ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 1, 2020

Mahabharata Tatparya Nirnaya Kannada 17192_17201

ಪತಿಂ ಸುಪೂರ್ಣ್ಣಯೌವನಂ ನಿರೀಕ್ಷ್ಯತಾಂ ವಿಷಜ್ಜತೀಮ್ ।

ಉವಾಚ ಕಾರ್ಷ್ಣ್ಣಿರಮ್ಬ ತೇ ಕುಚೇಷ್ಟಿತಂ ಕಥಂ ನ್ವಿತಿ ॥೧೭.೧೯೨॥

 

ಪೂರ್ಣಯೌವನವನ್ನು ಪಡೆದ ಮನ್ಮಥನನ್ನು ಕಂಡು ನಾಚಿಕೊಳ್ಳುತ್ತಿರುವ ರತಿಯನ್ನು ಕುರಿತು: ‘ಅಮ್ಮಾ, ಏಕೆ ಈರೀತಿ ಕೆಟ್ಟಚೇಷ್ಟೆ ಮಾಡುತ್ತಿದ್ದೀಯಾ’ ಎಂದು ಕಾರ್ಷ್ಣಿ(ಕೃಷ್ಣಪುತ್ರನಾದ ಪ್ರದ್ಯುಮ್ನ) ಪ್ರಶ್ನಿಸುತ್ತಾನೆ.

 

ಜಗಾದ ಸಾsಖಿಲಂ ಪತೌ ತದಸ್ಯ ಜನ್ಮ ಚಾsಗತಿಮ್ ।

ತತೋsಗ್ರಹೀತ್ ಸ ತಾಂ ಪ್ರಿಯಾಂ ರತಿಂ ರಮಾಪತೇಃ  ಸುತಃ ॥೧೭.೧೯೩॥

 

ಪ್ರದ್ಯುಮ್ನನ ಪ್ರಶ್ನೆಗೆ ಉತ್ತರಿಸಿದ ರತಿ,  ಅವನ ಜನ್ಮವನ್ನೂ, ಅವನು ಬಂದ ಕಾರಣವನ್ನು, ಹೀಗೆ ಎಲ್ಲವನ್ನೂ ತನ್ನ  ಗಂಡನಿಗೆ ಹೇಳಿದಳು. ತದನಂತರ ಪರಮಾತ್ಮನ ಮಗನಾದ ಪ್ರದ್ಯುಮ್ನನು ರತಿಯನ್ನು ತನ್ನ ಪ್ರಿಯೆಯನ್ನಾಗಿ ಸ್ವೀಕರಿಸಿದನು.

[ಈ ಕುರಿತಾದ ವಿವರಣೆ ಹರಿವಂಶದಲ್ಲಿ(೧೦೪.೨೪-೨೫) ಕಾಣಸಿಗುತ್ತದೆ: ‘ನ ತ್ವಂ ಮಮ ಸುತಃ ಕಾಂತ ನಾಪಿ ತೇ ಶಮ್ಬರಃ ಪಿತಾ । .... ಪುತ್ರಸ್ತ್ವಂ ವಾಸುದೇವಸ್ಯ ರುಗ್ಮಿಣ್ಯಾನಂದವರ್ಧನಃ  । ದಿವಸೇ ಸಪ್ತಮೇ ಬಾಲೋ ಜಾತಮಾತ್ರೋsಪವಾಹಿತಃ’

ಇನ್ನು ಭಾಗವತದಲ್ಲೂ (೧೦.೬೮.೧೫) ಈ ವಿವರಣೆ ಕಾಣಸಿಗುತ್ತದೆ: ‘ಭವಾನ್ ನಾರಾಯಣಸುತಃ  ಶಮ್ಬರೇಣಾsಹೃತೋ ಗೃಹಾತ್ । ಅಹಂ ತೇsಧಿಕೃತಾ ಪತ್ನೀ ರತಿಃ ಕಾಮೋ ಭವಾನ್ ಪ್ರಭೋ’]

 

