ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, June 25, 2018

Mahabharata Tatparya Nirnaya Kannada 8.70-8.76


ತತಃ ಸ ಸಜ್ಜೀಕೃತಮಾತ್ತಧನ್ವಾ ರಥಂ ಸಮಾಸ್ಥಾಯ ನಿಶಾಚರೇಶ್ವರಃ ।
ವೃತಃ ಸಹಸ್ರಾಯುತಕೋಟ್ಯನೀಕಪೈರ್ನ್ನಿಶಾಚರೈರಾಶು ಯಯೌ ರಣಾಯ ॥೮.೭೦॥

ತದನಂತರ,  ನಿಶಾಚರರಿಗೆ(ರಾತ್ರಿ ಹೊತ್ತು ಸಂಚರಿಸುವ ರಾಕ್ಷಸರಿಗೆ) ಒಡೆಯನಾದ ರಾವಣನು, ಸಮಸ್ತ ಆಯುಧಗಳಿಂದ ಕೂಡಿದ ರಥವನ್ನೇರಿ, ಬಿಲ್ಲನ್ನು ಹಿಡಿದು, ಹತ್ತು ಸಾವಿರ ಕೋಟಿ ಸೇನಾಧಿಪತಿಗಳಿಂದ  ಕೂಡಿದವನಾಗಿ ಯುದ್ಧಕ್ಕೆಂದು ತೆರಳಿದನು.

ಬಲೈಸ್ತು ತಸ್ಯಾಥ ಬಲಂ ಕಪೀನಾಂ ನೈಕಪ್ರಕಾರಾಯುಧಪೂಗಭಗ್ನಮ್ ।
ದಿಶಃ ಪ್ರದುದ್ರಾವ ಹರೀನ್ದ್ರಮುಖ್ಯಾಃ ಸಮಾರ್ದ್ದಯನ್ನಾಶು ನಿಶಾಚರಾಂಸ್ತದಾ ॥೮.೭೧॥

ರಾವಣನ ಸೈನ್ಯಗಳಿಂದ ಕಪಿಗಳ ಸೈನ್ಯವು ವಿಧವಿಧವಾದ ಆಯುಧಗಳಿಂದ ಧಕ್ಕೆಗೆ ಒಳಗಾಯಿತು. ಆಗ  ಕಪಿಶ್ರೇಷ್ಠರೆಲ್ಲರು ಸೇರಿ ರಾಕ್ಷಸರನ್ನು ಮರ್ದಿಸಿದರು.

ಗಜೋ ಗವಾಕ್ಷೋ ಗವಯೋ ವೃಷಶ್ಚ ಸಗನ್ಧಮಾದಾ ಧನದೇನ ಜಾತಾಃ ।
ಪ್ರಾಣಾದಯಃ ಪಞ್ಚ ಮರುತ್ಪ್ರವೀರಾಃ ಸ ಕತ್ಥನೋ ವಿತ್ತಪತಿಶ್ಚ ಜಘ್ನುಃ ॥೮.೭೨॥

(ಬಾಲಕಾಂಡದ ನಿರೂಪಣೆಯಲ್ಲಿ ಯಾವ ಕಪಿಗಳ ಸ್ವರೂಪವನ್ನು ನಿರೂಪಣೆ ಮಾಡಿರಲಿಲ್ಲವೋ, ಅದನ್ನು ಇಲ್ಲಿ ಪ್ರಾಸಂಗಿಕವಾಗಿ ಆಚಾರ್ಯರು ನಿರೂಪಣೆ ಮಾಡುತ್ತಿದ್ದಾರೆ: )  ಗಜ, ಗವಾಕ್ಷ, ಗವಯ, ವೃಷ, ಗನ್ಧಮಾದಾ, ಇವರೆಲ್ಲರೂ ಕೂಡಾ ಮುಖ್ಯಪ್ರಾಣನ ಮಕ್ಕಳು. ಕುಭೇರನ ‘ಕತ್ಥನ’ ಎಂಬ ಕಪಿರೂಪದಿಂದ ಹುಟ್ಟಿದ ಅವರೆಲ್ಲರೂ, ತಂದೆ ಕತ್ಥನನೊಂದಿಗೆ  ಸೇರಿ, ಸೇನೆಯ ಮುಂದಾಳಾಗಿ ಹೋರಾಡಿದರು.

