ನೂ ಸ್ಮರಿಸಿರಿ.

ಪೂರ್ವಂ ಸ ರೂಪಮದತಃ ಪ್ರಜಹಾಸ ವಿಪ್ರಾನ್ ನಿತ್ಯಂ ತಪಃಕೃಶತರಾಙ್ಗಿರಸೋ ವಿರೂಪಾನ್
ತೈಃ ಪ್ರಾಪಿತಃ ಸಪದಿ ಸೋsಜಗರತ್ವಮೇವ ಮತ್ತೋ ನಿಜಾಂ ತನುಮವಾಪ್ಯ ಜಗಾದ ನನ್ದಮ್ ೧೪.೧೦೮

ಹಿಂದೆ, ವಿದ್ಯಾಧರನು ತನ್ನ ರೂಪಮದದಿಂದ ಬ್ರಾಹ್ಮಣರನ್ನು ಅಪಹಾಸ್ಯ ಮಾಡಿ ನಕ್ಕಿದ್ದ. ಯಾವಾಗಲೂ ತಪಸ್ಸಿನಿಂದ ಕೃಶರಾಗಿರುವ, ವಿರೂಪರಾಗಿರುವ, ಅಂಗಿರಸ ವಂಶದಲ್ಲಿ ಬಂದಿರುವ ಬ್ರಾಹ್ಮಣರನ್ನು  ಆತ ಅಪಹಾಸಮಾಡಿದ್ದ. ಅದರಿಂದಾಗಿ  ಅವನು ಕೂಡಲೇ ಹೆಬ್ಬಾವಿನ ರೂಪವನ್ನು ಪಡೆಯುವಂತಾಯಿತು. ಅಂತಹ ವಿದ್ಯಾಧರ  ಮತ್ತೆ ನನ್ನಿಂದ ತನ್ನ ಹಿಂದಿನ ದೇಹವನ್ನು ಪಡೆದ ಮತ್ತು ನಂದನನ್ನು ಕುರಿತು ಹೇಳಿದ:

[ವಿದ್ಯಾಧರನ ಕಥೆಯನ್ನು ಭಾಗವತದಲ್ಲಿ(೧೦.೩೨.೧೨-೧೬) ಕಾಣಬಹುದು: ಅಹಂ ವಿದ್ಯಾಧರಃ ಕಶ್ಚಿತ್ ಸುದರ್ಶನ ಇತಿ ಶ್ರುತಃ ಶ್ರಿಯಾ ಸ್ವರೂಪಸಂಪತ್ತ್ಯಾ ವಿಮಾನೇನಾಚರಂ ದಿಶಃ ಋಷೀನ್ ವಿರೂಪಾನಙ್ಗಿರಸಃ ಪ್ರಾಹಸಂ ರೂಪದರ್ಪಿತಃ  ತೈರಿಮಾಂ ಪ್ರಾಪಿತೋ ಯೋನಿಂ ಪ್ರಲಬ್ಧಃ ಸ್ವೇನ ಪಾಪ್ಮನಾ ಶಾಪೋ ಮೇಽನುಗ್ರಹಾಯೈವ ಕೃತಸ್ತೈಃ ಕರುಣಾತ್ಮಭಿಃ (ಅವರು ಶಾಪ ಕೊಟ್ಟರು. ಆದರೆ ಆ ಶಾಪದಿಂದ ಕರುಣೆಯನ್ನೇ ಮಾಡಿದರು. ಏಕೆಂದರೆ: ) ಯದಹಂ ಲೋಕಗುರುಣಾ ಪಾದಸ್ಪೃಷ್ಟೋ ಹತಾಶುಭಃ ತಂ ತ್ವಾಹಂ ಭವಭೀತಾನಾಂ ಪ್ರಪನ್ನಾನಾಂ ಭಯಾಪಹಮ್ ಆಪೃಚ್ಛೇ ಶಾಪನಿರ್ಮುಕ್ತಃ ಪಾದಸ್ಪರ್ಶಾದಮೀವಹನ್ ಪ್ರಪನ್ನೋಽಸ್ಮಿ ಮಹಾಯೋಗಿನ್ ಮಹಾಪುರುಷ ಸತ್ಪತೇ ಅನುಜಾನೀಹಿ ಮಾಂ ಕೃಷ್ಣ ಸರ್ವಲೋಕೇಶ್ವರೇಶ್ವರ’]

