ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, June 20, 2018

Mahabharata Tatparya Nirnaya Kannada 8.43-8.52


ಗನ್ಧರ್ವಕನ್ಯಕಾಸೂತೇ ನಿಹತೇ ರಾವಣಾತ್ಮಜೇ ।
ಆಜಗಾಮಾಗ್ರಜಸ್ತಸ್ಯ ಸೋದರ್ಯ್ಯೋ  ದೇವತಾನ್ತಕಃ ॥೮.೪೩॥

ರಾವಣನಿಗೆ ಗಂಧರ್ವ ಕನ್ಯೆಯಲ್ಲಿ ಹುಟ್ಟಿದ ನರಾಂತಕನು ಸಾಯುತ್ತಿರಲು, ಅವನ ಅಣ್ಣನಾದ  ದೇವಾಂತಕನು ಯುದ್ಧಕ್ಕೆ ಬಂದನು.

ತಸ್ಯಾsಪತತ ಏವಾsಶು ಶರವರ್ಷಪ್ರತಾಪಿತಾಃ ।
ಪ್ರದುದ್ರುವುರ್ಭಯಾತ್ ಸರ್ವೇ ಕಪಯೋ ಜಾಮ್ಬವನ್ಮುಖಾಃ ॥೮.೪೪॥

ದೇವಾಂತಕ ನುಗ್ಗಿ ಬರುತ್ತಿರಬೇಕಾದರೆ, ಅವನ ಬಾಣದ ಮಳೆಯಿಂದ ಕಂಗೆಟ್ಟು, ಜಾಂಬವಂತನೂ ಸೇರಿ ಎಲ್ಲಾ  ಕಪಿಗಳು ಅಲ್ಲಿಂದ  ಓಡಿಹೋದರು.

ಸ ಶರಂ ತರಸಾssದಾಯ ರವಿಪುತ್ರಾಯುಧೋಪಮಮ್ ।
ಅಙ್ಗದಂ ಪ್ರಜಹಾರೋರಸ್ಯಪತತ್ ಸ ಮುಮೋಹ ಚ ॥೮.೪೫॥

ದೇವಾಂತಕನು ಯಮನ ದಂಡದಂತೆ ಇರುವ ಬಾಣವನ್ನು ವೇಗವಾಗಿ ತೆಗೆದುಕೊಂಡು, ಅದನ್ನು  ಅಂಗದನ ಎದೆಗೆ ಹೊಡೆದನು. ಅದರಿಂದ ಅಂಗದ ಮೂರ್ಛೆಹೊಂದಿದನು.

ಅಥ ತಿಗ್ಮಾಂಶುತನಯಃ ಶೈಲಂ ಪ್ರಚಲಪಾದಪಮ್ ।
ಅಭಿದುದ್ರಾವ ಸಙ್ಗೃಹ್ಯ ಚಿಕ್ಷೇಪ ಚ ನಿಶಾಚರೇ ॥೮.೪೬॥

ತದನಂತರ ಸೂರ್ಯನ ಮಗನಾದ ಸುಗ್ರೀವನು, ಅಲ್ಲಾಡುತ್ತಿರುವ ಮರಗಳುಳ್ಳ ಪುಟ್ಟದೊಂದು ಗುಡ್ಡವನ್ನು  ಎತ್ತಿಕೊಂಡು ಓಡಿಬಂದು, ಅದನ್ನು ರಾಕ್ಷಸನ ಮೇಲೆ ಎಸೆದನು.

ತಮಾಪತನ್ತಮಾಲಕ್ಷ್ಯದೂರಾಚ್ಛರವಿದಾರಿತಮ್ ।
ಸುರಾನ್ತಕಶ್ಚಕಾರಾsಶು ದಧಾರ ಚ ಪರಂ ಶರಮ್ ॥೮.೪೭॥

ದೂರದಿಂದಲೇ  ಬೀಳುತ್ತಿರುವ ಆ ಬೆಟ್ಟವನ್ನು ನೋಡಿದ ದೇವಾಂತಕನು, ತನ್ನ ಬಾಣದಿಂದ ಅದನ್ನು ಸೀಳಿ ಹಾಕಿ, ಇನ್ನೊಂದು ಬಾಣವನ್ನೂ ಕೂಡಾ ಧರಿಸಿದನು.

