ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 10, 2020

Mahabharata Tatparya Nirnaya Kannada 1911_1915

ಏವಂ ಬ್ರುವತ್ಯಪಿ ನೃಪೇ ಪುನರಾಹ ಪಾಪ ಆಶ್ರಿತ್ಯ ಸೌಬಲಮತಂ ಯದಿ ನೈವ ಪಾರ್ತ್ಥಾನ್ ।

ಅನ್ಯತ್ರ ಯಾಪಯಸಿ ನಾಗಪುರಾತ್ ಪರೇತಾನ್ ದೃಷ್ಟ್ವಾsಖಿಲಾನಪಿ ಹಿ ನೋ ಮುದಮೇಹಿ ಪಾರ್ತ್ಥೈಃ ॥೧೯.೧೧॥

 

ಈರೀತಿಯಾಗಿ ಧೃತರಾಷ್ಟ್ರನು ಮಗನಿಗೆ ಹೇಳಿದರೂ ಕೂಡಾ,  ಪಾಪಿಷ್ಠನಾದ ಆ ದುರ್ಯೋಧನನು ಶಕುನಿಯ ಅಭಿಪ್ರಾಯವನ್ನು ಆಶ್ರಯಿಸಿ ಹೇಳುತ್ತಾನೆ: ‘ಒಂದುವೇಳೆ ಪಾಣ್ಡವರನ್ನು ಹಸ್ತಿನಾವತಿಯಿಂದ ಬೇರೆಡೆಗೆ ಕಳುಹಿಸದಿದ್ದರೆ ನಾವೆಲ್ಲರೂ ಸಾಯುತ್ತೇವೆ, ಸತ್ತ ನಮ್ಮೆಲ್ಲರನ್ನು ನೋಡಿ, ಪಾಣ್ಡವರ ಜೊತೆ ನೀನು ಸಂತೋಷವನ್ನು ಹೊಂದು’ ಎಂದು. 

 

ಏವಂ ನಿಶಮ್ಯ ಗದಿತಂ ಸುತಹಾರ್ದ್ದಪಾಶೈರಾಕೃಷ್ಯತಾsಶು ಸ ನೃಪೋsರಿಧರೇಚ್ಛಯೈವ ।

ಪ್ರೋವಾಚ ಪುತ್ರಮಪಿ ತೇ ಬಲಿನೋ ನ ಪಾರ್ತ್ಥಾಃ ಶಕ್ಯಾಃ ಪುರಾತ್ ತನಯ ಯಾಪಯಿತುಂ ಕಥಞ್ಚಿತ್॥೧೯.೧೨॥

 

ಈರೀತಿಯಾಗಿ ದುರ್ಯೋಧನನಾಡಿದ ಮಾತನ್ನು ಕೇಳಿದ ಧೃತರಾಷ್ಟ್ರನು, ಪರಮಾತ್ಮನ ಇಚ್ಛೆಯಂತೇ, ‘ಮಗನಮೇಲಿನಪ್ರೀತಿ’ ಎಂಬ ಹಗ್ಗದಿಂದ ಕೂಡಲೇ ಸೆಳೆಯಲ್ಪಟ್ಟನು(ಮಗನ ಅಧೀನನಾದನು) ಹಾಗೂ ದುರ್ಯೋಧನನನ್ನು ಕುರಿತು ಹೇಳುತ್ತಾನೆ: ‘ಪಾಣ್ಡವರು ಬಲಿಷ್ಠರು. ಪಟ್ಟಣದಿಂದ ಹೊರಗಡೆ ತೆರಳಲು ಅವರು ಶಕ್ಯರಲ್ಲ’.(ಅವರನ್ನು ನಗರದಿಂದ ಹೊರಹಾಕಲು ಸಾಧ್ಯವಿಲ್ಲ) ಎಂದು,.

 

ಇತ್ಯುಕ್ತ ಆಹ ಪಿತರಂ ಶಕುನಿಂ ನಿರೀಕ್ಷ್ಯ ಸೃಷ್ಟೋ ಮಯಾ ವಿಧಿರಿಹಾದ್ಯ ಶೃಣುಷ್ವ ತಂ ಚ ।

ಆಸಂಸ್ತ್ರಯೋದಶ ಸಮಾ ನಗರಂ ಪ್ರವಿಷ್ಟೇಷ್ವೇತೇಷು ತಾವದಯಮೇವ ವಿಧಿರ್ಮ್ಮಯೇಷ್ಟಃ॥೧೯.೧೩ ॥

 