ವಿದ್ಯಾಧರನ ಮಾತನ್ನು ವಿವರಿಸುತ್ತಾರೆ-


ನಾಯಂ ನರೋ ಹರಿರಯಂ ಪರಮಃ ಪರೇಭ್ಯೋ ವಿಶ್ವೇಶ್ವರಃ ಸಕಲಕಾರಣ ಆತ್ಮತನ್ತ್ರಃ
ವಿಜ್ಞಾಯ ಚೈನಮುರುಸಂಸೃತಿತೋ ವಿಮುಕ್ತಾ ಯಾನ್ತ್ಯಸ್ಯ ಪಾದಯುಗಳಂ ಮುನಯೋ ವಿರಾಗಾಃ೧೪.೧೦೯

ಇವನು ಮನುಷ್ಯನಲ್ಲಾ. ಇವನು ಹರಿಯೇ. ಶ್ರೇಷ್ಠರಿಗಿಂತಲೂ ಕೂಡಾ ಶ್ರೇಷ್ಠ. ಜಗದೊಡೆಯ. ಎಲ್ಲಕ್ಕೂ ಕಾರಣ. ಸ್ವತಂತ್ರ. ವಿರಾಗಿಗಳಾದ ಮುನಿಗಳು ಇವನನ್ನು ತಿಳಿದು, ಉತ್ಕೃಷ್ಟವಾದ ಸಂಸಾರದಿಂದ ಬಿಡುಗಡೆಗೊಂಡು, ಇವನ ಜೋಡಿ ಪಾದಗಳನ್ನು ಹೊಂದುತ್ತಾರೆ.

ನನ್ದಂ ಯದಾ ಚ ಜಗೃಹೇ ವರುಣಸ್ಯ ದೂತಸ್ತತ್ರಾಪಿ ಮಾಂ ಜಲಪತೇರ್ಗ್ಗೃಹಮಾಶು ಯಾತಮ್
ಸಮ್ಪೂಜ್ಯ ವಾರಿಪತಿರಾಃ ವಿಮುಚ್ಚ್ಯ ನನ್ದಂ ನಾಯಂ ಸುತಸ್ತವ ಪುಮಾನ್ ಪರಮಃ ಸ ಏಷಃ ೧೪.೧೧೦

ಯಾವಾಗ ವರುಣನ ದೂತನು ನಂದನನ್ನು ಹಿಡಿದುಕೊಂಡನೋ, ಅಲ್ಲಿಯೂ ಕೂಡಾ, ವರುಣನ ಮನೆಗೆ ಹೊರಟಿದ್ದ ನನ್ನನ್ನು ವರುಣನು ಪೂಜಿಸಿ, ನಂದನನ್ನು ಬಿಡುಗಡೆಗೊಳಿಸಿ, ಹೇಳಿದ: ‘ಇವನು ನಿನ್ನ ಮಗನಲ್ಲಾ. ಇವನು ಉತ್ಕೃಷ್ಟನಾದ ಪುರುಷನೇ ಆಗಿದ್ದಾನೆ’ ಎಂದು.
[ಭಾಗವತದಲ್ಲಿ(೧೦.೨೬.೬-೭) ವರುಣನ ಮಾತಿನ ವಿವರವನ್ನು ಈ ರೀತಿ ವಿವರಿಸಲಾಗಿದೆ: : ನಮಸ್ತುಭ್ಯಂ ಭಗವತೇ ಬ್ರಹ್ಮಣೇ ಪರಮಾತ್ಮನೇ ನ ಯತ್ರ ಶ್ರೂಯತೇ ಮಾಯಾ ಲೋಕದೃಷ್ಟಿವಿಡಂಬನಾ ಅಜಾನತಾ ಮಾಮಕೇನ ಮೂಢೇನಾಕಾರ್ಯವೇದಿನಾ ಆನೀತೋಽಯಂ ತವ ಪಿತಾ ತತ್ ಪ್ರಭೋ ಕ್ಷಂತುಮರ್ಹಸಿ’. ]