ಶರೈಸ್ತು ತಾನ್ ಷಡ್ಬಿರಮೋಘವೇಗೈರ್ನ್ನಿಪಾತಯಾಮಾಸ ದಶಾನನೋ ದ್ರಾಕ್ ।
ಅಥಾಶ್ವಿಪುತ್ರೌ ಚ ಸಜಾಮ್ಬವನ್ತೌ ಪ್ರಜಹ್ನತುಃ ಶೈಲವರೈಸ್ತ್ರಿಭಿಸ್ತಮ್ ॥೮.೭೩॥

ಅವರೆಲ್ಲರನ್ನು ರಾವಣನು ಶೀಘ್ರವಾಗಿ ಎಣೆಯಿರದ ವೇಗವುಳ್ಳ, ಆರು ಬಾಣಗಳಿಂದ ಬೀಳಿಸಿದನು. ಅದಾದಮೇಲೆ ಜಾಂಬವಂತನಿಂದ ಕೂಡಿಕೊಂಡ ಅಶ್ವೀದೇವತೆಗಳ ಮಕ್ಕಳಾದ ಮೈಂದ-ವಿವಿದರು ಮೂರು ಪರ್ವತವನ್ನು ಹಿಡಿದು ರಾವಣನನ್ನು ಹೊಡೆಯಲು ಹೋದರು.

ಗಿರೀನ್ ವಿದಾರ್ಯ್ಯಾsಶು ಶರೈರಥಾನ್ಯಾಞ್ಛರಾನ್ ದಶಾಸ್ಯೋsಮುಚದಾಶು ತೇಷು ।
ಏಕೈಕಮೇಭಿರ್ವಿನಿಪಾತಿತಾಸ್ತೇ ಸಸಾರ ತಂ ಶಕ್ರಸುತಾತ್ಮಜೋsಥ ॥೮.೭೪॥

ರಾವಣನು ಶೀಘ್ರವಾಗಿ ಅವರು ಎಸೆದ ಬೆಟ್ಟಗಳನ್ನು ತನ್ನ ಶರಗಳಿಂದ ಸೀಳಿ, ನಂತರ ಬೇರೆ ಬಾಣಗಳನ್ನು ಒಬ್ಬನಿಗೆ ಒಂದೊಂದರಂತೆ ಅವರಲ್ಲಿ ಬಿಟ್ಟನು. ಇದರಿಂದ ಅವರೆಲ್ಲರೂ ಕೆಳಗೆ ಬಿದ್ದರು. ಅದಾದ ಮೇಲೆ, ವಾಲಿಯ ಮಗನಾದ ಅಂಗದನು ರಾವಣನೊಂದಿಗೆ ಯುದ್ಧಕ್ಕೆ ಬಂದನು.

ಶಿಲಾಂ ಸಮಾದಾಯ ತಮಾಪತನ್ತಂ ಬಿಭೇದ ರಕ್ಷೋ ಹೃದಯೇ ಶರೇಣ ।
ದೃಢಾಹತಃ ಸೋsಪ್ಯಗಮದ್ ಧರಾತಳಂ ರವೇಃ ಸುತೋsಥೈನಮಭಿಪ್ರಜಗ್ಮಿವಾನ್ ॥೮.೭೫॥

ದೊಡ್ಡ ಬೆಟ್ಟವನ್ನು ಎತ್ತಿಕೊಂಡು ಬಂದ ಅಂಗದನ ಎದೆಗೆ  ರಾವಣನು ಬಾಣದಿಂದ ಹೊಡೆದನು. ಇದರಿಂದ ಗಟ್ಟಿಯಾಗಿ ಹೊಡೆಯಲ್ಪಟ್ಟವನಾದ ಅಂಗದನು ನೆಲಕ್ಕೆ ಒರಗಿದನು(ಮೂರ್ಛಿತನಾದನು). ಆಗ ಸುಗ್ರೀವನು ರಾವಣನನ್ನು ಎದುರುಗೊಂಡನು.

ತದ್ದಸ್ತಗಂ ಭೂರುಹಮಾಶು ಬಾಣೈರ್ದ್ದಶಾನನಃ ಖಣ್ಡಶ ಏವ ಕೃತ್ವಾ ।
ಗ್ರೀವಾಪ್ರದೇಶೇsಸ್ಯ ಮುಮೋ ಚ ಬಾಣಂ ಭೃಶಾಹತಃ ಸೋsಪಿ ಪಪಾತ ಭೂಮೌ ॥೮.೭೬॥

ಸುಗ್ರೀವನ ಕೈಯಲ್ಲಿರುವ ದೊಡ್ಡ ಮರವನ್ನು ತನ್ನ ಬಾಣಗಳಿಂದ ಕತ್ತರಿಸಿದ ರಾವಣನು, ಅವನ ಕೊರಳಿನ ಭಾಗಕ್ಕೆ ಬಾಣವನ್ನು ಬಿಟ್ಟನು. ಇದರಿಂದ  ಬಲವಾಗಿ ಹೊಡೆಯಲ್ಪಟ್ಟವನಾದ ಸುಗ್ರೀವನೂ ಭೂಮಿಯಲ್ಲಿ ಬಿದ್ದನು.

ಕನ್ನಡ ಪದ್ಯರೂಪ:  https://go-kula.blogspot.com/2018/06/8-70-76.html

No comments:

Post a Comment