ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 11, 2019

Mahabharata Tatparya Nirnaya Kannada 1501_1505


. ಪಾಣ್ಡವಶಸ್ತ್ರಾಭ್ಯಾಸಃ


ಓಂ ॥
ಏವಂ ಪ್ರಶಾಸತಿ ಜಗತ್ ಪುರುಶೋತ್ತಮೇsಸ್ಮಿನ್ ಭೀಮಾರ್ಜ್ಜುನೌ ತು ಸಹದೇವಯುತಾವನುಜ್ಞಾಮ್
ಕೃಷ್ಣಾದವಾಪ್ಯ ವರ್ಷತ್ರಿತಯಾತ್ ಪುರಂ ಸ್ವಮಾಜಗ್ಮತುರ್ಹರಿಸುತೇನ ವಿಶೋಕನಾಮ್ನಾ ೧೫.೦೧

ಈರೀತಿಯಾಗಿ ಪುರುಷೋತ್ತಮನಾದ ಶ್ರೀಕೃಷ್ಣನು ಜಗತ್ತನ್ನು ಆಳುತ್ತಿರಲು, ಸಹದೇವನಿಂದ ಕೂಡಿದ ಭೀಮಾರ್ಜುನರಾದರೋ, ಮೂರು ವರ್ಷ ಕಳೆದಮೇಲೆ, ಶ್ರೀಕೃಷ್ಣನ ಅನುಜ್ಞೆಯನ್ನು ಪಡೆದು, ಪರಮಾತ್ಮನ ಮಗನಾದ ವಿಶೋಕ ಎಂಬುವವನಿಂದ ಕೂಡಿಕೊಂಡು ತಮ್ಮ ಪಟ್ಟಣವಾದ ಹಸ್ತಿನಾವತಿಗೆ ಬಂದರು.

ಸೈರನ್ಧ್ರಿಕೋದರಭವಃ ಸ ತು ನಾರದಸ್ಯ ಶಿಷ್ಯೋ ವೃಕೋದರರಥಸ್ಯ ಭಭೂವ ಯನ್ತಾ
ಯಾ ಪಿಙ್ಗಲಾsನ್ಯಭವ ಆತ್ಮನಿ ಸಂಸ್ಥಿತಂ ತಂ ಸಂಸ್ಮೃತ್ಯ ಕಾನ್ತಮುರುಗಾಯಮಭೂತ್ ತ್ರಿವಕ್ರಾ ೧೫.೦೨

ಆ ವಿಶೋಕನು ಸೈರನ್ಧ್ರಿ ತ್ರಿವಕ್ರೆಯಲ್ಲಿ ಪರಮಾತ್ಮನಿಂದ ಹುಟ್ಟಿದವನು. ನಾರದರ ಶಿಷ್ಯನಾಗಿರುವ ಆತ ಭೀಮಸೇನನ ಸಾರಥಿಯಾದನು. ಯಾರು ಹೋದಜನ್ಮದಲ್ಲಿ ಪಿಂಗಲೆಯಾಗಿದ್ದಳೋ, ಅವಳೇ  ತನ್ನೊಳಗಿರುವ, ದೊಡ್ಡವರಿಂದಲೂ ಕೂಡಾ ಸ್ತೋತ್ರಮಾಡಲ್ಪಡುವ ನಾರಾಯಣನನ್ನು ತನ್ನ ಗಂಡ ಎಂದು ಸ್ಮರಣೆಮಾಡಿ, ಈಜನ್ಮದಲ್ಲಿ ತ್ರಿವಕ್ರೆಯಾಗಿ ಹುಟ್ಟಿದ್ದಳು.

ತಂ ಪಞ್ಚರಾತ್ರವಿದಮಾಪ್ಯ ಸುಷಾರಥಿಂ ಸ ಭೀಮೋ ಮುಮೋದ ಪುನರಾಪ ಪರಾತ್ಮವಿದ್ಯಾಮ್
ವ್ಯಾಸಾತ್ ಪರಾತ್ಮತ ಉವಾಚ ಚ ಫಲ್ಗುನಾದಿದೈವೇಷು ಸರ್ವವಿಜಯೀ ಪರವಿದ್ಯಯೈಷಃ ೧೫.೦೩

ಭೀಮಸೇನನು ಪಂಚರಾತ್ರವನ್ನು ತಿಳಿದಿದ್ದ ವಿಶೋಕನನ್ನು ಸಾರಥಿಯಾಗಿ ಪಡೆದು ಸಂತಸಪಟ್ಟನು. ಅಂತಹ ಭೀಮಸೇನನು ವೇದವ್ಯಾಸರೂಪಿ ಪರಮಾತ್ಮನಿಂದ ಪರವಿದ್ಯೆಯನ್ನು ಮತ್ತೆ ಪಡೆದನು. (ವೇದವ್ಯಾಸರ ಶಿಷ್ಯನೂ ಆಗಿದ್ದ ಎಂದರ್ಥ). ಪರವಿದ್ಯೆಯಿಂದ ಎಲ್ಲರನ್ನೂ ಗೆದ್ದಿದ್ದ ಮತ್ತು ಎಲ್ಲರಿಗಿಂತಲೂ ಮಿಗಿಲಾಗಿದ್ದ ಭೀಮಸೇನನು,  ಅರ್ಜುನನೇ ಮೊದಲಾದ ದೈವಿಕ ಸ್ವಭಾವವುಳ್ಳವರಿಗೆ ಉಪದೇಶ ನೀಡಿದ ಕೂಡಾ.

