ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, June 29, 2018

Mahabharata Tatparya Nirnaya Kannada 8.94-8.98


ರಥಂ ಸಮಾರುಹ್ಯ ಪುನಃ ಸ ಕಾರ್ಮ್ಮುಕಃ  ಸಮಾರ್ಗ್ಗಣೋ ರಾವಣ ಆಶು ರಾಮಮ್ ।
ಅಭ್ಯೇತ್ಯ ಸರ್ವಾಶ್ಚ ದಿಶಶ್ಚಕಾರ ಶರಾನ್ಧಕಾರಾಃ ಪರಮಾಸ್ತ್ರವೇತ್ತಾ ॥೮.೯೪॥

ಶ್ರೀರಾಮನ ನುಡಿಯನ್ನು ಕೇಳಿದ, ಪರಮಾಸ್ತ್ರಗಳನ್ನುತಿಳಿದಿರುವ  ರಾವಣನು ತನ್ನ ಬಿಲ್ಲು-ಬಾಣಗಳೊಂದಿಗೆ ರಥವನ್ನು ಏರಿ, ರಾಮನ ಎದುರು ಬಂದು,  ಸಮಸ್ತ ದಿಕ್ಕುಗಳಲ್ಲಿಯೂ ಬಾಣಗಳನ್ನು ಬಿಟ್ಟು ಕತ್ತಲೆಯನ್ನಾಗಿ ಮಾಡಿದನು. (ಎಲ್ಲಾ ದಿಕ್ಕುಗಳಲ್ಲಿಯೂ ಬಾಣಗಳನ್ನು ಬಿಟ್ಟನು ಎನ್ನುವುದನ್ನು ಆಲಂಕಾರಿಕವಾಗಿ ಕತ್ತಲೆಯನ್ನಾಗಿ ಮಾಡಿದನು ಎಂದು ಹೇಳುತ್ತಾರೆ)   

ರಥಸ್ಥಿತೇsಸ್ಮಿನ್ ರಜನೀಚರೇಶೇ ನ ಮೇ ಪತಿರ್ಭೂಮಿತಳೇ ಸ್ಥಿತಃ ಸ್ಯಾತ್ ।
ಇತಿ ಸ್ಮ ಪುತ್ರಃ ಪವನಸ್ಯ ರಾಮಂ ಸ್ಕನ್ದಂ ಸಮಾರೋಪ್ಯ ಯಯೌ ಚ ರಾಕ್ಷಸಮ್ ॥೮.೯೫॥

ರಾವಣನು ರಥದಲ್ಲಿ ನಿಂತು ಯುದ್ಧ ಮಾಡುತ್ತಿರಲು, ತನ್ನ  ಒಡೆಯನಾದ ರಾಮಚಂದ್ರನು ಭೂಮಿಯಲ್ಲಿ ನಿಂತು ಯುದ್ಧ ಮಾಡಬಾರದು ಎಂದು, ಹನುಮಂತನು, ಶ್ರೀರಾಮಚಂದ್ರನನ್ನು ತನ್ನ ಹೆಗಲಿನಲ್ಲಿ ಏರಿಸಿಕೊಂಡು,  ರಾವಣನತ್ತ ತೆರಳಿದನು.

ಪ್ರಹಸ್ಯ ರಾಮೋsಸ್ಯ ಹಯಾನ್ ನಿಹತ್ಯ ಸೂತಂ ಚ ಕೃತ್ವಾ ತಿಲಶೋ ಧ್ವಜಂ ರಥಮ್ ।
ಧನೂಂಷಿ ಖಡ್ಗಂ ಸಕಲಾಯುಧಾನಿ ಚ್ಛತ್ರಂ ಚ ಸಞ್ಛಿದ್ಯ ಚಕರ್ತ್ತ ಮೌಲಿಮ್ ॥೮.೯೬॥

