ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 12, 2021

Mahabharata Tatparya Nirnaya Kannada 20138_20142

 

ಪ್ರವಿಶ್ಯ ಚೇಶಃ ಸ್ವಪುರೀಂ ಸ ಯಾದವೈಃ ಸುಪೂಜಿತೋsನ್ತಃ ಪುರಮೇತ್ಯ ಚಾಙ್ಗಣೇ

ತರುಂ ಪ್ರಿಯಾಯಾ ನ್ಯದಧಾದ್ ಗೃಹಸ್ಯ ಸಹೈವ ಶೃಙ್ಗೇಣ ಚ ರತ್ನಸದ್ಗಿರೇಃ ॥೨೦.೧೩೮

 

ಸರ್ವಸಮರ್ಥನಾದ ಕೃಷ್ಣನು ತನ್ನ ಪಟ್ಟಣವಾದ ದ್ವಾರಕೆಯನ್ನು ಪ್ರವೇಶಮಾಡಿ, ಯಾದವರಿಂದ ಚೆನ್ನಾಗಿ ಪೂಜಿಸಿಕೊಂಡವನಾಗಿ, ಅಂತಃಪುರವನ್ನು ಹೊಂದಿ, ಸತ್ಯಭಾಮೆಯ ಮನೆಯ ಅಂಗಳದಲ್ಲಿ ರತ್ನಗಳಿಂದ ತುಂಬಿದ ಶಿಖರದಿಂದ ಸಹಿತವಾಗಿಯೇ ಪಾರಿಜಾತ ವೃಕ್ಷವನ್ನು ನೆಟ್ಟನು.

 

ಪ್ರದಾಯ ರತ್ನಾನಿ ಚ ಸರ್ವಸಾತ್ತ್ವತಾಂ ಯಥೇಷ್ಟತಸ್ತಾ ಅಪಿ ಕನ್ಯಕಾಃ ಪ್ರಭುಃ ।

ಉದ್ವಾಹ್ಯ ರೇಮೇ ಪೃಥಗೇವ ರತ್ನಪ್ರಾಸಾದಸಂಸ್ಥಾಭಿರನನ್ತರೂಪಃ ॥೨೦.೧೩೯ ॥

 

ಎಲ್ಲಾ ಯಾದವರಿಗೂ ಅವರ ಇಚ್ಛಾನುಸಾರವಾಗಿ ರತ್ನಗಳನ್ನು ಕೊಟ್ಟು, ನರಕಾಸುರನ ಸೆರೆಯಿಂದ ಬಿಡಿಸಿಕೊಂಡು ಬಂದ ೧೬೧೦೦ ಮಂದಿ ಕನ್ನಿಕೆಯರನ್ನು ಮದುವೆಯಾದ ಶ್ರೀಕೃಷ್ಣ, ಪ್ರತ್ಯೇಕವಾಗಿಯೇ, ರತ್ನಪ್ರಸಾದದಲ್ಲಿಯೇ ಇರುವ ಅವರೊಂದಿಗೆ ಅನಂತರೂಪನಾಗಿ ಕ್ರೀಡಿಸಿದನು.

 

ಪೃಥಕ್ಪೃಥಕ್ ತಾಸು ದಶೈವ ಪುತ್ರಕಾನಧತ್ತ ಕನ್ಯಾಮಪಿ ಸರ್ವಶಃ ಪ್ರಭುಃ ।

ಪ್ರದ್ಯುಮ್ನಸಾಮ್ಭಾವ॑ಪಿ ಭಾನುಚಾರುದೇಷ್ಣೌ ಚ ತೇಷಾಂ ನಿತರಾಂ ಗುಣಾಧಿಕಾಃ ॥೨೦.೧೪೦

 

ಸರ್ವಸಮರ್ಥನಾದ ಶ್ರೀಕೃಷ್ಣನು  ಪ್ರತ್ಯೇಕ-ಪ್ರತ್ಯೇಕವಾಗಿ ತನ್ನೆಲ್ಲಾ ಪತ್ನಿಯರಲ್ಲಿ ಹತ್ತು ಗಂಡು ಮಕ್ಕಳನ್ನೂ, ಒಂದು ಹೆಣ್ಣು ಮಗುವನ್ನೂ ಹುಟ್ಟಿಸಿದನು. ಆ ಎಲ್ಲಾ ಮಕ್ಕಳಲ್ಲಿ ಪ್ರದ್ಯುಮ್ನ, ಸಾಮ್ಭ, ಭಾನು ಮತ್ತು ಚಾರುದೇಷ್ಣ ಗುಣಾಧಿಕರಾಗಿದ್ದರು.

 

[ಭಾನು ಮತ್ತು ಚಾರುದೇಷ್ಣರ ಮೂಲ ಪರಿಚಯಿಸುತ್ತಾರೆ:]

 

ವಿವಸ್ವತೋ ಯೋsವರಜೋsದಿತೇಃ ಸುತಃ ಖ್ಯಾತಶ್ಚ ನಾಮ್ನಾ ಸವಿತೇತಿ ಕೃಷ್ಣಾತ್ ।

ಜಾತಃ ಸ ಸತ್ಯಾಜಠರೇsತ್ರ ನಾಮ್ನಾ ಭಾನುಸ್ತು ಭೈಷ್ಮ್ಯಾ ಅಪಿ ಚಾರುದೇಷ್ಣಃ ॥ ೨೦.೧೪೧॥

 

ಭಾನು ಅದಿತಿಯ ಮಗ, ಸೂರ್ಯನ ತಮ್ಮ, ಹೆಸರಿನಿಂದ ಸವಿತ ಎಂದು ಖ್ಯಾತನಾದವನು.(ಹನ್ನೆರಡು ಮಂದಿ ಆದಿತ್ಯರಲ್ಲಿ ಒಬ್ಬನಾದ ಸವಿತ). ಅವನು ಕೃಷ್ಣನಿಂದ ಸತ್ಯಭಾಮೆಯಲ್ಲಿ ಹುಟ್ಟಿದ. ರುಗ್ಮಿಣಿಯಲ್ಲಿ ಚಾರುದೇಷ್ಣ ಹುಟ್ಟಿದ.

 

ಸ ಚಾರುದೇಷ್ಣೋsಪಿ ಹಿ ವಿಘ್ನರಾಜೋ ಯೇsನ್ಯೇ ಚ ಕೃಷ್ಣಸ್ಯ ಸುತಾಃ ಸಮಸ್ತಾಃ ।

ತೇ ಚೈವ ಗೀರ್ವಾಣಗಣಾಸ್ತಥಾsನ್ಯೇ ಯೇ ದ್ವಾರಕಾಯಾಂ ನಿವಸನ್ತಿ ಸರ್ವೇ ॥ ೨೦.೧೪೨ ॥

 

ಚಾರುದೇಷ್ಣ ಸಾಕ್ಷಾತ್ ಗಣಪತಿ. ಉಳಿದ ಕೃಷ್ಣನ ಎಲ್ಲಾ ಮಕ್ಕಳೂ ಕೂಡಾ ದೇವತೆಗಳ ಸಮೂಹವೇ ಆಗಿದ್ದಾರೆ. ಯಾರು ದ್ವಾರಕೆಯಲ್ಲಿ ವಾಸ ಮಾಡುತ್ತಿದ್ದರೋ ಅವರೆಲ್ಲರೂ ಕೂಡಾ ದೇವತೆಗಳ ಗಣಗಳೇ ಆಗಿದ್ದರು.

No comments:

Post a Comment