ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 25, 2018

Mahabharata Tatparya Nirnaya Kannada 9.125-9.129


ಇತ್ಯಶೇಷಪುರಾಣೇಭ್ಯಃ ಪಞ್ಚರಾತ್ರೇಭ್ಯ ಏವ ಚ
ಭಾರತಾಚ್ಚೈವ ವೇದೇಭ್ಯೋ ಮಹಾರಾಮಾಯಣಾದಪಿ ೯.೧೨೫

ಪರಸ್ಪರವಿರೋಧಸ್ಯ ಹಾನಾನ್ನಿರ್ಣ್ಣೀಯ ತತ್ತ್ವತಃ
ಯುಕ್ತ್ಯಾ ಬುದ್ಧಿಬಲಾಚ್ಚೈವ ವಿಷ್ಣೋರೇವ ಪ್ರಸಾದತಃ ೯.೧೨೬

ಬಹುಕಲ್ಪಾನುಸಾರೇಣ ಮಯೇಯಂ ಸತ್ಕಥೋದಿತಾ
ನೈಕಗ್ರನ್ಥಾಶ್ರಯಾತ್ ತಸ್ಮಾನ್ನಾSಶಙ್ಕ್ಯಾSತ್ರ ವಿರುದ್ಧತಾ ೯.೧೨೭

(ಆಚಾರ್ಯರು ಈವರೆಗೆ ತಾನು ಪ್ರಸ್ತುತಪಡಿಸಿದ  ರಾಮಾಯಣದ ನಿರ್ಣಯಕ್ಕೆ ಪ್ರಮಾಣ ಯಾವುದು ಎನ್ನುವುದನ್ನು ಇಲ್ಲಿ ಹೇಳಿದ್ದಾರೆ) ಈರೀತಿಯಾಗಿ, ಎಲ್ಲಾ ಪುರಾಣಗಳಿಂದಲೂ, ಪಂಚರಾತ್ರಗಳಿಂದಲೂ , ಭಾರತದಿಂದಲೂ , ವೇದದಿಂದಲೂ, ಮೂಲ ರಾಮಾಯಣದಿಂದಲೂ, ಅಲ್ಲಿ ಸೇರಿದ್ದ ಕಸವನ್ನು ತೆಗೆದು,  ಪರಸ್ಪರ ವಿರೋಧವನ್ನು ಕಳೆದು, ನಿರ್ಣಯವನ್ನು ಮಾಡಿ, ಯುಕ್ತಿಯಿಂದ, ಪ್ರಜ್ಞೆಯ ಬಲದಿಂದ,  ಪರಮಾತ್ಮನ ಅನುಗ್ರಹದಿಂದ, ಬಹಳ ಕಲ್ಪಕ್ಕೆ ಅನುಗುಣವಾಗಿ ಈ ರಾಮಾಯಣದ ಕಥೆಯನ್ನು ಹೇಳಿದ್ದೇನೆ. ಯಾವುದೋ ಒಂದು ಗ್ರಂಥವನ್ನು ನಾನು ಆಶ್ರಯಿಸಿಲ್ಲ. ಹಲವಾರು ಗ್ರಂಥಗಳನ್ನು ಆಶ್ರಯಿಸಿದ್ದೇನೆ. ಅದರಿಂದಾಗಿ ಇದರಲ್ಲಿ ವಿರೋಧವನ್ನು ಎಣಿಸಬಾರದು.

ಕ್ವಚಿನ್ಮೋಹಾಯಾಸುರಾಣಾಂ ವ್ಯತ್ಯಾಸಃ ಪ್ರತಿಲೋಮತಾ
ಉಕ್ತಾ ಗ್ರನ್ಥೇಷು ತಸ್ಮಾದ್ಧಿ ನಿರ್ಣ್ಣಯೋSಯಂ ಕೃತೋ ಮಯಾ ೯.೧೨೮

ಕೆಲವೊಮ್ಮೆ ಅಸುರರ ಮೋಹಕ್ಕಾಗಿ ನಾನಾ ರೀತಿಯ ವ್ಯತ್ಯಾಸ ಮತ್ತು ಪ್ರತಿಲೋಮತ್ವವು ಗ್ರಂಥಗಳಲ್ಲಿ ಹೇಳಲ್ಪಟ್ಟಿದೆ. ಆ ಕಾರಣದಿಂದ ಗ್ರಂಥೋಕ್ತವಾದ ಈ ನಿರ್ಣಯವನ್ನು ನಾನು ಮಾಡಿದ್ದೇನೆ.

ಏವಂ ಚ ವಕ್ಷ್ಯಮಾಣೇಷು ನೈವಾsಶಙ್ಕ್ಯಾ ವಿರುದ್ಧತಾ
ಸರ್ವಕಲ್ಪಸಮಶ್ಚಾಯಂ ಪಾರಾವರ್ಯ್ಯಕ್ರಮಃ ಸದಾ ೯.೧೨೯

ಈರೀತಿಯಾಗಿ  ಕಥೆಗಳು ಹೇಳಲ್ಪಡುತ್ತಿರಲು, ಇಲ್ಲಿ ವಿರೋಧವನ್ನು ಶಂಕಿಸಬಾರದು. ಇದರ ಪೂರ್ವಾಪರಿ ಭಾವ ಎಲ್ಲಾ ಕಲ್ಪದಲ್ಲಿಯೂ ಸಾಧಾರಣ ಅಥವಾ ಸಮವಾಗಿರುತ್ತದೆ. [ಇಲ್ಲಿ ಹೇಳಿದ ಕ್ರವವನ್ನು ಮುಖ್ಯವಾಗಿ ಅನುಸರಿಸಿರತಕ್ಕದ್ದಾಗಿರುತ್ತದೆ. ಅಂದರೆ ಮುಖ್ಯವಾಗಿ ಪ್ರತಿ ಕಲ್ಪದಲ್ಲಿಯೂ ಇದೇ ಕ್ರಮದಲ್ಲಿ ಘಟನೆಗಳು ಸಂಭವಿಸುತ್ತವೆ]

No comments:

Post a Comment