ರಾಮಚಂದ್ರನು ನಗುತ್ತಾ, ರಾವಣನ ಕುದುರೆಗಳನ್ನು, ಸೂತನನ್ನೂ ಕೊಂದು, ಅವನ ದ್ವಜವನ್ನೂ, ರಥವನ್ನೂ ಪುಡಿಪುಡಿ ಮಾಡಿ, ಅವನ ಬಿಲ್ಲು-ಬಾಣಗಳನ್ನು, ಎಲ್ಲಾ ಆಯುಧಗಳನ್ನೂ, ಚ್ಛತ್ರವನ್ನೂ ಭೇಧಿಸಿ, ಕಿರೀಟವನ್ನು ತುಂಡರಿಸಿದನು.

ಕರ್ತ್ತವ್ಯಮೂಢಂ ತಮವೇಕ್ಷ್ಯ ರಾಮಃ ಪುನರ್ಜ್ಜಗಾದಾsಶು ಗೃಹಂ ಪ್ರಯಾಹಿ ।
ಸಮಸ್ತಭೋಗಾನನುಭೂಯ ಶೀಘ್ರಂ ಪ್ರತೋಷ್ಯ ಬನ್ಧೂನ್ ಪುನರೇಹಿ ಮರ್ತ್ತುಮ್ ॥೮.೯೭॥

ಏನು ಮಾಡಬೇಕು ಎಂದು ತಿಳಿಯದೇ ಧಿಗ್ಭ್ರಾಂತನಾದ ರಾವಣನನ್ನು ಕುರಿತು ಶ್ರೀರಾಮ ಹೇಳುತ್ತಾನೆ:  “ಎಲೈ ರಾವಣನೇ, ಶೀಘ್ರವಾಗಿ ಮನೆಗೆ ತೆರಳು. ಎಲ್ಲಾ ಭೋಗಗಳನ್ನು ಅನುಭವಿಸಿ, ಸತ್ತಮೇಲೆ ಯಾರಿಗೆ ಏನೇನು ಕೊಡಬೇಕು ಎಂದಿದೆಯೋ ಅದನ್ನೆಲ್ಲಾ ಈಗಲೇ ಹಂಚಿ, ಸಾಯಲು ಸಿದ್ಧನಾಗಿ  ಮತ್ತೆ ಬಾ. ಈಗ ಹೊರಡು” ಎಂದು.

ಇತೀರಿತೋsವಾಗ್ವದನೋ ಯಯೌ ಗೃಹಂ ವಿಚಾರ್ಯ್ಯ ಕಾರ್ಯ್ಯಂ ಸಹ ಮನ್ತ್ರಿಭಿಃ ಸ್ವಕೈಃ ।
ಹತಾವಶೇಷೈರಥ ಕುಮ್ಭಕರ್ಣ್ಣಪ್ರಬೋಧನಾಯಾsಶು ಮತಿಂ ಚಕಾರ ॥೮.೯೮॥

ಹೀಗೆ ಹೇಳಲ್ಪಟ್ಟ ರಾವಣನು, ತಲೆ ತಗ್ಗಿಸಿ ತನ್ನ ಮನೆಗೆ ತೆರಳಿದನು. ಅಲ್ಲಿ ಅಳಿದುಳಿದ ತನ್ನ ಮಂತ್ರಿಗಳಿಂದ ಮುಂದೇನು ಮಾಡಬೇಕು ಎನ್ನುವುದನ್ನು ವಿಚಾರಿಸಿ, ಶೀಘ್ರದಲ್ಲಿ, ನಿದ್ರಿಸುತ್ತಿರುವ ತನ್ನ ತಮ್ಮನಾದ ಕುಂಭಕರ್ಣನನ್ನು ಎಚ್ಚರಿಸಲು ನಿಶ್ಚಯಿಸಿದನು.

ಕನ್ನಡ ಪದ್ಯರೂಪ:  https://go-kula.blogspot.com/2018/06/8-94-98.html

No comments:

Post a Comment