ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, August 7, 2018

Mahabharata Tatparya Nirnaya Kannada 9.27-9.33


ಅಥಕೇಚಿದಾಸುರಸುರಾಃ ಸುರಾಣಕಾ ಇತ್ಯುರುಪ್ರಥಿತಪೌರುಷಾಃ ಪುರಾ
ತೇ ತಪಃ ಸುಮಹದಾಸ್ಥಿತಾ ವಿಭುಂ ಪದ್ಮಸಮ್ಭವಮವೇಕ್ಷ್ಯ ಚೋಚಿರೇ ೯.೨೭

ಇಲ್ಲಿ ವಿಷಯಾಂತರದಲ್ಲಿ(ಕಥಾಂತರವನ್ನು) ಹೇಳುತ್ತಾರೆ:  ಸುರಾಣಕರು ಎಂದು ಎಲ್ಲೆಡೆ ಪ್ರಸಿದ್ಧವಾದ, ಪರಾಕ್ರಮವುಳ್ಳ ಕೆಲವರು ಅಸುರರಿದ್ದರು. ಅವರು ಬಹಳ ದೊಡ್ಡ ತಪಸ್ಸನ್ನು ಮಾಡಿದವರಾಗಿ, ತಪಸ್ಸಿಗೊಲಿದ  ಬ್ರಹ್ಮದೇವರಲ್ಲಿ ಹೀಗೆ ಹೇಳಿದರು:

ಭೂರಿಪಾಕಕೃತಿನೋsಪಿ ನಿಶ್ಚಯಾನ್ಮುಕ್ತಿಮಾಪ್ನುಮ ಉದಾರಸದ್ಗುಣ
ಇತ್ಯುದೀರಿತಮಜೋsವಧಾರ್ಯ್ಯ ತತ್ ಪ್ರಾಹ ಚ ಪ್ರಹಸಿತಾನನಃ ಪ್ರಭುಃ ೯.೨೮

‘ಉತ್ಕೃಷ್ಟವಾದ  ಸದ್ಗುಣವುಳ್ಳವನೇ, ನಾವು ಅತ್ಯಂತ ಪಾಪವನ್ನು ಮಾಡುತ್ತಿದ್ದರೂ ಕೂಡಾ, ಖಂಡಿತವಾಗಿ ಮುಕ್ತಿಯನ್ನು ಹೊಂದಬೇಕು’.   ಈ ರೀತಿಯಾದ ಸುರಾಣಕರ ಮಾತನ್ನು  ಬ್ರಹ್ಮದೇವರು ಕೇಳಿ, ಮುಗುಳುನಕ್ಕು ಹೀಗೆ ನುಡಿದರು:

ಯಾವದೇವ ರಮಯಾ ರಮೇಶ್ವರಂ ನೋ ವಿಯೋಜಯಥ ಸದ್ಗುಣಾರ್ಣ್ಣವಮ್
ತಾವದುಚ್ಚಮಪಿ ದುಷ್ಕೃತಂ ಭವನ್ಮೋಕ್ಷಮಾರ್ಗ್ಗಪರಿಪನ್ಥಿ ನೋ ಭವೇತ್ ೯.೨೯

‘ಎಲ್ಲಿಯ ತನಕ ರಮೆಯಿಂದ ರಮೇಶ್ವರನನ್ನು ಬೇರ್ಪಡಿಸುವುದಿಲ್ಲವೋ, ಅಲ್ಲಿಯ ತನಕ ನಿಮ್ಮ ಯಾವುದೇ ತಪ್ಪುಗಳು ಮೋಕ್ಷದ ಮಾರ್ಗದಲ್ಲಿ ಅಡ್ಡಿ ಆಗಲಾರದು’

ಇತ್ಯುದೀರಿತಮವೇತ್ಯ ತೇSಸುರಾಃ ಕ್ಷಿಪ್ರಮೋಕ್ಷಗಮನೋತ್ಸುಕಾಃ ಕ್ಷಿತೌ
ಸಾಧನೋಪಚಯಕಾಙ್ಕ್ಷಿಣೋ ಹರೌ ಶಾಸತಿ ಕ್ಷಿತಿಮಶೇಷತೋSಭವನ್ ೯.೩೦

ಈ ರೀತಿಯಾಗಿ ಬ್ರಹ್ಮನಿಂದ ವರವನ್ನು ಡೆದ ಅಸುರರು, ಕ್ಷಿಪ್ರವಾಗಿ  ಮೋಕ್ಷವನ್ನು ಹೊಂದಲು ಬಯಸಿ, ತಮ್ಮ ಸಾಧನೆಯನ್ನು ಮಾಡಬೇಕು ಎಂದು, ರಾಮಚಂದ್ರ ಆಳುತ್ತಿರಲು, ಎಲ್ಲರೂ ಆ ಭೂಮಿಯಲ್ಲಿ ಎಲ್ಲೆಡೆ  ಹುಟ್ಟಿದರು.