ದದೌ ಚ ಮನ್ತ್ರಮುತ್ತಮಂ ಸಮಸ್ತಮಾಯಿನಾಶಕಮ್ ।

ಭೃಗೂತ್ಥರಾಮದೈವತಂ ರತಿರ್ಹರೇಃ ಸುತಾಯ ಸಾ ॥೧೭.೧೯೪॥

 

 

ರತಿಯು, ಎಲ್ಲಾ ಮಾಯೆಯನ್ನೂ ನಾಶಮಾಡುವ ಶಕ್ತಿಯುಳ್ಳ,  ಪರಶುರಾಮನೇ ದೇವತೆಯಾಗಿರುವ, ಉತ್ಕೃಷ್ಟವಾದ ಮಂತ್ರವನ್ನು ಪ್ರದ್ಯುಮ್ನನಿಗೆ ಕೊಟ್ಟಳು.

 

ತತಃ ಸ್ವದಾರಧರ್ಷಕಂ ಸಮಾಹ್ವಯದ್ ಯುಧೇsಙ್ಗಜಃ ।

ಸ ಶಮ್ಬರಂ ಸ ಚೈತ್ಯ ತಂ ಯುಯೋಧ ಶಕ್ತಿತೋ ಬಲೀ ॥೧೭.೧೯೫॥

 

ತದನಂತರ, ಪರಮಾತ್ಮನ ಅಂಗದಿಂದ ಹುಟ್ಟಿದ ಪ್ರದ್ಯುಮ್ನನು, ತನ್ನ ಹೆಂಡತಿಯನ್ನು ಇಷ್ಟು ದಿನ ಬಲಾತ್ಕಾರ ಮಾಡಿದ ಶಮ್ಬರನನ್ನು ಹೊಂದಿ, ಅವನನ್ನು ಯುದ್ಧಕ್ಕೆ ಕರೆದನು. ಶಕ್ತಿಯಿಂದ ಬಲಿಷ್ಠನಾಗಿ ಅವನೊಂದಿಗೆ ಯುದ್ಧಮಾಡಿದನು ಕೂಡಾ.

 

ಸ ಚರ್ಮ್ಮಖಡ್ಗಧಾರಿಣಂ ವರಾಸ್ತ್ರಶಸ್ತ್ರಪಾದಪೈಃ ।

ಯದಾ ನ ಯೋದ್ಧುಮಾಶಕದ್ಧರೇಃ ಸುತಂ ನ ದೃಶ್ಯತೇ ॥೧೭.೧೯೬॥

 

ಖಡ್ಗ ಹಾಗೂ ಚರ್ಮಧಾರಿಯಾಗಿರುವ, ಅಸ್ತ್ರ, ಶಸ್ತ್ರ, ಪಾದಪಗಳಿಂದ ಯುದ್ಧಮಾಡುವ ಪರಮಾತ್ಮನ ಮಗನೊಂದಿಗೆ ಯುದ್ಧಮಾಡಲು ಶಮ್ಬರನು ಯಾವಾಗ ಸಮರ್ಥನಾಗಲಿಲ್ಲವೋ, ಆಗ ಅವನು ತನ್ನ ಮಾಯಾವಿದ್ಯೆಯನ್ನು ಬಳಸಿ ಅದೃಶ್ಯನಾದನು.

 

ಸಹಸ್ರಮಾಯಮುಲ್ಬಣಂ ತ್ವದೃಶ್ಯಮಮ್ಬರಾದ್ ಗಿರೀನ್ ।

ಸೃಜನ್ತಮೇತ್ಯ ವಿದ್ಯಯಾ ಜಘಾನ ಕೃಷ್ಣನನ್ದನಃ ॥೧೭.೧೯೭॥

 

ಪ್ರದ್ಯುಮ್ನನು ಸಾವಿರಾರು ಕುಟಿಲ ವಿದ್ಯೆಗಳುಳ್ಳ, ಕಣ್ಣಿಗೆ ಕಾಣದೆ ಎಲ್ಲೋ ಆಕಾಶದಿಂದ ಬಂಡೆಗಳನ್ನು ತನ್ನೆಡೆಗೆ ಎಸೆಯುವ ಶಮ್ಬರಾಸುರನನ್ನು, ರತಿಯಿಂದ ಕೊಡಲ್ಪಟ್ಟ ಪರಶುರಾಮ  ದೇವಾತ್ಮಕವಾದ ವಿದ್ಯೆಯನ್ನು ಬಳಸಿ ಕೊಂದನು.

