ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 23, 2020

Mahabharata Tatparya Nirnaya Kannada 1869_1877

 

ತಾನ್ ಪ್ರಭಗ್ನಾನ್ ಸಮಾಲೋಕ್ಯ ಭೀಮಃ ಪ್ರಹರತಾಂ ವರಃ ।

ಆರುರೋಹ ರಥಂ ವೀರಃ ಪುರ ಆತ್ತಶರಾಸನಃ ॥೧೮.೬೯॥

 

ಪ್ರಹಾರದಲ್ಲಿ ಅಗ್ರಗಣ್ಯನಾದ ಭೀಮಸೇನನು ಸೋಲುಂಡ ದುರ್ಯೋಧನಾದಿಗಳನ್ನು ಕಂಡು, ತನ್ನ ಬಿಲ್ಲನ್ನು ಹಿಡಿದು ಮುಂದೆ ನಿಂತು, ರಥವನ್ನೇರಿದನು.

 

ತಮನ್ವಯಾದಿನ್ದ್ರಸುತೋ ಯಮೌ ತಸ್ಯೈವ ಚಕ್ರಯೋಃ ।

ಯುಧಿಷ್ಠಿರಸ್ತು ದ್ರೋಣೇನ ಸಹ ತಸ್ಥೌ ನಿರೀಕ್ಷಕಃ ॥೧೮.೭೦॥

 

ಅರ್ಜುನನು ಭೀಮನನ್ನು ಅನುಸರಿಸಿ ಹೊರಟನು. ನಕುಲ-ಸಹದೇವರು ಅರ್ಜುನನ ರಥಚಕ್ರಗಳ ರಕ್ಷಕರಾಗಿ ನಿಂತು ಅವನನ್ನು ಅನುಸರಿಸಿದರು. ಯುಧಿಷ್ಠಿರನು ದ್ರೋಣಾಚಾರ್ಯರೊಡಗೂಡಿ ನಿರೀಕ್ಷಿಕನಾಗಿ(ಯುದ್ಧವನ್ನು ನೋಡುವವನಾಗಿ) ನಿಂತನು.

 

ಆಯಾನ್ತಮಗ್ರತೋ ದೃಷ್ಟ್ವಾಭೀಮಮಾತ್ತಶರಾಸನಮ್ ।

ದುದ್ರುವುಃ ಸರ್ವಪಾಞ್ಚಾಲಾಃ ವಿವಿಶುಃ ಪುರಮೇವ ಚ ॥೧೮.೭೧॥

 

ಬಿಲ್ಲನ್ನು ಹಿಡಿದು ಮುನ್ನುಗ್ಗಿ ಬರುತ್ತಿರುವ ಭೀಮನನ್ನು ಕಂಡ ಆ ಸ್ತ್ರೀ-ಬಾಲಕರು ಮೊದಲಾದ ಸಮಸ್ತ ಪಾಞ್ಚಾಲರು  ಹಿಂದಕ್ಕೆ  ಓಡಿ  ಪಟ್ಟಣವನ್ನು ಸೇರಿದರು.

 

ದ್ರುಪದಸ್ತ್ವಭ್ಯಯಾದ್ ಭೀಮಂ ಸಪುತ್ರಃ ಸಾರಸೇನಯಾ ।

ಚಕ್ರರಕ್ಷೌ ತು ತಸ್ಯಾsಸ್ತಾಂ ಯುಧಾಮನ್ಯೂತ್ತಮೋಜಸೌ ॥೧೮.೭೨॥

 

ಧಾತ್ರರ್ಯ್ಯಮಾವೇಶಯುತೌ ವಿಶ್ವಾವಸುಪರಾವಸೂ ।

ಸುತೌ ತಸ್ಯ ಮಹಾವೀರ್ಯ್ಯೌ ಸತ್ಯಜಿತ್ ಪೃಷ್ಠತೋsಭವತ್ ॥೧೮.೭೩॥

 

ಸ ಮಿತ್ರಾಂಶಯುತೋ ವೀರಶ್ಚಿತ್ರಸೇನೋ ಮಹಾರಥಃ ।

ಅಗ್ರತಸ್ತು ಶಿಖಣ್ಡ್ಯಾಗಾದ್ ರಥೋದಾರಃ ಶರಾನ್ ಕ್ಷಿಪನ್ ॥೧೮.೭೪॥

 

