ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, July 29, 2023

Mahabharata Tatparya Nirnaya Kannada 29-24-34

[ಚಾತುರ್ವರ್ಣ ಧರ್ಮದ ಕುರಿತು ಹೇಳುತ್ತಾರೆ-]


ತತ್ವವಿಜ್ಞಾಪನಂ ಧರ್ಮ್ಮೋ ವಿಪ್ರಸ್ಯ ತು ವಿಶೇಷತಃ ।

ಶಾರೀರದಣ್ಡಸನ್ತ್ಯಾಗಃ ಪುತ್ರಭಾರ್ಯ್ಯಾದಿಕಾನೃತೇ ॥ ೨೯.೨೪ ॥

 

ತತ್ರಾಪಿ ನಾಙ್ಗಹಾನಿಃ ಸ್ಯಾದ್ ವೇದನಾ ವಾ ಚಿರಂ ನತು ।

ನಚಾರ್ತ್ಥದಣ್ಡಃ ಕರ್ತ್ತವ್ಯೋ ವಿಪ್ರವೈಶ್ಯಾದಿಭಿಃ ಕ್ವಚಿತ್ ॥ ೨೯.೨೫ ॥

 

ತತ್ವವನ್ನು ತಿಳಿಸಿಕೊಡುವುದು ಬ್ರಾಹ್ಮಣರ ಪರಮಧರ್ಮ. ಹೆಂಡತಿ ಮಕ್ಕಳನ್ನು ಬಿಟ್ಟು ಉಳಿದವರಲ್ಲಿ ಶರೀರತಃ ದಂಡನೆ ಕೊಡುವ ಹಕ್ಕು ಬ್ರಾಹ್ಮಣನಿಗಿಲ್ಲ. ಹೆಂಡತಿ ಮಕ್ಕಳಲ್ಲೂ ಕೂಡಾ, ಅಂಗಹಾನಿ ಆಗದಂತೆ, ಹೆಚ್ಚು ನೋವಾಗದಂತೆ ದಂಡನೆ ಮಾಡಬೇಕು. ಬ್ರಾಹ್ಮಣರಾಗಲೀ  ವೈಶ್ಯರಾಗಲೀ ಇನ್ನೊಬ್ಬರಿಗೆ ಅರ್ಥದಂಡ (ಕರ ಅಥವಾ ಹಣದ ದಂಡ) ಹಾಕುವಂತಿಲ್ಲ.  

 

ಶಾರೀರದಣ್ಡವಿಷಯೇ ವೈಶ್ಯಾದೀನಾಂ ಚ ವಿಪ್ರವತ್ ।

ಯಥಾಲಬ್ಧೇನ ವರ್ತ್ತೇತ ಭಿಕ್ಷಯಾ ವಾ ದ್ವಿಜೋತ್ತಮಃ ॥ ೨೯.೨೬ ॥

 

ಶಿಷ್ಯಯಾಜ್ಯೋಪಲಬ್ಧೈರ್ವಾ ಕ್ಷತ್ರಧರ್ಮ್ಮೇಣ ವಾSSಪದಿ ।

ಮಹಾಪದಿ ವಿಶಾಂ ಧರ್ಮ್ಮೈಃ ಕ್ಷತ್ರಿಯಃ ಸುರವಿಪ್ರಯೋಃ ॥ ೨೯.೨೭ ॥

 

ಅನ್ಯತ್ರ ಸರ್ವವಿತ್ತೇನ ವರ್ತ್ತೇತೈತಾಂಶ್ಚ ಪಾಲಯನ್ ।

ವಿರೋಧಿನಃ ಕ್ಷತ್ರಿಯಾಚ್ಚ ಪ್ರಸಹ್ಯೈವ ಹರೇದ್ ಧನಮ್ ॥ ೨೯.೨೮ ॥

 

ಶರೀರಶಿಕ್ಷೆಯ ವಿಚಾರದಲ್ಲಿ ಬ್ರಾಹ್ಮಣರಿಗೆ ಏನನ್ನು ಹೇಳಿದ್ದಾರೋ ಅದೇ ವೈಶ್ಯರಿಗೆ ಮತ್ತು ಇತರರಿಗೆ  ಅನ್ವಯಿಸುತ್ತದೆ.