ಸರ್ವಾನಭಾಗವತಶಾಸ್ತ್ರಪಥಾನ್ ವಿಧೂಯ ಮಾರ್ಗ್ಗಂ ಚಕಾರ ಸ ತು ವೈಷ್ಣವಮೇವ ಶುಭ್ರಮ್
ಕ್ರೀಡಾರ್ತ್ಥಮೇವ ವಿಜಿಗಾಯ ತಥೋಭಯಾತ್ಮಯುದ್ಧೇ ಬಲಂ ಚ ಕರವಾಕ್ಪ್ರಭವೇsಮಿತಾತ್ಮಾ ೧೫.೦೪

ಭೀಮಸೇನನು ಭಾಗವತ ಶಾಸ್ತ್ರವಲ್ಲದ ಇತರ ಎಲ್ಲಾರೀತಿಯ ಮಾರ್ಗಗಳನ್ನು ನಿರಾಕರಣೆ ಮಾಡಿ, ವಿಷ್ಣುಸಂಬಂಧಿಯಾದ ಉತ್ಕೃಷ್ಟ ಮಾರ್ಗದ ಶಾಸ್ತ್ರವನ್ನು ಊರ್ಜಿತ ಮಾಡಿದನು. ಹಾಗೆಯೇ, ಎರಡೂ ತರಹದ ಯುದ್ಧದಲ್ಲಿ(ಬಾಹು ಮತ್ತು ವಾಗ್ಯುದ್ಧ)  ಕ್ರೀಡೆಗಾಗಿಯೇ ಎಲ್ಲರನ್ನೂ ಭೀಮಸೇನ ಗೆದ್ದ.

ನಿತ್ಯಪ್ರಭೂತಸುಶುಭಪ್ರತಿಭೋSಪಿ ವಿಷ್ಣೋಃ ಶ್ರುತ್ವಾ ಪರಾಂ ಪುನರಪಿ ಪ್ರತಿಭಾಮವಾಪ
ಕೋ ನಾಮ ವಿಷ್ಣ್ವನುಪಜೀವಕ ಆಸ ಯಸ್ಯ ನಿತ್ಯಾಶ್ರಯಾದಭಿಹಿತಾSಪಿ ರಮಾ ಸದಾ ಶ್ರೀಃ ೧೫.೦೫

ಭೀಮಸೇನನು ಯಾವಾಗಲೂ ಅತ್ಯಂತ ಮಂಗಳಕರವಾದ ಪ್ರತಿಭೆಯುಳ್ಳವನಾದರೂ ಕೂಡಾ, ಶ್ರೀಹರಿಯಿಂದ (ಶ್ರೀಕೃಷ್ಣ ಮತ್ತು ವೇದವ್ಯಾಸರೂಪಿ ಭಗವಂತನಿಂದ) ಪರವಿದ್ಯೆಯನ್ನು ಕೇಳಿ, ಇನ್ನೂ ಉತ್ಕೃಷ್ಟವಾದ ಜ್ಞಾನವಿಶೇಷವನ್ನು ಹೊಂದಿದನು.
ನಾರಾಯಣನನ್ನು ಉಪಜೀವಿಸಿಕೊಂಡಿಲ್ಲದವನು ಯಾರಿದ್ದಾನೆ ? ಯಾರೂ ಇಲ್ಲ.  ಪರಮಾತ್ಮನ ನಿತ್ಯಾಶ್ರಾಯದಿಂದಾಗಿಯೇ ಲಕ್ಷ್ಮೀದೇವಿಯೂ ಕೂಡಾ ಶ್ರೀಃ ಎಂದು ಹೇಳಲ್ಪಟ್ಟಿದ್ದಾಳೆ.  (ನಿತ್ಯ ಆಶ್ರಿತ ಆಗಿರುವುದರಿಂದ ಆಕೆಯನ್ನು ಶ್ರೀಃ ಎಂದು ಕರೆಯುತ್ತಾರೆ).
[ಹೀಗೆ ಭೀಮಸೇನನೂ, ಮೊದಲು ಪ್ರತಿಭೆ ಇದ್ದರೂ ಕೂಡಾ, ಪರಮಾತ್ಮನಿಂದಲೇ ಪ್ರತಿಭೆಯ ಹೆಚ್ಚಳವನ್ನು ಪಡೆದನು. ಇದನ್ನೇ ಮಧ್ವವಿಜಯದಲ್ಲಿ(೮.೪) ನಾರಾಯಣ ಪಂಡಿತರು ಮಧ್ವಾಚಾರ್ಯರ ಕುರಿತು  ಈ ರೀತಿ ವರ್ಣಿಸಿದ್ದಾರೆ: ಇತಿಹಾಸ ಸುಂದರ ಪುರಾಣ ಸೂತ್ರ ಸತ್ ಪ್ರಿಯ ಪಂಚರಾತ್ರ ನಿಜಭಾವ ಸಂಯುತಮ್ ಅಶೃಣೋದನಂತ ಹೃದನಂತ ತೋSಚಿರಾತ್ ಪರಮಾರ್ಥಮಪ್ಯಗಣಿತಾಗಮಾವಲೇಃ ಎಲ್ಲವನ್ನು ತಿಳಿದವರಾದರೂ ಕೂಡಾ ಮಧ್ವಾಚಾರ್ಯರು ಮತ್ತೆ ವೇದವ್ಯಾಸರಿಂದ ಎಲ್ಲವನ್ನೂ ಪಡೆದರು].

No comments:

Post a Comment