ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 26, 2019

Mahabharata Tatparya Nirnaya Kannada 1536_1540


ಉನ್ಮಾದನಾದೀನಿ ಸ ವೇದ ಕೃಷ್ಣಾದಸ್ತ್ರಾಣ್ಯನಾಪತ್ಸು ನ ತಾನಿ ಮುಞ್ಚೇತ್
ಇತ್ಯಾಜ್ಞಯಾ ಕೇಶವಸ್ಯಾಪರಾಣಿ ಪ್ರಯೋಗಯೋಗ್ಯಾನಿ ಸದೇಚ್ಛತಿ ಸ್ಮ ೧೫.೩೬

ಅರ್ಜುನನು ಉನ್ಮಾದನಾದಿ ಅಸ್ತ್ರಗಳನ್ನು ಕೃಷ್ಣನಿಂದ ಈಗಾಗಲೇ ತಿಳಿದಿದ್ದನಾದರೂ ಕೂಡಾ, ‘ಆಪತ್ತು ಇಲ್ಲದಿರಬೇಕಾದರೆ ಆ ಅಸ್ತ್ರಗಳನ್ನು ಪ್ರಯೋಗಿಸಬಾರದು ಎನ್ನುವ ಶ್ರೀಕೃಷ್ಣನ ಆಜ್ಞೆಯಿಂದಾಗಿ  ಬೇರೆ ಪ್ರಯೋಗ ಯೋಗ್ಯವಾದ ಅಸ್ತ್ರಗಳನ್ನು ಯಾವಾಗಲೂ ಬಯಸುತ್ತಿದ್ದ.

ಭೀಷ್ಮಾದಿಭಿರ್ಭವಿತಾ ಸಙ್ಗರೋ ನಸ್ತದಾ ನಾಹಂ ಗುರುಭಿರ್ನ್ನಿತ್ಯಯೋದ್ಧಾ
ಭವೇಯಮೇಕಃ ಫಲ್ಗುನೋsಸ್ತ್ರಜ್ಞ ಏಷಾಂ ನಿವಾರಕಶ್ಚೇನ್ಮಮ ಧರ್ಮ್ಮಲಾಭಃ             ೧೫.೩೭

ನ ಬುದ್ಧಿಪೂರ್ವಂ ವರ ಇನ್ದಿರಾಪತೇರನ್ಯತ್ರ ಮೇ ಗ್ರಾಹ್ಯ ಇತಶ್ಚ ಜಿಷ್ಣುಃ
ಕರೋತು ಗುರ್ವರ್ತ್ಥಮಿತಿ ಸ್ಮ ಚಿನ್ತಯನ್ ಭೀಮಃ ಪ್ರತಿಜ್ಞಾಂ ನ ಚಕಾರ ತತ್ರ             ೧೫.೩೮

‘ಭೀಷ್ಮ ಮೊದಲಾದವರೊಂದಿಗೆ ಮುಂದೆ ಯುದ್ಧವಾಗಲಿದ್ದು ಆಗ ಗುರು-ಹಿರಿಯರಾದ ಅವರೊಂದಿಗೆ ನಾನೆಂದಿಗೂ ಯುದ್ಧಮಾಡುವುದಿಲ್ಲ. ಹಾಗಾಗಿ, ಅಸ್ತ್ರಗಳನ್ನು ತಿಳಿದಿರುವ ಅರ್ಜುನ ಭೀಷ್ಮಾದಿಗಳನ್ನು ನಿವಾರಣಮಾಡತಕ್ಕವನಾದರೆ  ಅದರಿಂದ ನನಗೆ ಧರ್ಮಲಾಭವಾಗುತ್ತದೆ’.  ಇದಲ್ಲದೇ, ‘ಇನ್ದಿರಾಪತಿ ನಾರಾಯಣನಿಗಿಂತ ಹೊರತಾಗಿ  ಬೇರೆಯವರಿಂದ ಬುದ್ಧಿಪೂರ್ವಕವಾಗಿ ನಾನು ವರವನ್ನು ಪಡೆಯಬಾರದು’ ಎಂಬ ಈ ಎರಡು ಕಾರಣಗಳಿಂದ ‘ಅರ್ಜುನನೇ ಗುರುಗಳಿಗಾಗಿ ಪ್ರತಿಜ್ಞೆಯನ್ನು ಮಾಡಲಿ’ ಎಂದು ಚಿಂತಿಸಿದ ಭೀಮನು, ಆಗ ಯಾವುದೇ ಪ್ರತಿಜ್ಞೆಯನ್ನು ಮಾಡಲಿಲ್ಲ.

ತತ್ಪ್ರೇರಿತೇನಾರ್ಜ್ಜುನೇನ ಪ್ರತಿಜ್ಞಾ ಕೃತಾ ಯದಾ ವಿಪ್ರವರಸ್ತತಃ ಪರಮ್
ಸ್ನೇಹಂ ನಿತಾನ್ತಂ ಸುರರಾಜಸೂನೌ ಕೃತ್ವಾ ಮಹಾಸ್ತ್ರಾಣಿ ದದೌ ಸ ತಸ್ಯ             ೧೫.೩೯

ಭೀಮಸೇನನಿಂದ ಪ್ರೇರಿತನಾದ ಅರ್ಜುನನಿಂದ ಯಾವಾಗ ಪ್ರತಿಜ್ಞೆ ಮಾಡಲ್ಪಪಟ್ಟಿತೋ, ಅದಾದ ನಂತರ ದ್ರೋಣಾಚಾರ್ಯರು ಇಂದ್ರನ ಮಗನಾದ ಅರ್ಜುನನಲ್ಲಿ ಆತ್ಯಂತಿಕವಾದ  ಪ್ರೀತಿಯಿಟ್ಟು, ಅವನಿಗೆ   ಮಹಾಸ್ತ್ರಗಳನ್ನು ನೀಡಿದರು.

ಸ ಪಕ್ಷಪಾತಂ ಚ ಚಕಾರ ತಸ್ಮಿನ್ ಕರೋತಿ ಚಾಸ್ಯೋರುತರಾಂ ಪ್ರಶಂಸಾಮ್
ರಹಸ್ಯವಿದ್ಯಾಶ್ಚ ದದಾತಿ ತಸ್ಯ ನಾನ್ಯಸ್ಯ ಕಸ್ಯಾಪಿ ತಥಾ ಕಥಞ್ಚಿತ್ ೧೫.೪೦

ದ್ರೋಣಾಚಾರ್ಯರು ಅರ್ಜುನನಲ್ಲಿ ಅತ್ಯಂತ ಪಕ್ಷಪಾತವನ್ನು ಮಾಡಿಕೊಂಡು, ಅವನನ್ನು ಆತ್ಯಂತಿಕವಾಗಿ  ಹೊಗಳಿಕೆ ಮಾಡುತ್ತಿದ್ದರು. ಅವನಿಗೆ ಅನೇಕ ರಹಸ್ಯ ವಿದ್ಯೆಗಳನ್ನೂ ಕೂಡಾ ಉಪದೇಶಿಸಿದ ಅವರು, ಅರ್ಜುನನಂತೆ ಉಳಿದವರಿಗೆ ಏನನ್ನೂ ಕೊಡುತ್ತಿರಲಿಲ್ಲ.

No comments:

Post a Comment