ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, September 23, 2020

Mahabharata Tatparya Nirnaya Kannada 1978_1982

 

ಪೃಷ್ಟಸ್ತಯಾssಹ ಸ ತು ವಿಪ್ರವರೋ ಬಕಸ್ಯ ವೀರ್ಯ್ಯಂ ಬಲಂ ಚ ದಿತಿಜಾರಿಭಿರಪ್ಯಸಹ್ಯಮ್ ।

ಸಂವತ್ಸರತ್ರಯಯುತೇ ದಶಕೇ ಕರಂ ಚ ಪ್ರಾತಿಸ್ವಿಕಂ ದಶಮುಖಸ್ಯ ಚ ಮಾತುಲಸ್ಯ ॥೧೯.೭೮॥

 

ಕುಂತಿಯಿಂದ ಪ್ರಶ್ನಿಸಲ್ಪಟ್ಟ ಆ ಬ್ರಾಹ್ಮಣಶ್ರೇಷ್ಠನು, ಬಕನಲ್ಲಿರುವ,  ದೇವತೆಗಳಿಗೂ ಕೂಡಾ ತಡೆಯಲು ಅಸಾಧ್ಯವಾದ ಬಲ-ವೀರ್ಯದ ಕುರಿತು ಹೇಳಿದನು. ಪ್ರತಿಯೊಬ್ಬನೂ ಸರದಿಯಂತೆ ಹದಿಮೂರು ವರ್ಷಗಳಿಗೊಮ್ಮೆ ರಾವಣನ ಸೋದರಮಾವನಾದ ಬಕನಿಗೆ ಕೊಡಲೇಬೇಕಿರುವ ಕರದ ಕುರಿತೂ ಹೇಳಿದನು.

 

ಶ್ರುತ್ವಾ ತಮುಗ್ರಬಲಮತ್ಯುರುವೀರ್ಯ್ಯಮೇವ ರಾಮಾಯಣೇ ರಘುವರೋರುಶರಾತಿಭೀತಮ್ ।

ವಿಷ್ಟಂ ಬಿಲೇಷ್ವಥ ನೃಪಾನ್ ವಶಮಾಶು ಕೃತ್ವಾ ಭೀತ್ಯೈವ ತೈಸ್ತದನು ದತ್ತಕರಂ ನನನ್ದ ॥೧೯.೭೯॥

 

‘ರಾಮಾಯಣದ ಕಾಲದಲ್ಲಿ ರಾಮಚಂದ್ರನ ಬಾಣಕ್ಕೆ ಹೆದರಿ, ಅವನ ಉಗ್ರಬಲವನ್ನು ಕೇಳಿ ಬಿಲದಲ್ಲಿ ಅಡಗಿಕೊಂಡು, ಆಮೇಲೆ (ರಾಮಾವಾತಾರ ಸಮಾಪ್ತಿಯ ನಂತರ) ಎಲ್ಲಾ ರಾಜರುಗಳನ್ನು ತನ್ನ ವಶರನ್ನಾಗಿ ಮಾಡಿಕೊಂಡು, ಎಲ್ಲರನ್ನೂ ಭಯಗ್ರಸ್ಥರನ್ನಾಗಿಮಾಡಿ ಅವರಿಂದ ಕರವನ್ನು ಪಡೆಯುತ್ತಿದ್ದ’. ಬ್ರಾಹ್ಮಣನಿಂದ ಬಕನ ಕುರಿತಾಗಿ ಈ ಎಲ್ಲಾ  ವಿಷಯವನ್ನು ಕೇಳಿ ತಿಳಿದ ಕುಂತಿ ಸಂತೋಷಪಟ್ಟಳು!

 

[ಕುಂತೀದೇವಿ ಏಕೆ ಸಂತೋಷಪಟ್ಟಳು ಎನ್ನುವುದನ್ನು ವಿವರಿಸುತ್ತಾರೆ:]

 

ಏವಂ ಬಲಾಢ್ಯಮಮುಮಾಶು ನಿಹತ್ಯ ಭೀಮಃ ಕೀರ್ತ್ತಿಂ ಚ ಧರ್ಮ್ಮಮಧಿಕಂ ಪ್ರತಿಯಾಸ್ಯತೀಹ ।

ಸರ್ವೇ ವಯಂ ಚ ತಮನು ಪ್ರಗೃಹೀತಧರ್ಮ್ಮಾ ಯಾಸ್ಯಾಮ ಇತ್ಯವದದಾಶು ಧರಾಸುರಂ ತಮ್ ॥೧೯.೮೦॥

 

