ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, July 12, 2018

Mahabharata Tatparya Nirnaya Kannada 8.152-8.158


ಇತ್ಯುಕ್ತೋ ಜಾಮ್ಬವಾನಾಹ ಹನೂಮನ್ತಮನನ್ತರಮ್ ।
ಯೋsಸೌ ಮೇರೋಃ ಸಮೀಪಸ್ಥೋ ಗನ್ಧಮಾದನಸಙ್ಜ್ಞಿತಃ ।
ಗಿರಿಸ್ತಸ್ಮಾತ್ ಸಮಾಹಾರ್ಯಂ ತ್ವಯೌಷಧಚತುಷ್ಟಯಮ್               ॥೮.೧೫೨॥

“ನಾನಿದ್ದೇನೆ” ಎಂದು ಹನುಮಂತ ಹೇಳಲು, ಜಾಂಬವಂತ ಹನುಮಂತನನ್ನು ಕುರಿತು: “ಮೇರುವಿನ ಸಮೀಪದಲ್ಲಿ ಗನ್ಧಮಾದನ ಎಂಬ ಹೆಸರುಳ್ಳ ಪರ್ವತವಿದೆ. ಅಲ್ಲಿ  ನಾಲ್ಕು ಔಷಧವಿದೆ. ಅದನ್ನು ತರಬೇಕು” ಎಂದು ಹೇಳಿದನು.

ಮೃತಸಞ್ಜೀವನೀ ಮುಖ್ಯಾ ಸನ್ಧಾನಕರಣೀ ಪರಾ ।
ಸವರ್ಣ್ಣಕರಣೀ ಚೈವ ವಿಶಲ್ಯಕರಣೀತಿ ಚ                                    ॥೮.೧೫೩॥

ಮುಖ್ಯವಾಗಿ ಮೃತಸಂಜೀವನಿ ಎನ್ನುವ ಸತ್ತವರನ್ನು ಬದುಕಿಸುವ ಔಷಧ, ಬಿಟ್ಟುಹೋದ ಅಂಗಾಂಗವನ್ನು ಸೇರಿಸುವ ಸನ್ಧಾನಕರಣೀ, ಬಣ್ಣವ್ಯತ್ಯಾಸ ಸರಿ ಪಡಿಸುವ  ಸವರ್ಣ್ಣಕರಣೀ ಮತ್ತು ದೇಹದಲ್ಲಿ ಸೇರಿಕೊಂಡ ಬಾಣಮೊದಲಾದ ಆಯುಧ ಭಾಗವನ್ನು ತೆಗೆಯಲು ವಿಶಲ್ಯಕರಣೀ ಎನ್ನುವ ನಾಲ್ಕು ವಿಧದ ಔಷಧವನ್ನು ಜಾಂಬವಂತ ಉಲ್ಲೇಖಿಸುತ್ತಾನೆ.

ಇತ್ಯುಕ್ತಃ ಸ ಕ್ಷಣೇನೈವ ಪ್ರಾಪತದ್ ಗನ್ಧಮಾದನಮ್ ।
ಅವಾಪ ಚಾಮ್ಬರಚರೋ ರಾಮಮುಕ್ತಃ ಶರೋ ಯಥಾ                   ॥೮.೧೫೪॥

ಈರೀತಿಯಾಗಿ ಹೇಳಲ್ಪಟ್ಟ ಹನುಮಂತನು ಆ ಕ್ಷಣದಲ್ಲಿಯೇ, ರಾಮ ಬಿಟ್ಟ ಬಾಣ ಹೇಗೆ ವೇಗದಿಂದ ಹೋಗುತ್ತದೋ ಹಾಗೇ ಗನ್ಧಮಾದನವನ್ನು ಕುರಿತು ಆಕಾಶದಲ್ಲಿ  ನೆಗೆದನು.

ಅನ್ತರ್ಹಿತಾಶ್ಚೌಷಧೀಸ್ತು ತದಾ ವಿಜ್ಞಾಯ ಮಾರುತಿಃ ।
ಉದ್ಬಬರ್ಹ ಗಿರಿಂ ಕ್ರೋಧಾಚ್ಛತಯೋಜನಮಣ್ಡಲಮ್                  ॥೮.೧೫೫॥

ಔಷಧಗಳೆಲ್ಲವೂ ಅಡಗಿಕೊಂಡಿವೆ ಎಂದು ತಿಳಿದ ಹನುಮಂತನು, ನೂರು ಯೋಜನಾ ಸುತ್ತಳತೆ ಇರುವ ಬೆಟ್ಟವನ್ನು ಸಿಟ್ಟಿನಿಂದ ಎತ್ತಿದನು.

