ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 8, 2020

Mahabharata Tatparya Nirnaya Kannada 17243_17248

 

ಹರೌ ತು ಪುಷ್ಕರಂ ಗತೇ ಮುನೀಶ್ವರೈಃ ಸಮರ್ಚ್ಚಿತೇ ।

ಸಮೀಯತುಶ್ಚ ತಾವುಭಾವಥಾತ್ರ ಹಂಸಡೀಭಕೌ ॥೧೭.೨೪೩॥

 

ಮುನಿಗಳಿಂದ ಕೂಡಿದ ಶ್ರೀಕೃಷ್ಣನು ಅರ್ಚಿತನಾಗಿ ಪುಷ್ಕರಕ್ಕೆ ಬರಲು, ಅಲ್ಲಿಗೆ ಹಂಸ-ಡಿಭಕರೂ ಕೂಡಾ ಬಂದರು.

[ಇಲ್ಲಿ ನಾವು ಡೀಭಕ ಎನ್ನುವ ನಾಮ ಪ್ರಯೋಗವನ್ನು ಕಾಣುತ್ತೇವೆ. ಯಾವರೀತಿ ‘ಹನುಮಾನ್’ ಹಾಗು ‘ಹನೂಮಾನ್’ ಎರಡೂ ಆಂಜನೇಯನನ್ನೇ ಹೇಳುತ್ತವೋ, ಹಾಗೇ ಈ ಪ್ರಯೋಗವೂ ಕೂಡಾ. ಇದು ನಾಮ ವಿಭ್ರಾಂತವಷ್ಟೇ‘. ಅಥ ತಂ ಹಂಸಡಿಭಯೋರ್ಶಯಾಮಾಸ ಸಾತ್ಯಕಿಮ್   ಎನ್ನುವ ಹರಿವಂಶದ ವಾಕ್ಯದಿಂದ ಇಲ್ಲಿ ಹೇಳಿರುವುದು ಡಿಭಕನ ಕುರಿತಾಗಿಯೇ ಎನ್ನುವುದು ಸ್ಪಷ್ಟವಾಗುತ್ತದೆ].  

 

ಸ ಬ್ರಹ್ಮದತ್ತನಾಮಕೋsತ್ರ ತತ್ಪಿತಾsಪ್ಯುಪಾಯಯೌ ।

ಸಮಾಗತೌ ಚ ಭೂತಕೌ ಶಿವಸ್ಯ ಯೌ ಪುರಸ್ಸರೌ ॥೧೭.೨೪೪॥

 

ಆ ಪುಷ್ಕರಕ್ಕೆ ಹಂಸ-ಡಿಭಕರ ತಂದೆಯಾದ ಬ್ರಹ್ಮದತ್ತನೂ(ಸಾಲ್ವನೂ)   ಕೂಡಾ ಬಂದನು. ಶಿವನ ಎರಡು ಭೂತಗಳೂ(ಮಹೋದರ ಮತ್ತು ಕುಣ್ಡಧಾರಿ) ಕೂಡಾ ಪುಷ್ಕರಕ್ಕೆ ಬಂದವು.  

 

ವಿಚಕ್ರನಾಮಕೋsಸುರಃ ಪುರಾ ವಿರಿಞ್ಚತೋ ವರಮ್ ।

ಅವದ್ಧ್ಯತಾಮಜೇಯತಾಮವಾಪ್ಯ ಬಾಧತೇ ಸುರಾನ್ ॥೧೭.೨೪೫॥

 

ಸ ಚಾಭವತ್ ತಯೋಃ ಸಖಾ ಸಹಾಯಕಾಮ್ಯಯಾssಗಮತ್ ।

ಹಿಡಿಮ್ಬರಾಕ್ಷಸೋsಪಿ ಯಃ ಪುರಾssಪ ಶಙ್ಕರಾದ್ ವರಮ್ ॥೧೭.೨೪೬॥

 

ನ ಜೀಯಸೇ ನ ವದ್ಧ್ಯಸೇ ಕುತಶ್ಚನೇತಿ ತೋಷಿತಾತ್ ।

ಸ ಚೈತಯೋಃ ಸಖಾsಭವತ್ ಸಮಾಜಗಾಮ ತತ್ರ ಚ ॥೧೭.೨೪೭॥

 

ಬ್ರಹ್ಮನಿಂದ ಅವಧ್ಯತ್ವವನ್ನೂ, ಅಜೇಯತ್ವವನ್ನೂ ಪಡೆದ ವಿಚಕ್ರಎಂಬ ಅಸುರನೊಬ್ಬ, ದೇವತೆಗಳನ್ನು ಪೀಡಿಸುತ್ತಿದ್ದ. 

ಅವನಾದರೋ, ತನ್ನ ಗೆಳೆಯರಿಬ್ಬರಿಗೆ(ಹಂಸ-ಡಿಭಕರಿಗೆ) ಸಹಾಯ ಮಾಡಬೇಕೆಂಬ ಬಯಕೆಯಿಂದ ಅಲ್ಲಿಗೆ ಬಂದ. ಹಿಡಿಮ್ಬನೂ ಕೂಡಾ ಬಂದ. ಈ ಹಿಡಿಮ್ಬ ಹಿಂದೆಯೇ ‘ಯಾರಿಂದಲೂ  ನೀನು ಸೋಲುವುದಿಲ್ಲ ಮತ್ತು  ಕೊಲ್ಲಲ್ಪಡುವುದಿಲ್ಲ’ ಎಂದು ಸಂತುಷ್ಟನಾದ ಶಂಕರನಿಂದ ವರವನ್ನು ಪಡೆದಿದ್ದ. ಅವನೂ ಕೂಡಾ ಇವರಿಬ್ಬರ ಗೆಳೆಯನಾಗಿದ್ದುದರಿಂದ ಪುಷ್ಕರಕ್ಕೆ ಬಂದ.

 

ಅಕ್ಷೋಹಿಣೀದಶಾತ್ಮಕಂ ಬಲಂ ತಯೋರ್ಬಭೂವ ಹ ।

ವಿಚಕ್ರಗಂ ಷಡಾತ್ಮಕಂ ತಥೈಕಮೇವ ರಾಕ್ಷಸಮ್ ॥೧೭.೨೪೮॥

 

ಹಂಸ-ಡಿಭಕರ   ಹತ್ತು ಅಕ್ಷೋಹಿಣೀಯಾತ್ಮಕವಾಗಿರುವ ಸೈನ್ಯವೂ ಅಲ್ಲಿಗೆ ಬಂದಿತು. ಜೊತೆಗೆ ವಿಚಕ್ರನ  ಆರು ಅಕ್ಷೋಹಿಣಿ ಮತ್ತು ಹಿಡಿಮ್ಬನ ಒಂದು ಅಕ್ಷೋಹಿಣಿ ಸೇನೆ ಕೂಡಾ ಬಂತು.

No comments:

Post a Comment