ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, August 9, 2018

Mahabharata Tatparya Nirnaya Kannada 9.40-9.43


ಪ್ರವಿಶ್ಯ ಭೂಮೌ ಸಾ ದೇವೀ ಲೋಕದೃಷ್ಟ್ಯನುಸಾರತಃ
ರೇಮೇ ರಾಮೇಣಾವಿಯುಕ್ತಾ ಭಾಸ್ಕರೇಣ ಪ್ರಭಾ ಯಥಾ ೯.೪೦

 ಆ ಸೀತಾದೇವಿಯು ಲೋಕದದೃಷ್ಟಿಗೆ ಅನುಸಾರವಾಗಿ ಭೂಮಿಯನ್ನು ಪ್ರವೇಶಿಸಿ, ಸೂರ್ಯನಿಂದ ವೀಯೋಗವಿಲ್ಲದ ಸೂರ್ಯಕಾಂತಿಯಂತೆ , ಶ್ರೀರಾಮನಿಂದ ಬೇರ್ಪಡದೇ ಶೋಭಿಸಿದಳು.

ಏವಂ ರಮಲಾಳಿತಪಾದಪಲ್ಲವಃ ಪುನಃ ಸ ಯಜ್ಞೈಶ್ಚ ಯಜನ್ ಸ್ವಮೇವ
ವರಾಶ್ವಮೇಧಾದಿಭಿರಾಪ್ತಕಾಮೋ ರೇಮೇsಭಿರಾಮೋ ನೃಪತೀನ್ ವಿಶಿಕ್ಷಯನ್      ೯.೪೧

ಈ ರೀತಿಯಾಗಿ ಲಕ್ಷ್ಮೀ ದೇವಿಯಿಂದ ವನ್ದಿತವಾದ ಪಾದಕಮಲವುಳ್ಳ  ಶ್ರೀರಾಮಚಂದ್ರನು, ಅಶ್ವಮೇಧ ಮೊದಲಾದ ಯಜ್ಞಗಳಿಂದ ತನ್ನನ್ನೇ ತಾನು ಪೂಜಿಸುತ್ತಾ, ಆಪ್ತಕಾಮನೆನಿಸಿ, ರಾಜರಿಗೆ ತಾವು ಹೇಗಿರಬೇಕು ಎನ್ನುವುದನ್ನುಶಿಕ್ಷಿಸುತ್ತಾ, ವಿಹರಿಸಿದನು.

ರಾಮಸ್ಯ ದೃಶ್ಯಾ ತ್ವನ್ಯೇಷಾಮದೃಶ್ಯಾ ಜನಕಾತ್ಮಜಾ
ಭೂಮಿಪ್ರವೇಶಾದೂರ್ಧ್ವಂ ಸಾ ರೇಮೇ ಸಪ್ತಶತಂ ಸಮಾಃ ೯.೪೨

ರಾಮನಿಗೆ ಕಾಣುವವಳಾಗಿಯೂ,  ಬೇರೊಬ್ಬರಿಗೆ ಅಗೋಚರಳಾಗಿ ಸೀತೆ,  ‘ಭೂಮಿ ಪ್ರವೇಶ’ ಘಟನೆಯ ನಂತರ  ಏಳುನೂರು ವರ್ಷಗಳ ಕಾಲ ಕ್ರೀಡಿಸಿದಳು.

ಏವಂವಿಧಾನ್ಯಗಣಿತಾನಿ ಜನಾರ್ದ್ದನಸ್ಯ ರಾಮಾವತಾರಚರಿತಾನಿ ತದನ್ಯಪುಮ್ಭಿಃ
ಶಕ್ಯಾನಿ ನೈವ ಮನಸಾsಪಿ ಹಿ ತಾನಿ  ಕರ್ತ್ತುಂ ಬ್ರಹ್ಮೇಶಶೇಷಪುರುಹೂತಮುಖೈಃ ಸುರೈಶ್ಚ ೯.೪೩

ಈರೀತಿಯಾಗಿರುವ ರಾಮಾವತಾರದ ಚರಿತ್ರೆಗಳನ್ನು ನಾರಾಯಣನನ್ನು ಬಿಟ್ಟು ಬೇರೊಬ್ಬರಿಗೆ ಮನಸ್ಸಿನಿಂದಲೂ ಮಾಡಲು ಅಸಾಧ್ಯ.  ಅದು ಬ್ರಹ್ಮ, ರುದ್ರ, ಶೇಷ, ಇಂದ್ರ, ಮೊದಲಾದ ಯಾರಿಂದಲೂ ಸಾಧ್ಯವಿಲ್ಲಾ.

ಕನ್ನಡ ಪದ್ಯರೂಪ: https://go-kula.blogspot.com/2018/08/9-40-43.html

No comments:

Post a Comment