ಸನ್ದರ್ಶಿತೋ ನನು ಮಯೈವ ವಿಕುಣ್ಠಲೋಕೋ ಗೋಜೀವಿನಾಂ ಸ್ಥಿತಿರಪಿ ಪ್ರವರಾ ಮದೀಯಾ
ಮಾನುಷ್ಯಬುದ್ಧಿಮಪನೇತುಮಜೇ ಮಯಿ ಸ್ಮ ತಸ್ಮಾನ್ಮಯಿ ಸ್ಥಿತಿಮವಾಪ್ಯ ಶಮಂ ಪ್ರಯಾನ್ತು೧೪.೧೧೧

ನನ್ನಿಂದಲೇ ಗೋಪಾಲಕರಿಗೆ ವೈಕುಂಠಲೋಕವು ತೋರಿಸಲ್ಪಟ್ಟಿತಷ್ಟೇ. ನನ್ನ ಉತ್ಕೃಷ್ಟವಾದ ಸ್ಥಿತಿಯು ಹೇಗಿದೆ ಎನ್ನುವುದನ್ನು ನಾನು ಗೋಪಾಲಕರಿಗೆ ತೋರಿಸಿದೆ. ಹೇಗೆ ‘ಎಂದೂ ಹುಟ್ಟದ’ ನನ್ನಲ್ಲಿ ‘ಮನುಷ್ಯ’ ಎಂಬ ಬುದ್ಧಿಯನ್ನು ನಾಶಮಾಡಲು, ನಂದಗೋಪಾ ಮೊದಲಾದವರಿಗೆ ಅತಿಶ್ರೇಷ್ಠವಾದ ನನ್ನ ಸ್ಥಿತಿಯು ಹಿಂದೆ ತೋರಿಸಲ್ಪಟ್ಟಿತೋ, ಅಂತಹ ನನ್ನಲ್ಲಿ,  ಇರುವಿಕೆಯನ್ನು ಹೊಂದಿ, ಅವರೆಲ್ಲರೂ ಶಾಂತಿಯನ್ನು ಹೊಂದಲಿ. (ಹೀಗೆ  ಈ ಎಲ್ಲಾ ಘಟನೆಗಳನ್ನು ನಂದಾದಿಗಳಿಗೆ ನೆನಪಿಸುವಂತೆ ಶ್ರೀಕೃಷ್ಣ ಉದ್ಧವನಿಗೆ ಹೇಳಿ ಕಳುಹಿಸಿದ)
[ಗೋಪಾಲಕರು ತನ್ನನ್ನು ತಿಳಿದಿಲ್ಲ, ಅದನ್ನು ತಿಳಿಸಬೇಕು ಎನ್ನುವ ಕೃಪೆಯಿಂದ ಭಗವಂತ ಅವರೆಲ್ಲರಿಗೆ ಯಮುನಾ ನದಿಯಲ್ಲಿ ಮುಳುಗಲು ಹೇಳಿ, ಅವರಿಗೆ ಎಲ್ಲವನ್ನೂ ಕೂಡಾ ತೋರಿಸಿದ ಎನ್ನುವ ವಿವರಣೆಯನ್ನು ಭಾಗವತದಲ್ಲಿ(೧೦.೨೬.೧೪-೧೭) ಕಾಣಬಹುದು: ದರ್ಶಯಾಮಾಸ ಲೋಕಂ ಸ್ವಂ ಗೋಪಾನಾಂ ತಮಸಃ ಪರಮ್ ಸತ್ಯಂ ಜ್ಞಾನಮನಂತಂ ಯದ್ ಬ್ರಹ್ಮ ಜ್ಯೋತಿಃ ಸನಾತನಮ್ ಯದ್ಧಿ ಪಶ್ಯಂತಿ ಮುನಯೋ ಗುಣಾಪಾಯೇ ಸಮಾಹಿತಾಃ ತೇ ತು ಬ್ರಹ್ಮಹ್ರದಂ ನೀತಾ ಮಗ್ನಾಃ ಕೃಷ್ಣಮಚಕ್ಷತ ದದೃಶುರ್ಬ್ರಹ್ಮಣೋ ರೂಪಂ ಯತ್ರಾಕ್ರೂರೋಽಧ್ಯಗಾತ್ ಪುರಾ ನಂದಾದಯಸ್ತು ತಂ ದೃಷ್ಟ್ವಾ ಪರಮಾನಂದನಿರ್ವೃತಾಃ  ಕೃಷ್ಣಂ ಚ ತತ್ರ ಚ್ಛಂದೋಭಿಃ ಸ್ತೂಯಮಾನಂ ಸುವಿಸ್ಮಿತಾಃ’  ]

