ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, June 19, 2018

Mahabharata Tatparya Nirnaya Kannada 8.35-8.42


ಸುಪ್ತಘ್ನೋ ಯಜ್ಞಕೋಪಶ್ಚ ಶಕುನಿರ್ದ್ದೆವತಾಪನಃ ।
ವಿದ್ಯುಜ್ಜಿಹ್ವಃ̐   ಪ್ರಮಾಥೀ ಚ ಶುಕಸಾರಣಸಂಯುತಾಃ ॥೮.೩೫॥

ರಾವಣಪ್ರೇರಿತಾಃ ಸರ್ವಾನ್ ಮಥನ್ತಃ ಕಪಿಕುಞ್ಜರಾನ್ ।
ಅವದ್ಧ್ಯಾ  ಬ್ರಹ್ಮವರತೋ ನಿಹತಾ ರಾಮಸಾಯಕೈಃ ॥೮.೩೬॥

ಬ್ರಹ್ಮವರದಿಂದ ಅವದ್ಯರಾದ ಸುಪ್ತಘ್ನ, ಯಜ್ಞಕೋಪ, ಶಕುನಿ, ದೇವತಾಪನಃ, ವಿದ್ಯುಜ್ಜಿಹ್ವ̐, ಪ್ರಮಾಥೀ, ಶುಕ, ಸಾರಣ ಎಂಬ ಎಂಟು ಜನ ರಾಕ್ಷಸರು, ರಾವಣನಿಂದ ಪ್ರೇರಿತರಾಗಿ, ಕಪಿಗಳನ್ನು ನಾಶಮಾಡುತ್ತಿರಲು, ರಾಮನ ಬಾಣಗಳಿಂದ ಸತ್ತರು.

ಯುದ್ಧೋನ್ಮತ್ತಶ್ಚ ಮತ್ತಶ್ಚ ದೇವಾನ್ತಕನರಾನ್ತಕೌ ।
ತ್ರಿಶಿರಾ ಅತಿಕಾಯಶ್ಚ ನಿರ್ಯ್ಯಯೂ ರಾವಣಾಜ್ಞಯಾ ॥೮.೩೭॥

ಯುದ್ಧೋನ್ಮತ್ತ, ಮತ್ತ, ದೇವಾನ್ತಕ, ನರಾನ್ತಕ, ತ್ರಿಶಿರಾ, ಅತಿಕಾಯ ಎನ್ನುವ ಆರು ಜನ ಮತ್ತೆ ರಾವಣನ ಆಜ್ಞೆಯಂತೆ ಯುದ್ಧಕ್ಕೆಂದು ಬಂದರು.

ನರಾನ್ತಕೋ ರಾವಣಜೋ ಹಯವರ್ಯ್ಯೋಪರಿ ಸ್ಥಿತಃ ।
ಅಭೀಃ ಸಸಾರ ಸಮರೇ ಪ್ರಾಸೋದ್ಯತಕರೋ ಹರೀನ್ ॥೮.೩೮॥

ರಾವಣನ ಮಗ ನರಾಂತಕ ಉತ್ಕೃಷ್ಟವಾದ ಕುದುರೆಯ ಮೇಲೆ ಕುಳಿತಿದ್ದ. ಯಾವುದೇ ಭಯವಿಲ್ಲದೇ, ಪ್ರಾಸಾಯುಧವನ್ನು ಹಿಡಿದುಕೊಂಡು ಕಪಿಗಳನ್ನು ಯುದ್ಧದಲ್ಲಿ ಎದುರುಗೊಂಡ.

ತಂ ದಹನ್ತಮನೀಕಾನಿ ಯುವರಾಜೋsಙ್ಗದೋ ಬಲೀ ।
ಉತ್ಪಪಾತ ನಿರೀಕ್ಷ್ಯಾsಶು ಸಮದರ್ಶಯದಪ್ಯುರಃ ॥೮.೩೯॥

ಸೈನ್ಯವನ್ನೆಲ್ಲಾ ನಾಶಮಾಡುವ ಅವನನ್ನು ಯುವರಾಜನಾಗಿರುವ, ಬಲಿಷ್ಠನಾದ ಅಂಗದನು ನೋಡಿ, ಅವನೆದುರು ನೆಗೆದು ಎದೆಯನ್ನು ತೋರಿದ.

ತಸ್ಯೋರಸಿ ಪ್ರಾಸವರಂ ಪ್ರಜಹಾರ ಸ ರಾಕ್ಷಸಃ ।
ದ್ವಿಧಾ ಸಮಭವತ್ ತತ್ತು  ವಾಲಿಪುತ್ರಸ್ಯ ತೇಜಸಾ ॥೮.೪೦॥

ಆಗ ನರಾಂತಕನು ಅವನ ಎದೆಗೆ ತನ್ನ ಪ್ರಾಸದಿಂದ ಹೊಡೆದ. ಅದಾದರೋ ಅಂಗದನ ಶಕ್ತಿಯಿಂದ ಎರಡಾಗಿ ಸೀಳಿ ಹೋಯಿತು.

ಅಥಾಸ್ಯ ಹಯಮಾಶ್ವೇವ ನಿಜಘಾನ ಮುಖೇ ಕಪಿಃ ।
ಪೇತತುಶ್ಚಾಕ್ಷಿಣೀ ತಸ್ಯ ಸ ಪಪಾತ ಮಮಾರ ಚ ॥೮.೪೧॥

ನರಾಂತಕ ಪ್ರಾಸದಿಂದ ಹೊಡೆದಾಗ ಅಂಗದನು ನರಾಂತಕನ ಕುದುರೆಯ ಮುಖಕ್ಕೆ ಹೊಡೆದ. ಆಗ ಆ ಕುದುರೆಯ ಕಣ್ಣುಗಳೆರಡು  ಕೆಳಗೆ ಬಿದ್ದವು ಮತ್ತು  ಕುದುರೆ ಸಾವನ್ನಪ್ಪಿತು.

ಸ ಖಡ್ಗವರಮಾದಾಯ ಪ್ರಸಸಾರ ರಣೇ ಕಪಿಮ್ ।
ಆಚ್ಛಿದ್ಯ ಖಡ್ಗಮಸ್ಯೈವ ನಿಹತೋ ವಾಲಿಸೂನುನಾ ॥೮.೪೨॥

ಆಗ ನರಾಂತಕನು ಶ್ರೇಷ್ಠವಾದ ಕತ್ತಿಯನ್ನು ತೆಗೆದುಕೊಂಡು, ಯುದ್ಧದಲ್ಲಿ ಅಂಗದನನ್ನು ಹೊಂದಿದನು. ಆಗ ವಾಲೀಪುತ್ರನಾದ ಅಂಗದನು  ಅವನ ಕತ್ತಿಯನ್ನೇ ಸೆಳೆದು ನರಾಂತಕನನ್ನು ಕೊಂದನು.

ಕನ್ನಡ ಪದ್ಯರೂಪ  : https://go-kula.blogspot.com/2018/06/8-35-42.html

No comments:

Post a Comment