ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 23, 2020

Mahabharata Tatparya Nirnaya Kannada 1863_1868

 

ಕುಮಾರಾನ್ ಗ್ರಹಣೇಪ್ಸೂಮ್ಸ್ತಾನುಪಯಾತಾನುದೀಕ್ಷ್ಯ ಸಃ ।

ಅಕ್ಷೋಹಿಣೀತ್ರಿತಯಯುಙ್ ನಿಸ್ಸೃತೋ ದ್ರುಪದೋ ಗೃಹಾತ್ ॥೧೮.೬೩॥

 

ಆ ದ್ರುಪದರಾಜನು ತನ್ನನ್ನು ಹಿಡಿಯಬೇಕೆಂದು ಬಯಸಿ ಬಂದಿರುವ ಕುಮಾರರನ್ನು ಕಂಡು, ಮೂರು ಅಕ್ಷೋಹಿಣಿ ಸೈನ್ಯದಿಂದ ಕೂಡಿದವನಾಗಿ ಮನೆಯಿಂದ ಹೊರಬಂದನು.

 

ತೇ ಶರೈರಭಿವರ್ಷನ್ತಃ ಪರಿವಾರ್ಯ್ಯ ಕುಮಾರಕಾನ್ ।

ಅರ್ದ್ದಯಾಮಾಸುರುದ್ವೃತ್ತಾನ್ ಸ್ತ್ರಿಯೋ ಬಾಲಾಶ್ಚ ಸರ್ವಶಃ ॥೧೮.೬೪॥

 

ದ್ರುಪದನ ಸೈನಿಕರು ಈ ಕುಮಾರಕರನ್ನು ಸುತ್ತುವರಿದು ಬಾಣಗಳಿಂದ ಪೀಡಿಸುತ್ತಾ, ನಲುಗಿ ಹೋಗುವಂತೆ ಮಾಡಿದರು. ಸೈನಿಕರಿಂದ ತಪ್ಪಿಸಿಕೊಂಡವರನ್ನು ಸ್ತ್ರೀಯರು, ಬಾಲಕರು, ಎಲ್ಲರೂ ಕೂಡಾ ಪೀಡಿಸಿದರು. 

 

ಹರ್ಮ್ಯಸಂಸ್ಥಾಃ ಸ್ತ್ರಿಯೋ ಬಾಲಾ ಗ್ರಾವಭಿರ್ಮ್ಮುಸಲೈರಪಿ ।

ಅತ್ಯರ್ತ್ಥಮರ್ದ್ದಯಾಮಾಸುಃ ಕುಮಾರಾನ್ ಸುಸುಖೇಧಿತಾನ್ ॥೧೮.೬೫॥

 

ಅತ್ಯಂತ ಸುಖವಾಗಿ ಬೆಳೆದ ಈ ಕುಮಾರಕರನ್ನು ಮನೆಯಲ್ಲಿರತಕ್ಕಂತಹ ಸ್ತ್ರೀಯರು, ಬಾಲರು, ಎಲ್ಲರೂ ಕೂಡಾ, ಕಲ್ಲುಗಳಿಂದಲೂ, ಒನಕೆಗಳಿಂದಲೂ, ಚನ್ನಾಗಿ ಪೀಡಿಸಿದರು. 

 

ದ್ರುಪದಸ್ಯ ವರೋ ಹ್ಯಸ್ತಿ ಸೂರ್ಯ್ಯದತ್ತಸ್ತಪೋಬಲಾತ್ ।

ಆ ಯೋಜನಾತ್ ಪುರಮುಪ ನ ತ್ವಾ ಜೇಷ್ಯತಿ ಕಶ್ಚನ ॥೧೮.೬೬॥

 

ದ್ರುಪದನಿಗೆ ತಪೋಬಲದಿಂದ ಸೂರ್ಯನಿಂದ ಕೊಟ್ಟ ವರವಿದೆ. ‘ನಗರದ ಒಂದು ಯೋಜನದ ತನಕ ನಿನ್ನನ್ನು ಯಾರೂ ಗೆಲ್ಲುವುದಿಲ್ಲ’ ಎನ್ನುವ ವರ.

 

ಇತಿ ತೇನ ವರೇಣೈವ ಸುಖಸಂವರ್ದ್ಧಿತಾಶ್ಚ ತೇ ।

ಭಗ್ನಾಃ ಕುಮಾರಾ ಆವೃತ್ಯ ದುದ್ರುವುರ್ಯ್ಯತ್ರ ಪಾಣ್ಡವಾಃ  ॥೧೮.೬೭ ॥

 

ಈರೀತಿಯಾದ ಆ ವರದಿಂದಲೂ ಜೊತೆಗೆ  ಸುಖವಾಗಿ ಬೆಳೆದಿದ್ದ ಕಾರಣದಿಂದಲೂ, ಸೋಲುಂಡ ಕುಮಾರಕರು, ತಿರುಗಿ ಪಾಂಡವರಿದ್ದಲ್ಲಿಗೆ ಓಡಿದರು.

 

ಸ್ತ್ರೀಬಾಲಾವೃದ್ಧಸಹಿತೈಃ ಪಾಞ್ಚಾಲೈರಪ್ಯನುದ್ರುತಾಃ ।

ಭೀಮಾರ್ಜ್ಜುನೇತಿ ವಾಶನ್ತೋ ಯಯುರ್ಯ್ಯತ್ರ ಸ್ಮ ಪಾಣ್ಡವಾಃ ॥೧೮.೬೮॥

 

ಸ್ತ್ರೀ-ಬಾಲ-ವೃದ್ಧರಿಂದ ಕೂಡಿರುವ ಸೈನಿಕರಿಂದ ಓಡಿಸಲ್ಪಟ್ಟ ಅವರು, ‘ಭೀಮಾ’  ‘ಅರ್ಜುನಾ’  ಎಂದು ಕೂಗುತ್ತಾ ಪಾಂಡವರಿದ್ದಲ್ಲಿಗೆ ಬಂದರು.

No comments:

Post a Comment