‘ಈರೀತಿ ಬಲಸಹಿತನಾಗಿರುವ ಬಕನನ್ನು ಕೊಂದು, ಭೀಮಸೇನನು ಕೀರ್ತಿಯನ್ನೂ, ಪುಣ್ಯವನ್ನೂ  ಹೊಂದುತ್ತಾನೆ. ನಾವೆಲ್ಲರೂ ಕೂಡಾ ಪುಣ್ಯವನ್ನು ಪಡೆದು ತೆರಳೋಣ’ ಎಂದು ಅವಳು ಸಂಕಲ್ಪ ಮಾಡಿ, ಆ ಬ್ರಾಹ್ಮಣನನ್ನು ಕುರಿತು ಹೇಳಿದಳು:

 

ಸನ್ತಿ ಸ್ಮ ವಿಪ್ರವರ ಪಞ್ಚ ಸುತಾ ಮಮಾದ್ಯ ತೇಷ್ವೇಕ ಏವ ನರವೈರಿಮುಖಾಯ ಯಾತು ।

ಇತ್ಯುಕ್ತ ಆಹ ಸ ನ ತೇ ಸುತವದ್ಧ್ಯಯಾsಹಂ ಪಾಪೋ ಭವಾನಿ ತವ ಹನ್ತ ಮನೋsತಿಧೀರಮ್ ॥೧೯.೮೧॥

 

‘ವಿಪ್ರವರ, ನನಗೆ ಐದುಜನ ಮಕ್ಕಳು. ಅವರಲ್ಲಿ ಒಬ್ಬ ಮನುಷ್ಯ ಭಕ್ಷಕನಾದ ಬಕನ ಮುಖವನ್ನು ಕುರಿತು ತೆರಳಲಿ’. ಈರೀತಿಯಾಗಿ ಕುಂತಿಯಿಂದ ಹೇಳಲ್ಪಟ್ಟ ಆ ಬ್ರಾಹ್ಮಣನು, ‘ನಿನ್ನ ಮಗನನ್ನು  ಕೊಂದ  ಪಾಪಕ್ಕೆ ನಾನು ಕಾರಣನಾಗಲಾರೆ. ಆದರೆ  ಅಮ್ಮಾ, ನಿನ್ನ ಮನಸ್ಸು ಅತ್ಯಂತ ಧೈರ್ಯಯುಕ್ತವಾದುದು’ ಎಂದು ಹೇಳಿ,   ಆಶ್ಚರ್ಯದ ಉದ್ಗಾರ(ಹಂತ)ಮಾಡುತ್ತಾನೆ.

 

ಉಕ್ತೈವಮಾಹ ಚ ಪೃಥಾ  ತನಯೇ ಮದೀಯೇ ವಿದ್ಯಾsಸ್ತಿ ದಿಕ್ಪತಿಭಿರಪ್ಯವಿಷಹ್ಯರೂಪಾ ।

ಉಕ್ತೋsಪಿ ನೋ ಗುರುಭಿರೇಷ ನಿಯುಙ್ಕ್ತ ಏತಾಂ ವದ್ಧ್ಯಸ್ತಥಾsಪಿ ನ ಸುರಾಸುರಪಾಲಕೈಶ್ಚ ॥೧೯.೮೨॥

 

ಈರೀತಿಯಾಗಿ ಬ್ರಾಹ್ಮಣನಿಂದ ಹೇಳಲ್ಪಟ್ಟ ಕುಂತಿಯು ಹೇಳುತ್ತಾಳೆ: ‘ನನ್ನ ಮಗನಲ್ಲಿ ದೇವತೆಗಳಿಂದಲೂ ಕೂಡಾ ಎದುರಿಸಲು ಸಾಧ್ಯವಾಗದ ವಿದ್ಯೆಯೊಂದಿದೆ. ಗುರುಗಳಿಂದ ಹೇಳಿದರೂ ಕೂಡಾ ಅವನು ಅದನ್ನು ತನ್ನ ಆತ್ಮರಕ್ಷಣೆಗಾಗಿ ಉಪಯೋಗಿಸುವುದಿಲ್ಲ.  ಆದರೂ, ಯಾರಿಂದಲೂ ನನ್ನ ಮಗ ವಧ್ಯನಲ್ಲ’ ಎಂದು.

No comments:

Post a Comment