ಬ್ರಾಹ್ಮಣಶ್ರೇಷ್ಠನು ಸಿಕ್ಕಿದ್ದರಲ್ಲಿ(ಪ್ರಯತ್ನವಿಲ್ಲದೇ ಲಭ್ಯವಾಗಿರುವ ದ್ರವ್ಯದಲ್ಲಿ) ಅಥವಾ ಭಿಕ್ಷೆಬೇಡಿ ಬದುಕಬೇಕು. ಶಿಷ್ಯರು ಕೊಟ್ಟರೆ ಅದರಿಂದ ಹಾಗೂ  ಪೌರೋಹಿತ್ಯ ಮಾಡಿ ಬಂದ ದ್ರವ್ಯದಿಂದಲೂ ಬದುಕಬಹುದು. ಆಪತ್ತಿನಲ್ಲಿ ಕ್ಷತ್ರಿಯರ ಧರ್ಮದಿಂದಲೂ ಬದುಕಬಹುದು. ಬಹಳ ಆಪತ್ತು ಬಂದಾಗ ವ್ಯಾಪಾರಮಾಡಿ ಬದುಕಬಹುದು. ಕ್ಷತ್ರಿಯರು ಬ್ರಾಹ್ಮಣದ್ರವ್ಯ ಮತ್ತು ದೇವದ್ರವ್ಯ ಇಷ್ಟನ್ನು ಬಿಟ್ಟು ಬದುಕಬೇಕು. ಇನ್ನು ಉಳಿದ ಎಲ್ಲರಿಂದ ಹಣವನ್ನು(ಕರವನ್ನು) ಅವರು ತೆಗೆದುಕೊಳ್ಳಬಹುದು. ಕ್ಷತ್ರಿಯನು ಉಳಿದ ಎಲ್ಲರನ್ನೂ ಪಾಲನೆ ಮಾಡಿಕೊಂಡಿರಬೇಕು. ಒಬ್ಬ ಕ್ಷತ್ರಿಯ, ವಿರೋಧಿಯಾಗಿರುವ ಇನ್ನೊಬ್ಬ ಕ್ಷತ್ರಿಯನನ್ನು ಮಣಿಸಿ ದ್ರವ್ಯವನ್ನು ಪಡೆಯಬೇಕು.

 

ಸಾಮಾದಿಕ್ರಮತೋ ಧರ್ಮ್ಮಾನ್ ವರ್ತ್ತಯೇದ್ ದಣ್ಡತೋSನ್ತತಃ ।

ಅಪಲಾಯೀ ಸದಾ ಯುದ್ಧೇ ಸತಾಂ ಕಾರ್ಯ್ಯಮೃತೇ ಭವೇತ್ ॥ ೨೯.೨೯ ॥

 

ಧರ್ಮವನ್ನು ಮೊದಲು ಸಾಮ ನಂತರ ದಾನ ಆಮೇಲೆ  ಭೇದ ಈ ಕ್ರಮದಲ್ಲಿ ರಕ್ಷಿಸಬೇಕು. (ಸಾಮಾದಿಗಳಿಂದ ಧರ್ಮ ಪ್ರವ್ರತ್ತಿಯಾಗದಿದ್ದರೆ) ಕೊನೆಯಲ್ಲಿ ದಂಡದಿಂದಲೇ ಧರ್ಮವನ್ನು ಕಾಪಾಡಬೇಕು. ಸಜ್ಜನರ ಕಾರ್ಯವನ್ನು ಹೊರತುಪಡಿಸಿ ಇತರೆಡೆ ಕ್ಷತ್ರಿಯರು ಯುದ್ಧದಲ್ಲಿ ಪಲಾಯನ ಮಾಡದೇ ಬದುಕಬೇಕು.

 

ಕೃಷಿವಾಣಿಜ್ಯಗೋರಕ್ಷಾಕುಸೀದಂ ವೈಶ್ಯಜೀವನಮ್ ।

ಪರಿಚರ್ಯ್ಯೈವ ಶೂದ್ರಸ್ಯ ವೃತ್ತಿರನ್ಯೇ ಸ್ವಪೂರ್ವವತ್ ॥ ೨೯.೩೦ ॥

 

ಹೊಲ ಊಳುವುದು(ಕೃಷಿ), ವ್ಯಾಪಾರ ಮಾಡುವುದು, ಗೋವುಗಳ ಪಾಲನೆ (ಹೈನುಗಾರಿಕೆ), ಬಡ್ಡೀ ವ್ಯಾಪಾರ, ಇದು ವೈಶ್ಯರ ಜೀವನೋಪಾಯಧರ್ಮ. ಶೂದ್ರವರ್ಣದವರಿಗೆ ಪರಿಚರ್ಯೆಯೇ(ಸೇವಾವೃತ್ತಿಯೇ) ಜೀವನೋಪಾಯವು. ಉಳಿದವರು ತಮ್ಮಿಂದ ಮುಂಚಿನವರಂತೆ(ಕುಲವೃದ್ಧರ ಆಚರಣೆಯಂತೆ) ಬದುಕಬೇಕು.

 

ವರ್ತ್ತೇಯುರ್ಬಾಹ್ಮಣಾದ್ಯಾಶ್ಚ ಕ್ರಮಾತ್ ಪೂಜ್ಯಾ ಹರಿಪ್ರಿಯಾಃ ।

ಹರಿಭಕ್ತಾವನುಚ್ಚಸ್ತು ವರ್ಣ್ಣೋಚ್ಚೋ ನಾತಿಪೂಜ್ಯತೇ । ॥ ೨೯.೩೧ ॥

 

ಬ್ರಾಹ್ಮಣಾದಿಗಳು ಭಕ್ತರಾಗಿದ್ದು, ಪರಮಾತ್ಮನಿಗೆ ಪ್ರಿಯರಾಗಿದ್ದರೆ ಕ್ರಮೇಣ  ಪೂಜ್ಯರಾಗಿರುವರು. ಪರಮಾತ್ಮನ ಬಗ್ಗೆ ಅನಾಸಕ್ತಿ, ಭಕ್ತಿ ಇಲ್ಲದೇ ಇರುವುದು, ತತ್ವ ಚಿಂತನೆ ಮಾಡದಿರುವುದು, ಅಂತವರು  ಹುಟ್ಟಿನಲ್ಲಿ ವರ್ಣೋಚ್ಚನಾಗಿದ್ದರೂ ಕೂಡಾ ಪೂಜ್ಯನಾಗುವುದಿಲ್ಲ.