ತಾನನಾದಿಕೃತದೋಷಸಞ್ಚಯೈರ್ಮ್ಮೋಕ್ಷಮಾರ್ಗ್ಗಗತಿಯೋಗ್ಯತೋಜ್ಝಿತಾನ್
ಮೈಥಿಲಸ್ಯ ತನಯಾ ವ್ಯಚಾಲಯನ್ಮಾಯಯಾ ಸ್ವತನುವಾ ಸ್ವಮಾರ್ಗ್ಗತಃ ೯.೩೧

ಅನಾದಿಕಾಲದಿಂದ ಮಾಡಿದ ಪಾಪದ ಸಮೂಹಗಳಿಂದ ಮೋಕ್ಷಕ್ಕೆ ಹೋಗಲು ಯೋಗ್ಯತೆ ಇಲ್ಲದ ಈ ಸುರಾಣಕರನ್ನು ಸೀತಾದೇವಿಯೇ ತನ್ನದುರ್ಗಾರೂಪದ ಮಾಯೆಯಿಂದ, ಆ ಮಾರ್ಗದಿಂದ ಕದಲಿಸಿದಳು.

ಆಜ್ಞಯೈವ ಹಿ ಹರೇಸ್ತು ಮಾಯಯಾ ಮೋಹಿತಾಸ್ತು ದಿತಿಜಾ ವ್ಯನಿನ್ದಯನ್
ರಾಘವಂ ನಿಶಿಚರಾಹೃತಾಂ ಪುನರ್ಜ್ಜಾನಕೀಂ ಜಗೃಹ ಇತ್ಯನೇಕಶಃ ೯.೩೨

ನಾರಾಯಣನ ಅಣತಿಯಿಂದಲೇ, ದುರ್ಗಾದೇವಿಯಿಂದ ತಪ್ಪು ತಿಳಿದುಕೊಂಡ ದೈತ್ಯರು, ರಾಮಚಂದ್ರನನ್ನು ನಿಂದನೆ ಮಾಡಲಾರಂಭಿಸಿದರು.  ‘ರಾವಣ ಹೊತ್ತೊಯ್ದ ಜಾನಕಿಯನ್ನು ರಾಮ ಮತ್ತೆ ಸ್ವೀಕರಿಸಿದ’ ಎಂಬಿತ್ತ್ಯಾದಿ ಮಾತುಗಳಿಂದ ಬಹುಪ್ರಕಾರವಾಗಿ ನಿಂದಿಸಲಾರಮ್ಭಿಸಿದರು.
[ರಾಮಾಯಣದ ಉತ್ತರಕಾಂಡದಲ್ಲಿ(೪೩.೨೦) ಹೇಳುವಂತೆ: ‘ಏವಂ ಬಹುವಿಧಾ ವಾಚೋ ವದಂತಿ ಪುರವಾಸಿನಃ ನಗರೇಷು ಚ ಸರ್ವೇಷು ರಾಜನ್ ಜನಪದೇಷು ಚ’  ಬಹಳ ಜನರು ಅಲ್ಲಲ್ಲಿ ನಿಂತು ಮಾತನಾಡುತ್ತಿದ್ದುದನ್ನು ರಾಮ ಗೂಢಚಾರರ ಮುಖೇನ, ಮತ್ತು ಸ್ವಯಂ  ತಾನೇ  ಮಾರುವೇಷದಲ್ಲಿ  ಹೋಗಿ  ಕೇಳಿಸಿಕೊಂಡ].

ಬ್ರಹ್ಮವಾಕ್ಯಮೃತಮೇವ ಕಾರಯನ್ ಪಾತಯಂಸ್ತಮಸಿ ಚಾನ್ಧ ಆಸುರಾನ್
ನಿತ್ಯಮೇವ ಸಹಿತೋsಪಿ ಸೀತಯಾ ಸೋsಜ್ಞಸಾಕ್ಷಿಕಮಭೂದ್ ವಿಯುಕ್ತವತ್ ೯.೩೩

ಬ್ರಹ್ಮ ಸುರಾಣಕರಿಗೆ ಕೊಟ್ಟ ವರವನ್ನು ಸತ್ಯವನ್ನಾಗಿ ಮಾಡಲು, ಸುರಾಣಕ ದೈತ್ಯರನ್ನು ಅನ್ಧತಮಸ್ಸಿನಲ್ಲಿ ಹಾಕಲು, ಸದಾ  ಲಕ್ಷ್ಮೀದೇವಿಯಿಂದ ಸಹಿತನಾದರೂ ಕೂಡಾ,  ಅಜ್ಞಾನಿಗಳ ಕಣ್ಣಿಗೆ ಸೀತೆಯನ್ನು ತೊರೆದ ವಿಯೋಗಿಯಂತೆ ಶ್ರೀರಾಮ ಕಂಡ.

ಕನ್ನಡ ಪದ್ಯರೂಪ: https://go-kula.blogspot.com/2018/08/9-27-33.html

1 comment: