ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, August 17, 2018

Mahabharata Tatparya Nirnaya Kannada 9.83-9.88


ಉದಾರಬಾಹುಭೂಷಣಃ ಶುಭಾಙ್ಗದಃ ಸಕಙ್ಕಣಃ
ಮಹಾಙ್ಗುಲೀಯಭೂಷಿತಃ ಸುರಕ್ತಸತ್ಕರಾಮ್ಭುಜಃ ೯.೮೩

 ಉತ್ಕೃಷ್ಟವಾದ ತೊಳಬಂಧೀ, ಕಂಕಣ ಹಾಗು  ಉಂಗುರವನ್ನು ತೊಟ್ಟಿದ್ದ ಶ್ರೀರಾಮ, ಉತ್ಕೃಷ್ಟ ಬಾಹು ಭೂಷಣನಾಗಿದ್ದ. ಕೆಂಪಾದ ಹಸ್ತತಳ ಅವನದಾಗಿತ್ತು.

ಅನರ್ಘರತ್ನಮಾಲಯಾ  ವನಾಖ್ಯಯಾ ಚ ಮಾಲಯಾ
ವಿಲಾಸಿವಿಸ್ತೃತೋರಸಾ ಬಭಾರ ಚ ಶ್ರಿಯಂ ಪ್ರಭುಃ ೯.೮೪

ಅನರ್ಘವಾಗಿರುವ (ಬೆಲೆಕಟ್ಟಲಾಗದ ಅತ್ಯುತ್ತಮ) ರತ್ನಗಳಿಂದ ಕೂಡಿರುವ ಮಾಲೆ ಮತ್ತು  ವನಮಾಲೆಗಳಿಂದ ಶೋಭಿಸುತ್ತಿದ್ದ ಶ್ರೀರಾಮ,  ತನ್ನ  ಅಗಲವಾದ ವಕ್ಷಸ್ಥಳದಲ್ಲಿ ಶ್ರೀಲಕ್ಷ್ಮಿಯನ್ನು ಧರಿಸಿದ್ದ.

ಸ ಭೂತಿವತ್ಸಭೂಷಣಸ್ತನೂದರೇ ವಲಿತ್ರಯೀ
ಉದಾರಮಧ್ಯಭೂಷಣೋ ಲಸತ್ತಟಿತ್ಪ್ರಭಾಮ್ಬರಃ ೯.೮೫

ಶ್ರೀವತ್ಸದಿಂದ ಕೂಡಿದವನಾದ ಶ್ರೀರಾಮನ  ಚೆಲುವಾದ ಹೊಟ್ಟೆಯಲ್ಲಿ ರೇಖತ್ರಯಗಳಿದ್ದವು.  ಆತ ಪೀತಾಂಬರವನ್ನು ಧರಿಸಿ ಶೋಭಿಸುತ್ತಿದ್ದ.

ಕರೀನ್ದ್ರಸತ್ಕರೋರುಯುಕ್ ಸುವೃತ್ತಜಾನುಮಣ್ಡಲಃ
ಕ್ರಮಾಲ್ಪವೃತ್ತಜಙ್ಘಕಃ ಸುರಕ್ತಪಾದಪಲ್ಲವಃ ೯.೮೬

ಲಸದ್ಧರಿನ್ಮಣಿಧ್ಯುತೀ ರರಾಜ ರಾಘವೋsಧಿಕಮ್
ಅಸಙ್ಖ್ಯಸತ್ಸುಖಾರ್ಣ್ಣವಃ ಸಮಸ್ತಶಕ್ತಿಸತ್ತನುಃ ೯.೮೭


ಆನೆಯ ಸೊಂಡಿಲಿನಂತಹ ತೊಡೆ, ಉರುಟಾಗಿರುವ ಮಂಡಿ, ಕ್ರಮದಿಂದ ವರ್ತುಲವಾದ(ಮಂಡಿಯಿಂದ ಮಣಿಗಂಟಿನತನಕ ಕ್ರಮವಾಗಿ ಉರುಟಾಗಿರುವ) ಮೊಣಕಾಲು, ಕೆಂಪಾದ ಪಾದತಳ, ನೀಲಿಯಾದ ಮಣಿಯಂತೆ ಕಂಗೊಳಿಸುತ್ತಿರುವ,  ಸುಖಾತ್ಮಕವೂ , ಶಕ್ತ್ಯಾತ್ಮಕವೂ ಆಗಿರುವ ಶರೀರವುಳ್ಳ ರಾಮಚಂದ್ರ ಶೋಭಿಸುತ್ತಿದ್ದನು.

ಜ್ಞಾನಂ ನೇತ್ರಾಬ್ಜಯುಗ್ಮಾನ್ಮುಖವರಕಮಲಾತ್ ಸರ್ವವೇದಾರ್ತ್ಥಸಾರಾಂ-
ಸ್ತನ್ವಾ ಬ್ರಹ್ಮಾಣ್ಡಬಾಹ್ಯಾನ್ತರಮಧಿಕರುಚಾ ಭಾಸಯನ್ ಭಾಸುರಾಸ್ಯಃ
ಸರ್ವಾಭೀಷ್ಟಾಭಯೇ ಚ ಸ್ವಕರವರಯಗೇನಾರ್ತ್ಥಿನಾಮಾದಧಾನಃ
ಪ್ರಾಯಾದ್ದೇವಾಧಿದೇವಃ ಸ್ವಪದಮಭಿಮುಖಶ್ಚೋತ್ತರಾಶಾಂ ವಿಶೋಕಾಮ್ ೯.೮೮

ಎರಡು ತಾವರೆಯಂತಾ ಕಂಗಳಿಂದ ಜ್ಞಾನದ ಬೆಳಕನ್ನು ಬೆಳಗಿಸಿದವನು. ಮುಖಕಮಲದ ಕಾಂತಿಯಿಂದ ಸರ್ವ ವೇದಾರ್ಥದ ಸಾರವನ್ನು ಬೆಳಗಿಸಿದವನು. [ಅನುಗ್ರಹದ ಕಣ್ನೋಟದಿಂದ ಜ್ಞಾನವನ್ನು ಭಕ್ತರ ಹೃದಯದಲ್ಲಿ ಬೆಳಗಿಸುವವನು, ತನ್ನ ಮಾತಿನಿಂದ ವೇದಗಳ ಅರ್ಥಸಾರವನ್ನು ದೇವತೆಗಳ ಹೃದಯದಲ್ಲಿ ಬೆಳಗಿಸಿದವನು] ಸ್ವಶಕ್ತಿಯಿಂದ ಬ್ರಹ್ಮಾಂಡದ ಒಳಗೆ ಹೊರಗೆ ತುಂಬಿ ನಿಂತವನು, ಹೊಳೆವ ಮುಖದವನು, ನೊಂದವರ ನೋವು ನೀಗಲೆಂದೆ ವರ ಮತ್ತು ಅಭಯ ಎಂಬ ಎರಡು ಕೈಗಳನ್ನು ಹಿಡಿದಿರುವವನು. ಇಂಥಾ ದೇವಾದಿದೇವನು ತಾನು ವಿಶೋಕವೆಂಬ ಉತ್ತರದಿಕ್ಕಿಗೆ ನಡೆದನು.

ಕನ್ನಡ ಪದ್ಯರೂಪ: https://go-kula.blogspot.com/2018/08/9-83-88.html

No comments:

Post a Comment