ಸ ತಮಾಕರ್ಣ್ಣಮಾಕೃಷ್ಯ ಯಮದಣ್ಡೋಪಮಂ ಶರಮ್ ।
ಅವಿದ್ಧ್ಯದ್ಧೃದಯೇ ರಾಜ್ಞಃ ಕಪೀನಾಂ ಸ ಪಪಾತ ಹ ॥೮.೪೮॥

ಅವನು ಯಮನ ದಂಡದಂತೆ ಇರುವ ಬಾಣವನ್ನು ತನ್ನ ಕಿವಿಯ ತನಕ ಎಳೆದು, ಅದನ್ನು  ಸುಗ್ರೀವನ ಎದೆಗೆ  ಹೊಡೆದ. ದೇವಾಂತಕನ ಬಾಣದ ಪೆಟ್ಟಿನಿಂದ ಸುಗ್ರೀವನು ಕೆಳಗೆ ಭೂಮಿಯ ಮೇಲೆ  ಬಿದ್ದನು.


ಬಲಮಪ್ರತಿಮಂ ವೀಕ್ಷ್ಯಸುರಶತ್ರೋಸ್ತು ಮಾರುತಿಃ ।
ಆಹ್ವಯಾಮಾಸ ಯುದ್ಧಾಯ ಕೇಶವಃ ಕೈಟಭಂ ಯಥಾ ॥೮.೪೯॥

ದೇವಾಂತಕನ ಬಲವನ್ನು ನೋಡಿದ ಹನುಮಂತನು, ಹೇಗೆ ಕೇಶವನು ಕೈಟಭನನ್ನು ಯುದ್ಧಕ್ಕೆ ಆಹ್ವಾನ ಮಾಡಿದನೋ ಹಾಗೇ, ಆತನನ್ನು ಯುದ್ಧಕ್ಕೆ ಆಹ್ವಾನ ಮಾಡಿದನು.

ತಮಾಪತನ್ತಮಾಲೋಕ್ಯ ರಥಂ ಸಹಯಸಾರಥಿಮ್ ।
ಚೂರ್ಣ್ಣಯಿತ್ವಾ ಧನುಶ್ಚಾಸ್ಯ ಸಮಾಚ್ಛಿದ್ಯ ಬಭಞ್ಜ ಹ ॥೮.೫೦॥

ಯುದ್ಧಕ್ಕಾಗಿ ವೇಗವಾಗಿ ಬರುತ್ತಿದ್ದ ದೇವಾಂತಕನನ್ನು ನೋಡಿದ ಮಾರುತಿಯು, ಅವನ  ಕುದುರೆ ಹಾಗು ಸಾರಥಿಯಿಂದ ಕೂಡಿರುವ ರಥವನ್ನು ಪುಡಿಪುಡಿ ಮಾಡಿ, ಅವನ ಧನುಸ್ಸನ್ನು ಕಿತ್ತುಕೊಂಡು ಮುರಿದುಬಿಟ್ಟನು.

ಅಥ ಖಡ್ಗಂ ಸಮಾದಾಯ ಪುರ ಆಪತತೋ ರಿಪೋಃ ।
ಹರಿಃ ಪ್ರಗೃಹ್ಯ ಕೇಶೇಷು ಪಾತಯಿತ್ವೈನಮಾಹವೇ ॥೮.೫೧॥

ಶಿರೋ ಮಮರ್ದ್ದ ತರಸಾ ಪವಮಾನಾತ್ಮಜಃ ಪದಾ ।
ವರದಾನಾದವದ್ಧ್ಯಂ ತಂ ನಿಹತ್ಯ ಪವನಾತ್ಮಜಃ ।
ಸಮೀಡಿತಃ ಸುರವರೈಃ ಪ್ಲವಗೈರ್ವೀಕ್ಷಿತೋ ಮುದಾ ॥೮.೫೨॥

ಆನಂತರ ಅವನ ಖಡ್ಗವನ್ನು ಕಿತ್ತುಕೊಂಡ ಹನುಮಂತನು, ಅವನ ತಲೆಕೂದಲನ್ನು ಹಿಡಿದು, ಕೆಳಗೆ ಬೀಳಿಸಿ, ಕಾಲಿನಿಂದ ಒತ್ತಿ ಅವನ ತಲೆಯನ್ನು ಪುಡಿಗೈದನು.
ಹೀಗೆ ವರದಾನದಿಂದ ಅವದ್ಯನಾಗಿದ್ದ ಅವನನ್ನು ಕೊಂದ ಹನುಮಂತನು ದೇವತೆಗಳಿಂದ ಸ್ತುತನಾದನು. ಕಪಿಗಳಿಂದ ಸಂತೋಷ ಮತ್ತು ಅಭಿಮಾನ ತುಂಬಿದ ನೋಟದಿಂದ ನೋಡಲ್ಪಟ್ಟವನೂ ಆದನು.
ಕನ್ನಡ ಪದ್ಯರೂಪ:  https://go-kula.blogspot.com/2018/06/8-43-52.html

No comments:

Post a Comment