ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, June 21, 2018

Mahabharata Tatparya Nirnaya Kannada 8.53-8.57


ವಿದ್ರಾವಿತಾಖಿಲಕಪಿಂ ವರಾತ್ ತ್ರಿಶಿರಸಂ ವಿಭೋಃ ।
ಭಙ್ಕ್ತ್ವಾರಥಂ ಧನುಃ ಖಡ್ಗಮಾಚ್ಛಿದ್ಯಾಶಿರಸಂ ವ್ಯಧಾತ್ ॥೮.೫೩॥

ಬ್ರಹ್ಮನ ವರದಿಂದ ಎಲ್ಲಾ ಕಪಿಗಳನ್ನೂ ಓಡಿಸಿದ  ತ್ರಿಶಿರಸ ಎಂಬ ರಾಕ್ಷಸನ ರಥವನ್ನು, ಧನುಸ್ಸನ್ನು ಮುರಿದ ಹನುಮಂತನು, ಅವನ  ಖಡ್ಗವನ್ನು ಸೆಳೆದು,  ಅವನ ಶಿರಸ್ಸನ್ನು ಕತ್ತರಿಸಿದನು. 

ಯುದ್ಧೋನ್ಮತ್ತಶ್ಚ ಮತ್ತಶ್ಚ ಪಾರ್ವತೀವರದರ್ಪ್ಪಿತೌ ।
ಪ್ರಮಥನ್ತೌ ಕಪೀನ್ ಸರ್ವಾನ್ ಹತೌ ಮಾರುತಿಮುಷ್ಟಿನಾ ॥೮.೫೪॥

ಎಲ್ಲಾ ಕಪಿಗಳನ್ನೂ ನಾಶ ಮಾಡುತ್ತಿರುವ, ಪಾರ್ವತೀದೇವಿಯ ವರದಿಂದ ಅಹಂಕಾರಿಗಳಾಗಿರುವ, ‘ಯುದ್ಧೋನ್ಮತ್ತ’ ಹಾಗು  ‘ಮತ್ತ’ ಎನ್ನುವ ಇಬ್ಬರು ರಾಕ್ಷಸರು ಹನುಮಂತನ ಮುಷ್ಟಿ ಪ್ರಹಾರದಿಂದ ಸತ್ತರು. 

ತತೋsತಿಕಾಯೋsತಿರಥೋ ರಥೇನ ಸ್ವಯಂಭುದತ್ತೇನ ಹರೀನ್ ಪ್ರಮೃದ್ನನ್ ।
ಚಚಾರ ಕಾಲಾನಲಸಿನ್ನಿಕಾಶೋ ಗನ್ಧರ್ವಿಕಾಯಾಂ ಜನಿತೋ ದಶಾಸ್ಯಾತ್ ॥೮.೫೫॥

ತದನಂತರ, ರಾವಣನಿಂದ ಗಂಧರ್ವೀಯಲ್ಲಿ^ ಹುಟ್ಟಿರುವ  ಅತಿಕಾಯನು, ಬ್ರಹ್ಮವರದ ಬಲದಿಂದ  ಕಪಿಗಳನ್ನು ಚಂಡಾಡುತ್ತಾ, ಪ್ರಳಯಕಾಲದ ಬೆಂಕಿಗೆ ಸಮನಾಗಿ ಯುದ್ಧಭೂಮಿಯಲ್ಲಿ ಓಡಾಡಿದನು.
(^ಗಂಧರ್ವೀ  ಎಂದರೆ ಮೊದಲು ಗಂಧರ್ವನ ಹೆಂಡತಿಯಾಗಿದ್ದವಳು. ಅಂತಹ ಗಂಧರ್ವೀಯನ್ನು ಬಲಾತ್ಕಾರದಿಂದ ತಂದು ರಾವಣ ಮದುವೆಯಾಗಿದ್ದ. ಅವಳಲ್ಲಿ ರಾವಣನಿಗೆ ಹುಟ್ಟಿದವನು ಅತಿಕಾಯ )   

ಬೃಹತ್ತನುಃ ಕುಮ್ಭವದೇವ ಕರ್ಣ್ಣಾವಸ್ಯೇತ್ಯತೋ ನಾಮ ಚ ಕುಮ್ಭಕರ್ಣ್ಣಃ ।
ಇತ್ಯಸ್ಯ ಸೋsರ್ಕ್ಕಾತ್ಮಜಪೂರ್ವಕಾನ್ ಕಪೀನ್ ಜಿಗಾಯ ರಾಮಂ ಸಹಸಾsಭ್ಯಧಾವತ್ ॥೮.೫೬॥

ಬಹಳ ದೊಡ್ಡ ದೇಹವುಳ್ಳ ಅತಿಕಾಯನಿಗೆ ಮಡಿಕೆಯಂತಹ ಕಿವಿಗಳಿದ್ದವು. ಈ ಕಾರಣದಿಂದ ಅವನನ್ನು ಕುಂಭಕರ್ಣ^ ಎಂದೂ ಕರೆಯುತ್ತಿದ್ದರು. ಇಂತಹ ಅತಿಕಾಯ  ಸುಗ್ರೀವ ಮೊದಲಾದ ಕಪಿಗಳನ್ನು ಗೆದ್ದು, ವೇಗವಾಗಿ ರಾಮಚಂದ್ರನನ್ನು ಎದುರುಗೊಳ್ಳಲು ಹೊರಟ.  
(^ಇವನು ರಾವಣನ ತಮ್ಮನಾದ ಕುಂಭಕರ್ಣನಲ್ಲ. ಈತ ರಾವಣನ ಮಗನಾದ ಅತಿಕಾಯ. ಆತನಿಗೆ ಕುಂಭಕರ್ಣ ಎನ್ನುವ ಅಡ್ಡ ಹೆಸರಿತ್ತು ಅಷ್ಟೇ) 

ತಮಾಪತನ್ತಂ ಶರವರ್ಷಧಾರಂ ಮಹಾಘನಾಭಂ ಸ್ತನಯಿತ್ನುಘೋಷಮ್ ।
ನಿವಾರಯಾಮಾಸ ಯಥಾ ಸಮೀರಃ ಸೌಮಿತ್ರಿರಾತ್ತೇಷ್ವಸನಃ ಶರೌಘೈಃ ॥೮.೫೭॥

ಬಾಣಗಳ ಮಳೆಗೆರೆಯುವ, ದೊಡ್ಡ ಮೋಡದಂತೆ ಇರುವ, ಸಿಡಿಲಿನಂತೆ ಆರ್ಭಟಿಸುತ್ತಾ ಬರುತ್ತಿರುವ ಆ ಅತಿಕಾಯನನ್ನು, ಧನುರ್ಧಾರೀ ಲಕ್ಷ್ಮಣನು ತನ್ನ ಬಾಣಗಳಿಂದ ತಡೆದನು. 

No comments:

Post a Comment