ಸ ತಂ ಸಮುತ್ಪಾಟ್ಯ ಗಿರಿಂ ಕರೇಣ ಪ್ರತೋಳಯಿತ್ವಾ ಬಲದೇವಸೂನುಃ ।
ಸಮುತ್ಪಾತಾಮ್ಬರಮುಗ್ರವೇಗೋ ಯಥಾ ಹರಿಶ್ಚಕ್ರಧರಸ್ತ್ರಿವಿಕ್ರಮೇ             ॥೮.೧೫೬॥

ಆ ಬೆಟ್ಟವನ್ನು ಕಿತ್ತು ಕೈಯಲ್ಲಿ ಹಿಡಿದ ಹನುಮಂತನು, ಆಕಾಶವನ್ನು ಉಗ್ರವೇಗನಾಗಿ ಜಿಗಿದ. ಯಾವ ರೀತಿ ನಾರಾಯಣನು ವಾಮನಾವತಾರದಲ್ಲಿ, ಮೂರು ಲೋಕವನ್ನು ಅಳೆಯುವಾಗ, ಎಷ್ಟು ವೇಗವಾಗಿ ವ್ಯಾಪಿಸಿದ್ದನೋ  ಆ ರೀತಿಯ ವೇಗದಲ್ಲಿ ಹನುಮಂತ ಜಿಗಿದ.

ಅವಾಪ ಚಾಕ್ಷ್ಣೋಃ ಸ ನಿಮೇಷಮಾತ್ರತೋ ನಿಪಾತಿತಾ ಯತ್ರ ಕಪಿ ಪ್ರವೀರಾಃ ।
ತಚ್ಛೈಲವಾತಸ್ಪರ್ಶಾತ್ ಸಮುತ್ಥಿತಾಃ ಸಮಸ್ತಶೋ ವಾನರಯೂಥಪಾಃ ಕ್ಷಣಾತ್  ॥೮.೧೫೭॥

ನಿಮಿಷಮಾತ್ರದಲ್ಲಿ ಎಲ್ಲಿ ಕಪಿಗಳು ಬಿದ್ದಿದ್ದರೋ ಆ ಸ್ಥಳಕ್ಕೆ ಹನುಮಂತ ಬಿಟ್ಟವನ್ನು ಕೈಯಲ್ಲಿ ಹಿಡಿದು ಬಂದ. ಆ ಬೆಟ್ಟವನ್ನು  ಬಳಸಿದ  ಗಾಳಿಯ ಸ್ಪರ್ಶದಿಂದ, ಕ್ಷಣಮಾತ್ರದಲ್ಲಿ ಕಪಿನಾಯಕರು ಎದ್ದು ನಿಂತರು.

ಅಪೂಜಯನ್ಮಾರುತಿಮುಗ್ರಪೌರುಷಂ ರಘೂತ್ತಮೋsಸ್ಯಾನುಜನಿಸ್ತಥಾsಪರೇ ।
ಪಪಾತ ಮೂರ್ಧ್ನ್ಯಸ್ಯ ಚ ಪುಷ್ಪಸನ್ತತಿಃ ಪ್ರಮೋದಿತೈರ್ದೇವವರೈರ್ವಿಸರ್ಜ್ಜಿತಾ ॥೮.೧೫೮॥

ಆ ರೀತಿ ಉಗ್ರವಾದ ಪರಾಕ್ರಮವುಳ್ಳ ಹನುಮಂತನನ್ನು ರಾಮಚಂದ್ರ, ಲಕ್ಷಣ, ಸುಗ್ರೀವ ಮೊದಲಾದವರು ಕೊಂಡಾಡಿದರು. ಸಂತಸಗೊಂಡ ದೇವತೆಗಳು ಮಾಡಿದ  ಪುಷ್ಪವೃಷ್ಟಿ ಹನುಮಂತನ ತಲೆಯಮೇಲೆ ಬಿತ್ತು.

ಕನ್ನಡ ಪದ್ಯರೂಪ:  https://go-kula.blogspot.com/2018/07/8-152-158.html

No comments:

Post a Comment