ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 22, 2018

Mahabharata Tatparya Nirnaya Kannada 9.113-9.118



ಅಙ್ಗದಃ ಕಾಲತಸ್ತ್ಯಕ್ತ್ವಾ ದೇಹಮಾಪ ನಿಜಾಂ ತನುಮ್
ರಾಮಾಜ್ಞಯೈವ ಕುರ್ವಾಣೋ ರಾಜ್ಯಂ ಕುಶಸಮನ್ವಿತಃ ೯.೧೧೩

ಅಂಗದನು ಕುಶನಿಂದ ಕೂಡಿ, ರಾಮನ ಆಜ್ಞೆಯಂತೆ ಕಪಿರಾಜ್ಯವನ್ನು ಆಳುತ್ತಾ, ಕಾಲತಃ ದೇಹವನ್ನು ಬಿಟ್ಟು, ತನ್ನ ಮೂಲರೂಪವನ್ನು ಸೇರಿಕೊಂಡನು.

ವಿಭೀಷಣಶ್ಚ ಧರ್ಮ್ಮಾತ್ಮಾ ರಾಘವಾಜ್ಞಾಪುರಸ್ಕೃತಃ
ಸೇನಾಪತಿರ್ದ್ಧನೇಶಸ್ಯ ಕಲ್ಪಮಾವೀತ್ ಸ ರಾಕ್ಷಸಾನ್ ೯.೧೧೪

ವಿಭೀಷಣನೂ ಕೂಡಾ ರಾಮಚಂದ್ರನ ಆಜ್ಞೆಯಂತೆ ಕುಬೇರನಿಗೆ ವಿನೀತನಾಗಿ, ಅವನ ಸೇನಾಧಿಪತಿಯಾಗಿ, ಕಲ್ಪಕಾಲಪರ್ಯಂತ ರಾಕ್ಷಸರನ್ನು ರಕ್ಷಿಸುತ್ತಾನೆ.
[ಮೂಲತಃ ಲಂಕೆ ಕುಬೇರನಿಗೆ ಸೇರಿರುವುದು. ಆದರೆ ರಾವಣ ಅದನ್ನು ಅತಿಕ್ರಮಣ ಮಾಡಿ ಕುಬೇರನಿಂದ ಕಸಿದುಕೊಂಡಿದ್ದ. ಆದರೆ ವಿಭೀಷಣ ಕುಬೇರನಿಗೆ ವಿನೀತನಾಗಿ ನಡೆದ]

ರಾಮಾಜ್ಞಯಾ ಜಾಮ್ಬವಾಂಶ್ಚ ನ್ಯವಸತ್ ಪೃಥಿವೀತಳೇ
ಉತ್ಪತ್ತ್ಯರ್ತ್ಥಂ ಜಾಮ್ಬವತ್ಯಾಸ್ತದರ್ತ್ಥಂ ಸುತಪಶ್ಚರನ್ ೯.೧೧೫

ಜಾಂಬವಂತ ರಾಮನ ಆಜ್ಞೆಯಂತೆ ಜಾಮ್ಬವತಿಯ ಉತ್ಪತ್ತಿಗಾಗಿ ತಪಸ್ಸನ್ನು ಮಾಡುತ್ತಾ  ಭೂಮಿಯಲ್ಲೇ ವಾಸಿಸಿದನು.

ಅಥೋ ರಘೂಣಾಂ ಪ್ರವರಃ ಸುರಾರ್ಚ್ಚಿತಃ ಸ್ವಯೈಕತನ್ವಾ ನ್ಯವಸತ್ ಸುರಾಲಯೇ
ದ್ವಿತೀಯಯಾ ಬ್ರಹ್ಮಸದಸ್ಯಧೀಶ್ವರಸ್ತೇನಾರ್ಚ್ಚಿತೋsಥಾಪರಾಯಾ ನಿಜಾಲಯೇ ೯.೧೧೬

ತದನಂತರ ರಘುಗಳಲ್ಲಿ ಶ್ರೇಷ್ಠರಾದ ರಾಮಚಂದ್ರನು, ಒಂದು ರೂಪದಿಂದ ದೇವತೆಗಳಿಂದ ಪೂಜಿತನಾಗಿ, ದೇವತೆಗಳ ಆಲಯದಲ್ಲಿ ನೆಲಸಿದನು. ಇನ್ನೊಂದು ರೂಪದಿಂದ ಬ್ರಹ್ಮದೇವರ ಲೋಕವಾದ ಸತ್ಯಲೋಕದಲ್ಲಿ ಅವನಿಂದ ಪೂಜಿತನಾಗಿ ನೆಲೆಸಿದನು. ಇನ್ನೊಂದು ರೂಪದಿಂದ ವಿಷ್ಣುಲೋಕದತ್ತ  ಸಾಗಿದನು.

ತೃತೀಯರೂಪೇಣ ನಿಜಂ ಪದಂ ಪ್ರಭುಂ ವ್ರಜನ್ತಮುಚ್ಚೈರನುಗಮ್ಯ  ದೇವತಾಃ
ಅಗಮ್ಯಮರ್ಯ್ಯಾದಮುಪೇತ್ಯ ಚ ಕ್ರಮಾದ್ ವಿಲೋಕಯನ್ತೋsತಿವಿದೂರತೋsಸ್ತುವನ್ ೯.೧೧೭

ಮೂರನೆಯ ರೂಪದಿಂದ ವಿಷ್ಣುಲೋಕವನ್ನು ಕುರಿತು ಹೋಗುವ ನಾರಾಯಣನನ್ನು ಅನುಸರಿಸಿದ ದೇವತೆಗಳು, ಸರ್ವಸಮರ್ಥ  ಪರಮಾತ್ಮನನ್ನು ಅವರವರ ಯೋಗ್ಯತಾನುಗುಣವಾಗಿ  ಕಾಣುತ್ತಾ, ದೂರದಿಂದಲೇ ಉತ್ಕೃಷ್ಟವಾದ ಭಕ್ತಿಯಿಂದ  ಸ್ತೋತ್ರ ಮಾಡಿದರು.

ಬ್ರಹ್ಮಾ ಮರುನ್ಮಾರುತಸೂನುರೀಶಃ ಶೇಷೋ ಗರುತ್ಮಾನ್ ಹರಿಜಃ ಶಕ್ರಕಾದ್ಯಾಃ
ಕ್ರಮಾದನುವ್ರಜ್ಯ ತು ರಾಘವಸ್ಯ ಶಿರಸ್ಯಥಾsಜ್ಞಾಂ ಪ್ರಣಿಧಾಯ ನಿರ್ಯ್ಯಯುಃ ೯.೧೧೮

ಬ್ರಹ್ಮ, ಮುಖ್ಯಪ್ರಾಣ, ಹನುಮಂತ, ಸದಾಶಿವ, ಶೇಷ, ಗರುಡ, ಕಾಮ, ಶಕ್ರಕಾ(ಇಂದ್ರ), ಹೀಗೆ ಎಲ್ಲರೂ ಕೂಡಾ ಕ್ರಮೇಣ(ಯೋಗ್ಯತಾನುಸಾರ) ಭಗವಂತನನ್ನು  ಅನುಸರಿಸಿ, ರಾಮಚಂದ್ರನ ಆಜ್ಞೆಯನ್ನು ಶಿರಸಾ ಹೊತ್ತು ಮರಳಿ ಬಂದರು.

No comments:

Post a Comment