ಶ್ರುತ್ವೋದ್ಧವೋ ನಿಗದಿತಂ ಪರಮಸ್ಯ ಪುಂಸೋ ವೃನ್ದಾವನಂ ಪ್ರತಿ ಯಯೌ ವಚನೈಶ್ಚ ತಸ್ಯ
ದುಃಖಂ ವ್ಯಪೋಹ್ಯ ನಿಖಿಲಂ ಪಶುಜೀವನಾನಾಮಾಯಾತ್ ಪುನಶ್ಚರಣಸನ್ನಿಧಿಮೇವ ವಿಷ್ಣೋಃ ೧೪.೧೧೨

ಉದ್ಧವನು ಪರಮಪುರುಷನ ಮಾತನ್ನು ಕೇಳಿ, ವೃನ್ದಾವನಕ್ಕೆ ತೆರಳಿದ. ತನ್ನ ಮಾತುಗಳಿಂದ ಗೋಪಾಲಕರ ಎಲ್ಲಾ ದುಃಖವನ್ನು ತೊಡೆದ ಆತ, ಮತ್ತೆ ಪರಮಾತ್ಮನ ಚರಣಸನ್ನಿಧಿಗೆ ಬಂದ.
[ಭಾಗವತದಲ್ಲಿ ಹೇಳುವಂತೆ: ‘ಉವಾಸ ದುಃಖೋಪಶಮಂ ಗೋಪೀನಾಂ  ವಿನುದನ್ ಶುಚಃ ಕೃಷ್ಣಲೀಲಾಕಥಾ ಗಾಯನ್ ರಮಯಾಮಾಸ ಗೋಕುಲಮ್ (೧೦.೪೬.೨) ಗೋಪಿಯರಿಗೆ ದುಃಖವನ್ನು ನಾಶಮಾಡಲೆಂದೇ, ಕೃಷ್ಣನ ಲೀಲೆಗಳನ್ನು ಹೇಳುತ್ತಾ ಸ್ವಲ್ಪಕಾಲ ಉದ್ಧವ ಅಲ್ಲಿ ವಾಸಮಾಡಿದ. ಅಥ ಗೋಪೀರನುಜ್ಞಾಪ್ಯ ಯಶೋದಾಂ ನಂದಮೇವ ಚ ಗೋಪಾನಾಮಂತ್ರ್ಯ ದಾಶಾರ್ಹೋ ಯಾಸ್ಯನ್ನಾರುರುಹೇ ರಥಂ(೧೦.೪೬.೧೨) ಎಲ್ಲಾ ಗೋಪಿಯರಲ್ಲಿ ತಾನು ಹೋಗಿ ಬರುತ್ತೇನೆ ಎಂದು ಹೇಳಿ, ಯಶೋದೆ ಹಾಗು ನಂದಗೋಪರ ಅನುಜ್ಞೆಯನ್ನು ಪಡೆದುಕೊಂಡ ಉದ್ಧವನು ಶ್ರೀಕೃಷ್ಣನಲ್ಲಿಗೆ ತೆರಳಲು ರಥವನ್ನೇರಿದನು].


ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಉದ್ಧವಪ್ರತಿಯಾನಂ ನಾಮ ಚತುರ್ದ್ದಶೋsದ್ಧ್ಯಾಯಃ

 

*********

No comments:

Post a Comment