ದ್ರುಪದನು ಪುತ್ರರಿಂದ ಒಡಗೂಡಿ, ಸೈನಿಕಶಿಕ್ಷಣವನ್ನು ಪಡೆದ ಸೈನಿಕರೊಂದಿಗೆ ಭೀಮನನ್ನು ಎದುರುಗೊಂಡ. ಆ ದ್ರುಪದನ ಚಕ್ರರಕ್ಷಕರಾಗಿ  ಯುಧಾಮನ್ಯು ಮತ್ತು ಉತ್ತಮೋಜಸ್ ಇವರಿಬ್ಬರಿದ್ದರು. ಅವರು ಧಾತ್ರ ಮತ್ತು ಅರ್ಯಮಾ  ಎನ್ನುವ ಹನ್ನೆರಡು ಮಂದಿ ಆದಿತ್ಯರಲ್ಲಿ ಇಬ್ಬರಾದ, ಅವರ ಆವೇಶದಿಂದ ಕೂಡಿದವರಾದ,   ವಿಶ್ವಾವಸು-ಪರಾವಸೂ ಎನ್ನುವ ಗಂಧರ್ವರು. ಅವರಿಬ್ಬರೂ ಮಹಾಬಲವುಳ್ಳ ಮಕ್ಕಳು. ಸತ್ಯಜಿತ್ ಅನ್ನುವವನು ದ್ರುಪದನ ಹಿಂದಿನಿಂದ ರಕ್ಷಣೆ ಮಾಡುವವನಾಗಿದ್ದ. ಅವನು ಮಿತ್ರಾಂಶದಿಂದ ಕೂಡಿರುವ ಚಿತ್ರಸೇನ ಎನ್ನುವ ಗಂಧರ್ವ.  ಮುಂದೆ ರಥಿಗಳಲ್ಲೇ ಶ್ರೇಷ್ಠನಾದ  ಶಿಖಣ್ಡಿಯು ಬಾಣಗಳನ್ನು ಎಸೆಯುತ್ತಾ ಬಂದ.

 

ಜನಮೇಜಯಸ್ತಮನ್ವೇವ ಪೂರ್ವಂ ಚಿತ್ರರಥೋ ಹಿ ಯಃ ।

ತ್ವಷ್ಟುರಾವೇಶಸಂಯುಕ್ತಃ ಸ ಶರಾನಭ್ಯವರ್ಷತ ॥೧೮.೭೫॥

 

ಜನಮೇಜಯನು  ಶಿಖಣ್ಡಿಯನ್ನು ಅನುಸರಿಸಿ ಬಂದು ಬಾಣಗಳನ್ನು ಎಸೆದ. ಪೂರ್ವದಲ್ಲಿ ಅವನು ಚಿತ್ರರಥ ಎನ್ನುವ ಗಂಧರ್ವ. ದ್ವಾದಶಾದಿತ್ಯರಲ್ಲಿ ಒಬ್ಬನಾದ ತ್ವಷ್ಟುವಿನ ಆವೇಶ ಇವನಿಗಿತ್ತು.

 

ತಾವುಭೌ ವಿರಥೌ ಕೃತ್ವಾ ವಿಚಾಪೌ ಚ ವಿವರ್ಮ್ಮಕೌ ।

ಭೀಮೋ ಜಘಾನ ತಾಂ ಸೇನಾಂ ಸವಾಜಿರಥಕುಞ್ಜರಾಮ್ ॥೧೮.೭೬॥

 

ಜನಮೇಜಯ-ಶಿಖಣ್ಡಿ ಇಬ್ಬರನ್ನೂ ವಿರಥರನ್ನಾಗಿ, ಬಾಣಹೀನರನ್ನಾಗಿ, ಕವಚಹೀನರನ್ನಾಗಿ ಮತ್ತು ಬಿಲ್ಲಿನಿಂದ ರಹಿತರನ್ನಾಗಿ ಮಾಡಿದ ಭೀಮನು, ಆನೆ, ರಥ ಮತ್ತು ಕುದುರೆ ಇವುಗಳೆಲ್ಲವನ್ನೊಳಗೊಂಡ ಸೇನೆಯನ್ನು  ನಾಶಮಾಡಿದನು.

 

ಅಥೈನಂ ಶರವರ್ಷೇಣ ಯುಧಾಮನ್ಯೂತ್ತಮೋಜಸೌ ।

ಅಭೀಯತುಸ್ತೌ ವಿರಥೌ ಚಕ್ರೇ ಭೀಮೋ ನಿರಾಯುಧೌ ॥೧೮.೭೭॥

 

ತದನಂತರ ಯುಧಾಮನ್ಯು ಮತ್ತು ಉತ್ತಮೋಜಸರು ಬಾಣಗಳ ಮಳೆಗರೆಯುತ್ತಾ ಭೀಮನನ್ನು ಎದುರುಗೊಂಡರು. ಭೀಮನು ಅವರಿಬ್ಬರನ್ನೂ ನಿರಾಯುಧರನ್ನಾಗಿಯೂ, ವಿರಥರನ್ನಾಗಿಯೂ ಮಾಡಿದನು.

No comments:

Post a Comment