 

ಸ ವಿದ್ಯಯಾ ವಿನಾಶಿತೋರುಮಾಯ ಆಶು ಶಮ್ಬರಃ ।

ನಿಕೃತ್ತಕನ್ಧರೋsಪತದ್ ವರಾಸಿನಾsಮುನಾ ಕ್ಷಣಾತ್ ॥೧೭.೧೯೮॥

 

ಆ ಶಮ್ಬರನು  ತನ್ನ ಕುಟಿಲ ವಿದ್ಯೆಗಳನ್ನೆಲ್ಲವನ್ನೂ ಕಳೆದುಕೊಂಡು, ಪ್ರದ್ಯುಮ್ನನ ಕತ್ತಿಯಿಂದ ಕತ್ತರಿಸಲ್ಪಟ್ಟ ಕತ್ತುಳ್ಳವನಾಗಿ ಕೆಳಗೆ ಬಿದ್ದನು.  

 

ನಿಹತ್ಯ ತಂ ಹರೇಃ ಸುತಃ ತಯೈವ ವಿದ್ಯಯಾsಮ್ಬರಮ್ ।

ಸಮಾಸ್ಥಿತಃ ಸ್ವಭಾರ್ಯ್ಯಯಾ ಸಮಂ ಕುಷಸ್ಥಲೀಂ ಯಯೌ ॥೧೭.೧೯೯॥

 

ಈರೀತಿ ಶಮ್ಬರನನ್ನು ಕೊಂದ ಪ್ರದ್ಯುಮ್ನನು, ಅದೇ ವಿದ್ಯೆಯನ್ನು ಬಳಸಿ, ಆಕಾಶವನ್ನು ಏರಿ, ತನ್ನ ಹೆಂಡತಿಯೊಂದಿಗೆ ಕೂಡಿಕೊಂಡು ದ್ವಾರಕೆಗೆ ತೆರಳಿದನು.

 

 

ಸಮಸ್ತವೇದಿನೋರ್ಮ್ಮುನಿರ್ನ್ನರಾನ್ ವಿಡಮ್ಬಮಾನಯೋಃ ।

ರಮಾರಮೇಶಯೋಃ ಸುತಂ ಜಗಾದ ತಂ ಸ್ಮ ನಾರದಃ ॥೧೭.೨೦೦॥

 

ಎಲ್ಲವನ್ನೂ ಬಲ್ಲ, ನರರನ್ನು ಅನುಕರಿಸುತ್ತಿರುವ ರಮಾ-ರಮೇಶರಿಗೆ ನಾರದರು, ಪ್ರದ್ಯುಮ್ನ ಅವರ ಮಗ ಎಂದು ಹೇಳಿದರು.

 

ಸ ರುಗ್ಮಿಣೀಜನಾರ್ದ್ದನಾದಿಭಿಃ ಸರಾಮಯಾದವೈಃ ।

ಪಿತಾಮಹೇನ ಚಾsದರಾತ್ ಸುಲಾಳಿತೋsವಸತ್ ಸುಖಮ್ ॥೧೭.೨೦೧॥

 

ಪ್ರದ್ಯುಮ್ನನು ರಾಮನಿಂದ ಕೂಡಿದ ಯಾದವರಿಂದ, ರುಗ್ಮಿಣಿ-ಜನಾರ್ದನ ಮೊದಲಾದವರಿಂದ, ತಾತನಿಂದಲೂ(ವಸುದೇವನಿಂದಲೂ) ಕೂಡಾ ಅತ್ಯಂತ ಗೌರವಿಸಲ್ಪಟ್ಟು, ಸುಖವಾಗಿ ವಾಸಮಾಡಿದ.

 


No comments:

Post a Comment