 

ವಿನಾ ಪ್ರಣಾಮಂ ಪೂಜ್ಯಸ್ತು ವರ್ಣ್ಣಹೀನೋ ಹರಿಪ್ರಿಯಃ ।

ಆದರಸ್ತತ್ರ ಕರ್ತ್ತವ್ಯೋ ಯತ್ರ ಭಕ್ತಿರ್ಹರೇರ್ವರಾ ॥ ೨೯.೩೨ ॥

 

ಪರಮಾತ್ಮನಿಗೆ ಪ್ರಿಯನಾಗಿರುವವನು ವರ್ಣದಿಂದ ಹೀನನಾಗಿದ್ದರೂ, ಅವನಿಗೆ ನಮಸ್ಕಾರ ಮಾಡದೇ, ಪೂರ್ತಿಯಾಗಿ ಅವನನ್ನು ಗೌರವಿಸಬೇಕು, ಸತ್ಕರಿಸಬೇಕು. ಯಾರಲ್ಲಿ ಪರಮಾತ್ಮನ ಭಕ್ತಿ ಶ್ರೇಷ್ಠವಾಗಿರುತ್ತದೋ ಅವರನ್ನು ಆದರದಿಂದ ನೋಡಬೇಕು.

 

ಜ್ಞಾಪನಂ ಕ್ಷತ್ರಿಯಾಣಾಂ ಚ ಧರ್ಮ್ಮೋ ವಿಪ್ರಾಭ್ಯನುಜ್ಞಯಾ ।

ತದಭಾವೇ ತು ವೈಶ್ಯಾನಾಂ ಶೂದ್ರಸ್ಯ ಪರಮಾಪದಿ ॥ ೨೯.೩೩ ॥

 

ತತ್ವಜ್ಞಾನಿಯಾದ ಬ್ರಾಹ್ಮಣರು ಇಲ್ಲದೇ ಹೋದಾಗ, ಬ್ರಾಹ್ಮಣರ ಅನುಜ್ಞೆಯಂತೆ ತತ್ವೋಪದೇಶ ಮಾಡುವುದು ಕ್ಷತ್ರಿಯರ ಧರ್ಮ. (ಇದನ್ನು ಉಪನಿಷತ್ತಿನಲ್ಲಿ ನಾವು ಕಾಣಬಹುದು. ಶ್ರೇಷ್ಠ ಕ್ಷತ್ರಿಯರು ಬ್ರಾಹ್ಮಣರಿಗೆ ಹೇಳುವುದನ್ನು ನಾವಲ್ಲಿ ನೋಡುತ್ತೇವೆ). ತತ್ವೋಪದೇಶ ಮಾಡುವ ಕ್ಷತ್ರಿಯರೂ ಇಲ್ಲದಿದ್ದಾಗ, ವೈಶ್ಯರು ಹೇಳಬಹುದು. ಅತ್ಯಂತ ಆಪತ್ತು ಬಂದಾಗ ಶೂದ್ರನಿಗೆ ತತ್ವವನ್ನು ವಿಜ್ಞಾಪನೆ ಮಾಡುವ ಕರ್ತವ್ಯವಿರುತ್ತದೆ.

 

‘ವರ್ಣ್ಣೇಷ್ವಜ್ಞೇಷ್ವವರ್ಣ್ಣಸ್ತು ನ ಜ್ಞಾನೀ ಸ್ಯಾತ್ ಕಥಞ್ಚನ’ ।

ಇತಿ ಶ್ರುತೇರವರ್ಣ್ಣಸ್ಯ ಜ್ಞಾಪನಪ್ರಾಪ್ತಿರೇವ ನ ॥ ೨೯.೩೪ ॥

 

‘ನಾಲ್ಕೂ ವರ್ಣಗಳು ಅಜ್ಞವಾದರೆ, ಪಂಚಮರು (ಚಂಡಾಲರು,..ಇತ್ಯಾದಿ ವರ್ಣಬಾಹ್ಯರು) ಯಾವ ರೀತಿಯಿಂದಲೂ ಜ್ಞಾನಿಗಳಾಗಲಾರರು ಎನ್ನುವ ವೇದ ವಾಕ್ಯದಂತೆ ಪಂಚಮರು ತತ್ವ ವಿಜ್ಞಾಪನೆ ಮಾಡುವ ಪ್ರಸಂಗವೇ ಇರುವುದಿಲ್ಲ.

No comments:

Post a Comment