ಈರೀತಿಯಾಗಿ ಧೃತರಾಷ್ಟ್ರನಿಂದ ಹೇಳಲ್ಪಟ್ಟಾಗ, ಆ ದುರ್ಯೋಧನನು ಶಕುನಿಯನ್ನು ನೋಡುತ್ತಾ, ತಂದೆಯನ್ನು ಕುರಿತು ಹೇಳುತ್ತಾನೆ: ‘ಅಪ್ಪಾ, ಪಾಣ್ಡವರನ್ನು ಹೊರ ದಬ್ಬುವ ವಿಚಾರದಲ್ಲಿ ನನ್ನಿಂದ ಒಂದು ಉಪಾಯವು ಸೃಷ್ಟಿಸಲ್ಪಟ್ಟಿದೆ. ಆ ಉಪಾಯ ಏನೆಂಬುದನ್ನು ಕೇಳು. ಪಾಂಡವರು ನಗರವನ್ನು ಪ್ರವೇಶಮಾಡಿ ಇದೀಗ ಹದಿಮೂರು ವರ್ಷಗಳಾಯಿತು. ಅಂದಿನಿಂದಲೂ ಈ ಉಪಾಯವು ನನ್ನಿಂದ ಯೋಚಿಸಲ್ಪಟ್ಟಿದೆ.  

 

ದ್ರೌಣೇರ್ಹಿ ನಾಸ್ತಿ ಸದೃಶೋ ಬಲವಾನ್ ಪ್ರತಾಪೀ ಸೋsಯಂ ಮಯಾ ಬಹುವಿಧೈಃ ಪರಮೈರುಪಾಯೈಃ ।

ನೀತೋ ವಶಂ ವಶಗತೋsಸ್ಯ ಚ ಮಾತುಲೇನ ಸಾಕಂ ಪಿತಾ ತಮನು ಚೈಷ ನದೀಪ್ರಸೂತಃ ॥೧೯.೧೪॥

 

ಅಶ್ವತ್ಥಾಮನಿಗಿಂತ ಮಿಗಿಲಾದ ಅಥವಾ ಎಣಿಯಿರುವ ಪ್ರತಾಪಿ ಇನ್ನೊಬ್ಬನಿಲ್ಲ. ಆ ದ್ರೌಣಿ ನನ್ನ ಅನೇಕ ಉಪಾಯಗಳಿಂದ ಅವನ ಸೋದರಮಾವನ(ಕೃಪಾಚಾರ್ಯರ) ಜೊತೆಗೆ ನನ್ನ ವಶಕ್ಕೆ ಸಿಕ್ಕಿದ್ದಾನೆ. ಅವನನ್ನು ಅನುಸರಿಸಿ ಅವರಪ್ಪ ದ್ರೋಣಾಚಾರ್ಯರೂ ಬರುತ್ತಾರೆ, ಭೀಷ್ಮರೂ ಬರುತ್ತಾರೆ.

 

ಏವಂ ಹಿ ಸೈನಿಕಗಣಾ ಅಪಿ ದಾನಮಾನೈಃ ಪ್ರಾಯೋ ವಶಂ ಮಮ ಗತಾ ಅಪಿ ಚೈಷ ಕರ್ಣ್ಣಃ ।

ಅಸ್ತ್ರೇ ಬಲೇsಪ್ಯಧಿಕ ಏವ ಸುರೇನ್ದ್ರಸೂನೋರ್ಜ್ಜ್ಯೇಷ್ಯೇ ಚ ಮನ್ತ್ರಬಲತಸ್ತ್ವಹಮೇವ ಭೀಮಮ್॥೧೯.೧೫॥

 

ಹಾಗೆಯೇ ಸೈನಿಕರೆಲ್ಲರೂ ಕೂಡಾ. ಅವರಿಗೆ ವಿಶೇಷ ಅನುದಾನ ಕೊಡುವ ಮೂಲಕ ಎಲ್ಲರೂ ನನ್ನ ವಶವಾಗಿದ್ದಾರೆ. ಅಸ್ತ್ರದಲ್ಲಿ, ಬಲದಲ್ಲಿ ಅರ್ಜುನನಿಗಿಂತ ಮಿಗಿಲಾದ ಕರ್ಣ ಅರ್ಜುನನನ್ನು ಗೆಲ್ಲುತ್ತಾನೆ.   ಮಂತ್ರದ ಬಲದಿಂದ ನಾನು ಭೀಮನನ್ನು ಗೆಲ್ಲುತ್ತೇನೆ.

 


No comments:

Post a Comment